ಮಡಿಕೇರಿ, ಡಿ. ೧೩ : ನಗರದ ಮಹದೇವಪೇಟೆಯಲ್ಲಿರುವ ಶ್ರೀರಾಜೇಶ್ವರಿ ವಿದ್ಯಾಲಯದ ವತಿಯಿಂದ ಜ.೧೦ ಮತ್ತು ೧೧ ರಂದು ಎಸ್‌ಆರ್‌ವಿ ಕನೆಕ್ಟ್- ಹಳೆಯ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಲಿದೆ ಎಂದು ಶ್ರೀ ರಾಜೇಶ್ವರಿ ವಿದ್ಯಾಲಯ ಮ್ಯಾನೆಜಿಂಗ್ ಟ್ರಸ್ಟಿ ಸಚಿನ್ ವಾಸುದೇವ್ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದÀ ಅವರು, ನಗರದ ಗಾಂಧಿ ಮೈದಾನದಲ್ಲಿ ಶ್ರೀ ರಾಜೇಶ್ವರಿ ವಿದ್ಯಾಲಯದ ೧೯೯೧ ಬ್ಯಾಚ್‌ನಿಂದ ೨೦೨೪ರವರೆಗಿನ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಅಯೋಜಿಸಲಾಗಿದೆ.

ಕ್ರೀಡಾಕೂಟದಲ್ಲಿ ಕ್ರಿಕೆಟ್ ಹಾಗೂ ವಾಲಿಬಾಲ್ ತಂಡಗಳಿಗೆ ತಲಾ ೮ ಹಾಗೂ ಫುಟ್ಬಾಲ್‌ಗೆ ೧೨ ಪ್ರಾಂಚೈಸಿಗಳಿದ್ದು, ಥ್ರೋಬಾಲ್ ಹಾಗೂ ಶಾಲಾ ಮಟ್ಟದ ಅಂಡರ್ ೧೬ ಬಾಲಕ ಬಾಲಕಿಯರಿಗೆ ೫ಎ ಸೈಡ್ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ. ಅಲ್ಲದೇ ಹಳೆ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಹಳೇ ವಿದ್ಯಾರ್ಥಿ ಸಂಘದ ಖಜಾಂಚಿ ಬೊಟ್ಟೋಳಂಡ ನಿವ್ಯ ಕಾವೇರಮ್ಮ ಮಾತನಾಡಿ, ಓದಿದ ಶಾಲೆ ಹಾಗೂ ಗುರುಗಳನ್ನು ಗೌರವಿಸುವ ಉದ್ದೇಶದಿಂದ, ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಲು. ಹಳೆಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ನಡುವಿನ ಬಾಂಧವ್ಯವನ್ನು ಬಲಪಡಿಸಲು ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕರಿಸುವ ನಿಟ್ಟನಲ್ಲಿ ಶ್ರೀ ರಾಜೇಶ್ವರಿ ಹಳೆ ವಿದ್ಯಾರ್ಥಿಗಳ ಸಂಘವನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪ್ರದೀಪ್ ಕರ್ಕೆರ, ಉಪಾಧ್ಯಕ್ಷರಾಗಿ ಪಂಕಜ, ಕಾರ್ಯದರ್ಶಿಯಾಗಿ ಲೋಹಿತ್ ಎಂ.ಜಿ., ಖಜಾಂಚಿಗಳಾಗಿ ನಿರಂಜನ್ ಮತ್ತು ನಿವ್ಯ ಕಾವೇರಮ್ಮ, ಸಮಿತಿ ಸದಸ್ಯರುಗಳಾಗಿ ಹರೀಶ್, ಕವನ್, ಭೂತಾನೀಸ್, ಚರಣ್ ಕುಮಾರ್, ಅನುಷಾ ಎಂ.ಜಿ., ಅಕೀಬ್, ಎಸ್.ಎ.ಸುಬ್ರಮಣಿ, ಜೈದ್ ಬಿ.ಎಂ., ರಾಬಿನ್, ರಮ್ಯಾ, ಮೊಹಮ್ಮದ್ ಕೈಫ್, ಸುಹೈಲ್, ಜೈನುಲ್ ಅಬ್ದಿ, ಸುನಿಲ್, ವಾಹಿದ್, ಸುಜಿತ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಸಂಘದ ಸದಸ್ಯ ಎಂ.ಎA.ಚರಣ್ ಕುಮಾರ್ ಮಾತನಾಡಿ, ಜ.೧೧ ರಂದು ನಗರದ ಹೊಟೇಲ್ ರಾಜ್‌ದರ್ಶನ್‌ನಲ್ಲಿ ಹಳೆ ವಿದ್ಯಾರ್ಥಿಗಳಿಗಾಗಿ ಸಮ್ಮಿಲನ ಕಾರ್ಯಕ್ರಮ ಹಾಗೂ ಭೋಜನಕೂಟವನ್ನು ಏರ್ಪಡಿಸಲಾಗಿದ್ದು, ಶ್ರೀ ರಾಜೇಶ್ವರಿ ವಿದ್ಯಾಲಯದ ೧೯೯೨ ಬ್ಯಾಚ್‌ನಿಂದ ೨೦೨೪ರ ವಿದ್ಯಾರ್ಥಿಗಳು ಕುಟುಂಬ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಶ್ರೀ ರಾಜೇಶ್ವರಿ ವಿದ್ಯಾಲಯದ ಅಧ್ಯಕ್ಷ ಗೋವಿಂದರಾಜು, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರದೀಪ್ ಕರ್ಕೆರ, ಖಜಾಂಚಿ ನಿರಂಜನ್ ಉಪಸ್ಥಿತರಿದ್ದರು.