ಗೋಣಿಕೊಪ್ಪಲು, ಆ. ೩೧: ಭಾರತದ ಬಹುದೊಡ್ಡ ಕೃಷಿ ಕೈಗಾರಿಕೆಯಾದ ಕಾಫಿ, ಟೀ ಮತ್ತು ರಬ್ಬರ್ ಪ್ಲಾಂಟೇಷನ್ಗಳ ಬೆಳವಣಿಗೆಯಲ್ಲಿ ನೌಕರರ ಶ್ರಮ ಶ್ಲಾಘನೀಯ ಎಂದು ದಕ್ಷಿಣ ಭಾರತದ ದಿ.ಎಸ್ಟೇಟ್ ಸ್ಟಾಫ್ಸ್ಸ್ ಯೂನಿಯನ್ ಆಫ್ ಸೌತ್ ಇಂಡಿಯಾ ಸಂಘ'ದ ಪ್ರಧಾನ ಕಾರ್ಯದರ್ಶಿ ಶಿವಾನಂದ ಸ್ವಾಮಿ ಬಣ್ಣಿಸಿದರು. ಇತ್ತೀಚೆಗೆ ಪಾಲಿಬೆಟ್ಟದ ಟಾಟಾ ಕಂಪೆನಿಯ ಸ್ಟಾಫ್ ಕ್ಲಬ್ನಲ್ಲಿ ಜರುಗಿದ ಕೊಡಗು ಘಟಕದ ೪೫ನೇ ಸರ್ವ ಸದಸ್ಯರ ಸಭೆ ಉದ್ಧೇಶಿಸಿ ಅವರು ಮಾತನಾಡಿದರು.
ವಿಶ್ವದಾದ್ಯಂತ ಘಮಘಮಿಸುವ ಉತ್ಕೃಷ್ಟ ದರ್ಜೆಯ ಕಾಫಿಯನ್ನು ಕೊಡಗು ಜಿಲ್ಲೆ ಉತ್ಪಾದಿಸುವಲ್ಲಿ ಕಾರ್ಮಿಕರು, ನೌಕರರು, ಆಡಳಿತ ವರ್ಗ ಹಾಗೂ ಮಾಲೀಕರ ಪರಿಶ್ರಮ ಕಾರಣ ಎಂದರು.
ಸAಘವು ಕಳೆದ ೫ ದಶಕಗಳಿಂದ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಕಾಫಿ, ಟೀ ಮತ್ತು ರಬ್ಬರ್ ತೋಟಗಳ ಸ್ಟಾಫ್ಸ್ಸ್ ನಾನ್ ಸ್ಟಾಫ್ಸ್ಸ್ಸ್ಸ್ ಹಾಗೂ ಸೂಪರ್ ವೈಸರ್ಗಳಿಗೆ ಪ್ರತಿ ಮೂರು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಒಪ್ಪಂದವನ್ನು ಮಾಡುತ್ತಾ ಬಂದಿದೆ. ೨೦೨೬ ರಿಂದ ಹೊಸ ವೇತನ ಒಪ್ಪಂದಕ್ಕಾಗಿ ಎಲ್ಲರ ಸಲಹೆ ಸೂಚನೆ ಹೊಂದಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೊಡಗು ಘಟಕದ ಸಭೆಯನ್ನು ಚೆರುವಾಳಂಡ ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಿದ್ದು, ಇದೇ ಸಂದರ್ಭ ಕಳೆದ ೨೦ ವರ್ಷಗಳಿಂದ ನೌಕರರ ಕ್ಷೇಮಾಭಿವೃದ್ಧಿಗೆ ಶ್ರಮಿಸಿದ್ದ ಮುರುಳಿ ಮೋಹನ್ ದಾಸ್ ಹಾಗೂ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಮುಂದಿನ ಅವಧಿಗೆ ಅಧ್ಯಕ್ಷರಾಗಿ ಸಿ.ಜಿ. ತಮ್ಮಯ್ಯ ಅವರನ್ನು ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕೆ.ಆರ್. ತುಳಸಿಮಾಲ ಹಾಗೂ ಶಾಂತಿ ನಾಣಯ್ಯ, ಬಿ.ಡಿ. ಕುಶಾಲಪ್ಪ (ಕಾರ್ಯದರ್ಶಿ), ಬಿ.ಎ.ರಾಜೇಶ್ (ಸಹ ಕಾರ್ಯದರ್ಶಿ) ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನಾನ್ ಸ್ಟಾಫ್ಸ್ಸ್ ಮತ್ತು ಸೂಪರ್ ವೈಸರ್ ವಿಭಾಗಕ್ಕೆ ಅಧ್ಯಕ್ಷರಾಗಿ ಕೆ.ಕೆ. ನಾಗೇಶ್, ಕಾರ್ಯದರ್ಶಿಯಾಗಿ ವಾಸು, ಸಹಕಾರ್ಯದರ್ಶಿಯಾಗಿ ನಾಯಕ್ ಮತ್ತು ಲಕ್ಷ್ಮಣ್ ಅವರನ್ನು ಇದೇ ಸಂದರ್ಭ ಅವಿರೋಧ ಆಯ್ಕೆ ಮಾಡಲಾಯಿತು.