ವೀರಾಜಪೇಟೆ: ದೇಹ, ಆತ್ಮ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಶಕ್ತಿ ಯೋಗಕ್ಕಿದೆ ಎಂದು ಡಿವೈಎಸ್ಪಿ ಮಹೇಶ್ ಕುಮಾರ್ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯ ಕಾವೇರಿ ಆಶ್ರಮದಲ್ಲಿ ಶ್ರೀ ಕಾವೇರಿ ಯೋಗಕೇಂದ್ರದ ವತಿಯಿಂದ ಅಂತರರಾಷ್ಟಿçÃಯ ಯೋಗ ದಿನಾಚರಣೆ ಹಾಗೂ ಯೋಗಕೇಂದ್ರದ ೨೬ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿ, ಭಾರತದ ಪ್ರಾಚೀನ ಕಲೆಯೊಂದನ್ನು ಪ್ರಪಂಚ ಒಪ್ಪಿಕೊಂಡಿದೆ. ಯೋಗ ಮಾಡುವುದರಿಂದ ಮನುಷ್ಯನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೆಲವು ಕಡೆಗಳಲ್ಲಿ ಯೋಗ ಕಲಿಸುವುದೇ ಒಂದು ಉದ್ಯೋಗವನ್ನು ಮಾಡಿಕೊಳ್ಳುತ್ತಾರೆ. ಆದರೆ ಶ್ರೀ ಕಾವೇರಿ ಯೋಗ ಕೇಂದ್ರದಲ್ಲಿ ಸೀತಾರಾಮ ರೈ ಅವರು ಉಚಿತವಾಗಿ ಹೇಳಿಕೊಡುವುದು ಉತ್ತಮ ಕಾರ್ಯವಾಗಿದೆ. ಕಲಿತವರು ಮನೆಯಲ್ಲಿರುವ ವರಿಗೂ ಯೋಗದ ಮಹತ್ವವನ್ನು ತಿಳಿಸಿ ಕೊಡುವಂತಾಗಬೇಕು ಎಂದರು.

ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಅವರು ಮಾತನಾಡಿ, ಯೋಗ ಮಾನವನ ಪರಿಪೂರ್ಣ ವಿಜ್ಞಾನವಾಗಿದೆ. ವಿಷ ಹಾಗೂ ವೈಷಮ್ಯದ ಇಂದಿನ ಪರಿಸರದಲ್ಲಿ ಅಮೃತದಂತೆ ಆರೋಗ್ಯದತ್ತ ಕೊಂಡೊಯ್ಯುವ ಏಕೈಕ ಮಾರ್ಗವೆಂದರೆ ಅದು ಯೋಗ ಮಾತ್ರ ಎಂದರು.

ಸ್ತಿçà ರೋಗ ತಜ್ಞೆ ವೈದ್ಯೆ ಡಾ. ಜಯಥ ಪೂಣಚ್ಚ ಅವರು ಮಾತನಾಡಿ, ವಿವಿಧ ರೀತಿಯಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವಲ್ಲಿ ಯೋಗ ಸಹಕಾರಿ. ಯೋಗ ಮಾನವ ಸಮಾಜಕ್ಕೆ ದೊರೆತ ಅತ್ಯಂತ ಶ್ರೇಷ್ಠ ಉಡುಗೊರೆ ಎಂದು ಬಣ್ಣಿಸಿದರು.

ಶ್ರೀ ಕಾವೇರಿ ಯೋಗಕೇಂದ್ರದ ಸ್ಥಾಪಕ ಯೋಗಗುರು ಪ್ರಹ್ಲಾದ್ ಅವರು ಮಾತನಾಡಿ, ಯೋಗದಿಂದ ಮಾನಸಿಕ ದೈಹಿಕ ಆರೋಗ್ಯ ದೃಢವಾಗುತ್ತದೆ. ಯೋಗದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಬೇಕಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾವೇರಿ ಆಶ್ರಮದ ಆತ್ಮಪ್ರಕಾಶಾನಂದ ಪೂರಿ ಸ್ವಾಮೀಜಿ ಸಭೆಯಲ್ಲಿ ಮಾತನಾಡಿದರು. ಈಚೆಗೆ ಅಗಲಿದ ಯೋಗ ಕೇಂದ್ರದ ಹಿರಿಯ ಯೋಗಪಟು ನಿವೃತ್ತ ಯೋಧರಾದ ಬಿದ್ದಂಡ ಗಣಪತಿ ಅವರಿಗೆ ಸಭೆಯ ಆರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಯೋಗ ಪಟುಗಳು ಯೋಗ ಪ್ರದರ್ಶನ ನೀಡಿದರು. ಶ್ರೀ ಕಾವೇರಿ ಯೋಗಕೇಂದ್ರದ ಸ್ಥಾಪಕ ಯೋಗಗುರು ಪ್ರಹ್ಲಾದ್ ಹಾಗೂ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಸಾಧನಗೈದಿರುವ ಯೋಗಪಟು ಲಲಿತಾ ಎ.ಬಿ. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಯೋಗಗುರು ಸೀತಾರಾಂ ರೈ, ಯೋಗ ಪಟು ಮುಕ್ಕಾಟಿರ ರತಿ, ಡಾ. ಹೇಮಂತ್, ನಿವೃತ್ತ ಮುಖ್ಯಶಿಕ್ಷಕಿ ಲಲಿತಾ ಪ್ರಸನ್ನ, ಸೌಮ್ಯ, ಜಪುö್ಪ ತಿಮ್ಮಯ್ಯ, ಡಾ. ರವಿ, ಡಾ. ರೇಖಾ ಚಿಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.ಮಡಿಕೇರಿ: ಮಡಿಕೇರಿ ಸಂತ ಮೈಕಲರ ವಿದ್ಯಾಸಂಸ್ಥೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಆಯುಷ್ ಇಲಾಖೆಯ ಯೋಗ ತರಬೇತುದಾರ ಕೌಶಿಕ್ ಮತ್ತು ತಂಡದವರು ವಿದ್ಯಾರ್ಥಿಗಳಿಗೆ ಯೋಗಭ್ಯಾಸವನ್ನು ಹೇಳಿಕೊಟ್ಟರು. ಅಲ್ಲದೆ ಯೋಗದಿಂದ ಆಗುವ ಅನುಕೂಲಗಳ ಬಗ್ಗೆ ತಿಳಿಸಿದರು. ವಿದ್ಯಾಸಂಸ್ಥೆಯ ಸಂಚಾಲಕರಾದ ಸಂಜಯ್ ಕುಮಾರ್ ಅವರು ಮಾತನಾಡಿ, ಮಾನವನ ಸದೃಢ ಬೆಳವಣಿಗೆಗೆ ಯೋಗವು ಅತಿ ಮುಖ್ಯ. ಯೋಗವು ಮನುಷ್ಯನ ದೈಹಿಕ ಮಾತ್ರವಲ್ಲ ಮಾನಸಿಕ ಸಮತೋಲನವನ್ನು ಕಾಪಾಡಲು ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಸಂಗೀತವೂ ಕೂಡ ಒಂದು ಸುಂದರವಾದ ಭಾಷೆ. ಇದು ಸಕಾರಾತ್ಮಕ ಭಾವನೆಗಳನ್ನು ವ್ಯಕ್ತಿಗಳಲ್ಲಿ ಬೆಳೆಸುತ್ತದೆ ಎಂದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪಂಕಜ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜಾನ್ಸನ್ ಕೆ.ಎ., ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಸಿಲಿಯಾ ಹಾಗೂ ಸಿಸ್ಟರ್ ಮರ‍್ತಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯೋಗ ತರಬೇತುದಾರ ಕೇಶವ ಅವರು ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಎಲಿಜಾ ವಂದಿಸಿದರು.ಮುಳ್ಳೂರು: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಒಂದು ಭೂಮಿ ಒಂದು ಆರೋಗ್ಯ ಥೀಮ್‌ನಡಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆಯುಷ್ಮಾನ್ ಆರೋಗ್ಯ ಮಂದಿರದ ಸಮುದಾಯ ಆರೋಗ್ಯ ಅಧಿಕಾರಿ ಕೆ.ಆರ್. ಗಣೇಶ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಓಂಕಾರ, ಓಂ ಶಾಂತಿ ಮಂತ್ರ ಘಟನೆ ಧ್ಯಾನ ಸೂರ್ಯ ನಮಸ್ಕಾರ, ಯೋಗದ ವಿವಿಧ ಸರಳ ಆಸನಗಳ ಕುರಿತು ಮಾರ್ಗದರ್ಶನ ನೀಡಿದರು. ಇಂದಿನ ದಿನಗಳಲ್ಲಿ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು, ಯೋಗ ಅಭ್ಯಾಸ ಆರೋಗ್ಯಕ್ಕೆ ಹೇಗೆ ಸಹಕಾರಿಯಾಗುತ್ತದೆ, ಮುಂತಾದ ಯೋಗದ ಮಹತ್ವಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ದಿನದ ಮಹತ್ವದ ಕುರಿತು ಮಾತನಾಡಿದರು. ಈ ಸಂದರ್ಭ ಶಾಲೆಯ ಸಹ ಶಿಕ್ಷಕರು, ಪೋಷಕರು ಹಾಜರಿದ್ದರು.ವೀರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಕಾಲೇಜಿನಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಸ್ನಾತಕೋತ್ತರ ವಿಭಾಗ, ಎನ್.ಎಸ್.ಎಸ್ ಘಟಕ, ಯುವ ರೆಡ್‌ಕ್ರಾಸ್ ಘಟಕ ಹಾಗೂ ಸಂತ ಅನ್ನಮ್ಮ ಪಿ.ಯು. ಕಾಲೇಜಿನ ಸಹಯೋಗದಲ್ಲಿ ಯೋಗ ದಿನಾಚರಣೆ ನಡೆಯಿತು.

ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕ ಹಾಗೂ ಪಿ.ಯು ಕಾಲೇಜು ಪ್ರಾಂಶುಪಾಲರಾದ ರೆ.ಫಾ. ಮದಲೈ ಮುತ್ತು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಯೋಗವು ಪ್ರಾಚೀನ ಕಾಲದ ಇತಿಹಾಸವನ್ನು ಹೊಂದಿದೆ ಎಂದರು.

ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಯೋಗಾಭ್ಯಾಸವು ಸುಂದರ ಬದುಕಿಗೆ ಅತ್ಯಗತ್ಯವಾಗಿದೆ ಎಂದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಬಿ.ವಿ. ರಾಜ ರೈ ನೇತೃತ್ವದಲ್ಲಿ ಯೋಗಾಭ್ಯಾಸ ನಡೆಯಿತು.

ಈ ಸಂದರ್ಭ ಪದವಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಎನ್.ಎಸ್.ಎಸ್. ಅಧಿಕಾರಿ ಬಿ.ಎನ್. ಶಾಂತಿಭೂಷಣ್, ಯುವ ರೆಡ್‌ಕ್ರಾಸ್ ಅಧಿಕಾರಿ ವಿಲೀನ ಗೋನ್ಸಾಲ್ವೇಸ್, ಪಿ.ಯು ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಹೇಮಂತ್ ಉಪಸ್ಥಿತರಿದ್ದರು.ಕೂಡಿಗೆ: ಕೂಡಿಗೆಯ ಸೈನಿಕ ಶಾಲೆಯಲ್ಲಿ ೧೧ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ಆಚರಿಸಲಾಯಿತು. ಈ ವರ್ಷದ ಯೋಗ ದಿನಾಚರಣೆಯನ್ನು “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಶೀರ್ಷಿಕೆಯಡಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಹಾಜರಿದ್ದರು. ಜೊತೆಗೆ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಉಪಪ್ರಾಂಶುಪಾಲರು ಹಾಗೂ ಎನ್‌ಸಿಸಿ ಜೆಡಿ ಕಂಪನಿಯ ಕಮಾಂಡಿAಗ್ ಅಧಿಕಾರಿಯಾದ ಸ್ಕಾ÷್ವಡ್ರನ್ ಲೀಡರ್ ಮೊಹಮ್ಮದ್ ಶಾಜಿ ಮತ್ತು ಎನ್‌ಸಿಸಿ ಘಟಕದ ಅಧಿಕಾರಿಗಳು ಹಾಗೂ ಶಾಲಾ ವೈದ್ಯಾಧಿಕಾರಿಯಾದ ಡಾ. ಚಿನ್ಮಯ್ ಅವರು ಉಪಸ್ಥಿತರಿದ್ದರು.

ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಬೋಧಕ-ಬೋಧಕೇತರ ವರ್ಗದವರು, ಎನ್‌ಸಿಸಿ ಸಿಬ್ಬಂದಿ ವರ್ಗ ಹಾಗೂ ದೈಹಿಕ ಶಿಕ್ಷಕರು ಹಾಜರಿದ್ದರು. ಶಾಲೆಯ ದೈಹಿಕ ಶಿಕ್ಷಕರಾದ ಸಿ ಎಚ್ ಎಂ ಅನೂಪ್ ಚೌಹಾನ್ ಅವರು ಆಯುಷ್ ಸಚಿವಾಲಯದಿಂದ ಅನುಮೋದಿತವಾದ ಯೋಗಾಸನದ ವಿವಿಧ ಆಸನಗಳ ಪ್ರದರ್ಶನ ನೀಡಿ ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮವನ್ನು ಶಾಲೆಯ ಎನ್‌ಸಿಸಿ ಘಟಕವು ಆಯೋಜಿಸಿದ್ದು, ಯೋಗಾಸನವು ಆರೋಗ್ಯದಲ್ಲಿ ಸ್ಥಿರತೆ, ಶಿಸ್ತು ಹಾಗೂ ಆನಂದಮಯ ಜೀವನಕ್ಕೆ ಅತಿ ಅವಶ್ಯಕವೆಂಬ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲಾಯಿತು. ಇದರೊಂದಿಗೆ ವಿದ್ಯಾರ್ಥಿಗಳು ತಮ್ಮ ದೈನಂದಿನ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಅಗತ್ಯತೆಯೊಂದಿಗೆ ಪ್ರಕೃತಿಯೊಂದಿಗೆ ಸಹ-ಜೀವನ ನಡೆಸಬೇಕೆನ್ನುವ ಜಾಗೃತಿಯನ್ನು ಮೂಡಿಸಲಾಯಿತು.ವೀರಾಜಪೇಟೆ: ವೀರಾಜಪೇಟೆ ಮೀನುಪೇಟೆ ಯಲ್ಲಿರುವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ "ಒಂದು ಭೂಮಿಗೆ, ಒಂದು ಆರೋಗ್ಯಕ್ಕಾಗಿ ಯೋಗ" ಎಂಬ ಘೋಷವಾಕ್ಯ (ಥೀಮ್)ದೊಂದಿಗೆ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ವಿದ್ಯಾರ್ಥಿನಿಯರಾದ ತನಹ ಮತ್ತು ತಂಡದವರ ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಯೋಗ ದಿನದ ಮಹತ್ವ ಕುರಿತು ಮಾತನಾಡಿದ ಶಾಲಾ ಶಿಕ್ಷಕಿ ಭವ್ಯ ಅವರು, ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಢತೆಗೆ ಸಹಕಾರಿ ಆಗುತ್ತದೆ, ವಿದ್ಯಾರ್ಥಿಗಳು ಯೋಗಭ್ಯಾಸವನ್ನು ನಿರಂತರವಾಗಿ ಅಭ್ಯಾಸ ಮಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ದೀಶ ಮತ್ತು ತಂಡದವರು ನೃತ್ಯದ ಮೂಲಕ ಯೋಗದ ಮಹತ್ವವನ್ನು ಪ್ರದರ್ಶಿಸಿದರು. ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರತಿಮ ಆಚಾರ್ಯ ಹಾಗೂ ಶಿಕ್ಷಕಿ ಪುಷ್ಪ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕಿ ಶೈಲಾ ಕಾರ್ಯಕ್ರಮವನ್ನು ನಿರೂಪಿಸಿದರು, ಶಿಕ್ಷಕಿ ರಮ್ಯಾ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಐಸಾ ನಾಸಿರ್ ವಂದನಾರ್ಪಣೆ ಮಾಡಿದರು.

ಯೋಗದಿನದ ಪ್ರಯುಕ್ತ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಪ್ರಥಮ ತ್ರಿಶಾಲ್ ಮತ್ತು ನಿರೀಕ್ಷಾ ಪ್ರಥಮ ಹಾಗೂ ವಫಾ ಮತ್ತು ಹರ್ಷವರ್ಧನ್ ದ್ವಿತೀಯ ಸ್ಥಾನ ಗಳಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಪೊನ್ನಂಪೇಟೆ: ಇಲ್ಲಿನ ಅಪ್ಪಚ್ಚ ಕವಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷೆ ಮೂಕಳೇರ ಕಾವ್ಯ ಕಾವೇರಮ್ಮ ಯೋಗ ದಿನದ ಮಹತ್ವ, ದೈಹಿಕ ಆರೋಗ್ಯ ಹಾಗೂ ಮನೋಸ್ಥೆöÊರ್ಯದ ಬಗ್ಗೆ ವಿವರಿಸಿದರು.

ಯೋಗ ಶಿಕ್ಷಕಿ ಅಮೃತ ರಾಕೇಶ್ ಯೋಗ ಆಚರಣೆಯ ಮಹತ್ವ, ದಿನನಿತ್ಯ ಯೋಗದಿಂದ ದೈಹಿಕ ಆರೋಗ್ಯ ಹಾಗೂ ಆಹಾರ ಪದ್ಧತಿಯ ಬಗ್ಗೆ ತಿಳಿಹೇಳಿದರು. ಈ ಸಂದರ್ಭ ಡಾ. ಗನ್ಯ ಅವರು ಮಕ್ಕಳಿಗೆ ಯೋಗ ತರಬೇತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಕೆ.ಎಸ್. ಸೋಮಯ್ಯ, ನಿರ್ದೇಶಕ ಕಳಿಚಂಡ ದೇವಯ್ಯ, ಆಂತರಿಕ ಲೆಕ್ಕ ಪರಿಶೋಧಕಿ ಗುಮ್ಮಟ್ಟೀರ ಗಂಗಮ್ಮ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಮಲಚೀರ ತನುಜ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ದಿಶಾ ಹಾಗೂ ತಂಡ ಪ್ರಾರ್ಥಿಸಿ, ಮುಖ್ಯೋಪಾಧ್ಯಾಯಿನಿ ಮಲಚೀರ ತನುಜ ಸ್ವಾಗತಿಸಿ, ಸಹ ಶಿಕ್ಷಕಿ ನಿಧೀಕ್ಷ ವಂದಿಸಿದರು.ಮಡಿಕೇರಿ: ಅಂತರರಾಷ್ಟಿçÃಯ ಯೋಗ ದಿನದ ಅಂಗವಾಗಿ ಹರ್‌ಮಂದಿರ್ ಶಾಲೆ, ಕಾಟಕೇರಿ ಹಾಗೂ ಸ್ವಸ್ಥ ವಿಶೇಷ ಶಿಕ್ಷಣ ಪುನರ್ವಸತಿ ಕೇಂದ್ರ ಸುಂಟಿಕೊಪ್ಪ ಇವರುಗಳ ಸಹಭಾಗಿತ್ವದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಮೊದಲಿಗೆ ಸ್ವಸ್ಥ ಕೇಂದ್ರದ ಸಿಬ್ಬಂದಿ ಸ್ವಾಗತಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹರ್‌ಮಂದಿರ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರಾಘವೇಂದ್ರ ಯೋಗ ದಿನದ ಮಹತ್ವ ಹಾಗೂ ಪ್ರಸ್ತುತ ವರ್ಷದ ಧ್ಯೇಯ ವಾಕ್ಯ “ಒಂದು ಪ್ರಕೃತಿ ಒಂದು ಆರೋಗ್ಯ” ಇದರ ಬಗ್ಗೆ ವಿವರಿಸಿದರು.

ನಂತರ ಸ್ವಸ್ಥ ಕೇಂದ್ರದ ಮಕ್ಕಳು ಯೋಗದ ವಿವಿಧ ಆಸನಗಳನ್ನು ಹರ್‌ಮಂದಿರ್ ಶಾಲೆಯ ಮಕ್ಕಳೊಂದಿಗೆ ಪ್ರದರ್ಶಿಸಿದರು. ಹರ್‌ಮಂದಿರ್ ಶಾಲೆಯ ಮಕ್ಕಳಿಂದ ಸೂರ್ಯ ನಮಸ್ಕಾರದ ಪ್ರಾಮುಖ್ಯತೆಯನ್ನು ರೂಪಕದ ಮೂಲಕ ಪ್ರದರ್ಶಿಸಲಾಯಿತು. ಜೊತೆಗೆ ಸ್ವಸ್ಥ ಕೇಂದ್ರದ ಮಕ್ಕಳಿಂದ ನೃತ್ಯ ಪ್ರದರ್ಶನವೂ ನಡೆಯಿತು. ಇದಾದ ಬಳಿಕ ಹರ್‌ಮಂದಿರ್ ಶಾಲೆಯ ಯೋಗ ಶಿಕ್ಷಕ ಪ್ರದೀಪ್ ಅವರ ಮಾರ್ಗದರ್ಶನದಲ್ಲಿ ಪ್ರಾಣಾಯಾಮ, ಸೂರ್ಯ ನಮಸ್ಕಾರ ಮತ್ತು ಕುರ್ಚಿಯನ್ನು ಬಳಸಿ ಮಾಡುವ ವಿವಿಧ ಬಗೆಯ ಸರಳ ಯೋಗಾಸನಗಳನ್ನು ಪ್ರದರ್ಶನ ಮಾಡಲಾಯಿತು.

ನಂತರ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಅವರು ನಾವು ಆರೋಗ್ಯವಾಗಿರಲು ಸಂತೋಷದಿAದ ಇರುವುದು ಮುಖ್ಯ ಎಂದು ಹೇಳಿ ದೈಹಿಕ ಯೋಗಾಭ್ಯಾಸದ ಕುರಿತು ಮಾತನಾಡಿದರು. ಇವರೊಂದಿಗೆ ಸ್ವಸ್ಥ ಸಂಸ್ಥೆಯ ಪ್ರಾಂಶುಪಾಲೆ ವನಿತ, ಸ್ವಸ್ಥ ಆಡಳಿತ ವರ್ಗ ಹಾಗೂ ಹರ್‌ಮಂದಿರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಮಡಿಕೇರಿ: ಚೆಟ್ಟಿಮಾನಿಯ ಸಾಂದೀಪನಿ ವಿದ್ಯಾ ಪೀಠದಲ್ಲಿ ಯೋಗ ದಿನವನ್ನು ಆಚರಿಸ ಲಾಯಿತು. ಶಿಕ್ಷಕಿ ಸೌಜನ್ಯ ಯೋಗೇಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಯೋಗ ತರಬೇತು ದಾರರಾದ ಮಮತ ಅವರು ವಿವಿಧ ಆಸನಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ಯೋಗದ ಮಹತ್ವ ಹಾಗೂ ಪ್ರಯೋಜನಗಳ ಬಗ್ಗೆ ಸುನಿತ ಗಣಪತಿ ಅವರು ತಿಳಿಸಿಕೊಟ್ಟರು.ನಾಪೋಕ್ಲು: ಅಂತರರಾಷ್ಟಿçÃಯ ಯೋಗ ದಿನಾಚರಣೆಯ ಅಂಗವಾಗಿ ೧೧ನೇ ಯೋಗ ದಿನಾಚರಣೆಯನ್ನು ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.

ಯೋಗ ದಿನಾಚರಣೆಯ ಅಂಗವಾಗಿ ಯೋಗದ ಐತಿಹಾಸಿಕ ಹಿನ್ನೆಲೆ ಮತ್ತು ಯುವ ಪೀಳಿಗೆಗೆ ಯೋಗದ ಮಹತ್ವದ ಬಗ್ಗೆ ಸಂಸ್ಥೆಯ ಆಡಳಿತ ಮಂಡಳಿಯ ಸಂಚಾಲಕ ಎಂ. ಶಂಕರನಾರಾಯಣ ಭಟ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ದೈಹಿಕ ಶಿಕ್ಷಕ ಕುಶಾಲಪ್ಪ ನಡೆಸಿಕೊಟ್ಟರು. ಯೋಗ ದಿನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕ, ಅಧ್ಯಾಪಕ ವೃಂದದವರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಐತ್ತಪ್ಪ ಎ. ಸ್ವಾಗತಿಸಿ, ಉಪನ್ಯಾಸಕ ಚೆನ್ನಬಸಪ್ಪ ವಂದಿಸಿದರು.ಕಡAಗ: ವೀರಾಜಪೇಟೆ ತಾಲೂಕಿನ ಅರಮೇರಿ ಎಸ್.ಎಂ.ಎಸ್. ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್‌ನಲ್ಲಿ ೧೧ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳು, ಪ್ರಾಣಾಯಾಮಗಳ ಮೂಲಕ ಉತ್ತಮ ಆರೋಗ್ಯಕ್ಕಾಗಿ ಇವುಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕೆಂಬ ವಿಷಯಗಳನ್ನು ತಿಳಿಸಿಕೊಡಲಾಯಿತು. ಸಂಸ್ಥೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.