ಶಾಸಕ ಮಂತರ್ ಗೌಡ

ಕೂಡಿಗೆ, ಜೂ. ೨೪: ಜಿಲ್ಲೆಯಲ್ಲಿ ಜಿಲ್ಲೆಯ ಕೇಂದ್ರ ಸಹಕಾರ ಬ್ಯಾಂಕ್‌ನ ಸಹಕಾರ ದಿಂದ ಸ್ಥಳೀಯ ನೂರಾರು ಸಹಕಾರ ಸಂಘಗಳು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ಆಯಾ ವ್ಯಾಪ್ತಿಯ ರೈತರ ಸದಸ್ಯತ್ವವನ್ನು ಪಡೆದು ಸಹಕಾರ ಕೃಷಿ ಪತ್ತಿನ ಸಹಕಾರ ಸಂಘಗಳ ಹೆಸರಿನನ್ವಯ ಕಾರ್ಯ ನಿರ್ವಹಿಸುತ್ತಾ, ರೈತರಿಗೆ ವಿವಿಧ ಯೋಜನೆಯ ಮೂಲಕ ಮತ್ತು ಹೈನುಗಾರಿಕೆ, ಕೃಷಿಗೆ ಸಂಬAಧಿಸಿದAತೆ ವಿವಿಧ ಹಂತಗಳಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಾ ಜಿಲ್ಲೆಯ ಸಹಕಾರ ಸಂಘಗಳು ಸಹಕಾರ ಮಾಡುತ್ತಾ ಬರುತ್ತಿವೆ.

ಅದರೆ ಸರಕಾರದ ಸಹಕಾರ ಸಂಘ ಇಲಾಖೆಯ ಹೊಸ ನಿಯಮವಾದ ಜಂಟಿ ಖಾತೆಯ ಕಾರಣ ರೈತರಿಗೆ ಸಾಲ ಸೌಲಭ್ಯಗಳನ್ನು ನೀಡದಂತೆ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಸರಕಾರದ ಸಾಲ ಸೌಲಭ್ಯಕ್ಕೆ ಬಡ್ಡಿ ರಹಿತ ಕೃಷಿ ಸಾಲವನ್ನು ನೀಡುವ ಯೋಜನೆಗೆ ಹೊಡೆತ ಬಿದ್ದಿದೆ. ಇದರಿಂದಾಗಿ ಸಹಕಾರ ಸಂಘದಿAದ ಪಡೆಯುವ ಸಾಲಕ್ಕೆ ಬಡ್ಡಿಯನ್ನು ಕಟ್ಟುವಂತಹ ಪ್ರಸಂಗ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ರೈತರಿಗೆ ಬಂದಿದೆ. ಇದರಿಂದಾಗಿ ರೈತರಿಗೆ ತೊಂದರೆಗಳು ಅಗುತ್ತಿರುವುದು ಸಹಕಾರ ಸಂಘಗಳಲ್ಲಿ ಕಂಡುಬರುತ್ತದೆ.

ಇದಕ್ಕೆ ಸಂಬAಧಿಸಿದAತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರಿಗೆ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ಸಹಕಾರ ಸಂಘಗಳ ಸದಸ್ಯರು ಮನವಿಯನ್ನು ಸಲ್ಲಿಸಿದರು.

ಇದಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯಿಸಿದ ಶಾಸಕರು ಈಗಾಗಲೇ ಸಹಕಾರ ಸಂಘಗಳಲ್ಲಿ ಜಂಟಿ ಖಾತೆಯನ್ನು ಹೊಂದಿದ ರೈತರಿಗೆ ಕೆ.ಸಿ.ಸಿ. ಸಾಲ ನೀಡದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆದಿರುತ್ತೇನೆ. ಇದಕ್ಕೆ ಸಂಬAಧಿಸಿದ ವಿಶೇಷವಾಗಿ ಜಿಲ್ಲೆಯ ರೈತರಿಗೆ ಜಂಟಿ ಖಾತೆಗೆ ಇದುವರೆಗೆ ಕಳೆದ ೨೦ ವರ್ಷಗಳಿಂದಲೂ ನಡೆದುಕೊಂಡು ಬಂದAತೆ ಸಾಲವನ್ನು ನೀಡುವಂತೆ ರಾಜ್ಯ ಸಹಕಾರ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗುವುದು. ಇದರ ಜೊತೆಯಲ್ಲಿ ಸಹಕಾರ ಸಂಘಗಳ ಮೂಲಕ ಶಾಸಕರ ನೇತೃತ್ವದಲ್ಲಿ ನಿಯೋಗದೊಂದಿಗೆ, ಮಲೆನಾಡು ಪ್ರದೇಶದ ವಿಶೇಷ ಅಡಿಯಲ್ಲಿ ಮನವಿಯನ್ನು ಸಲ್ಲಿಸಿ, ಜಿಲ್ಲೆಯ ರೈತರಿಗೆ ಯಾವುದೇ ರೀತಿಯ ತೊಂದರೆಗಳು ಅಗದಂತೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕುಶಾಲನಗರ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ, ಕೆ.ಪಿ.ಸಿ.ಸಿ. ಸದಸ್ಯ ನಟೇಶ್ ಗೌಡ, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಜಗದೀಶ್, ಬಸವನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಅರುಣ್ ರಾವ್, ನಿರ್ದೇಶಕ ಕೆ.ಎಸ್. ಕೃಷ್ಣಗೌಡ, ಹೆಚ್.ಸಿ. ಮೂರ್ತಿ ಸೇರಿದಂತೆ ನೂರಾರು ರೈತರು, ಸಂಘದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.