ನಾಪೋಕ್ಲು, ಜೂ. ೨೪: ಸಮೀಪದ ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಯಿಂದ ರೈತರು ಸಮಸ್ಯೆ ಎದುರಿಸು ವಂತಾಗಿದೆ.

ಗ್ರಾಮದಲ್ಲಿ ಕಾಡಾನೆಗಳ ಹಿಂಡು ನಿರಂತರ ದಾಂಧಲೆ ನಡೆಸುತ್ತಿದ್ದು, ಕಾಫಿ, ತೆಂಗು, ಬಾಳೆ ಗಿಡ ಗಳನ್ನು ನಾಶಪಡಿಸಿವೆ. ಕಾಡಾನೆಗಳ ಹಾವಳಿ ಯಿಂದ ರೈತರು ಚಿಂತಾಕ್ರಾAತರಾಗಿದ್ದಾರೆ.

ಗ್ರಾಮ ನಿವಾಸಿ ಮರದಾಳು ರಾಮಚಂದ್ರ ಅವರ ಮನೆಯ ಸುತ್ತಮುತ್ತ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ತೆಂಗು, ಬಾಳೆ ಗಿಡಗಳನ್ನು ಸಂಪೂರ್ಣ ಧ್ವಂಸಗೊಳಿಸಿವೆ. ಅಲ್ಲದೆ ಕೃಷಿ ಫಸಲುಗಳಿಗೆ ಹಾನಿ ಉಂಟು ಮಾಡಿದೆ. ಇತ್ತೀಚೆಗೆ ನೆಟ್ಟ ಹಣ್ಣಿನ ಗಿಡಗಳೂ ಧ್ವಂಸವಾಗಿವೆ. ಕಾಡಾನೆಗಳ ಉಪಟಳವನ್ನು ತಡೆಗಟ್ಟಲು ಇಲಾಖೆ ಮುಂದಾಗಿ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.