vಚೆಯ್ಯಂಡಾಣೆ, ಜೂ. ೧೫: ಮಂಗಳೂರು ಬೆಳ್ತಂಗಡಿ ತಾಲೂಕಿನ ಗುರುವಾಯ ನಕೆರೆ ಎಕ್ಸಲ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ವಿದ್ಯಾರ್ಥಿ ಸಿಇಟಿ ಹಾಗೂ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾನೆ.

ಜಿಲ್ಲೆಯ ಮೂರ್ನಾಡುವಿನ ಮಹಮ್ಮದ್ ಸಫ್ವಾನ್ ಜೆ.ಐ. ಜೆಇಇ ಮೈನ್ಸ್ನಲ್ಲಿ ೯೮.೮೨% ಹಾಗೂ ನೀಟ್ ಪರೀಕ್ಷೆಯಲ್ಲಿ ೭೦೦ ಕ್ಕೆ ೫೪೨ ಅಂಕ ಪಡೆದು ಸಾಧನೆ ಮಾಡಿದ್ದಾನೆ.

ಸಿಇಟಿ (ಅಇಖಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ ೫೭೨ನೇ ರ‍್ಯಾಂಕ್ ಪಡೆದು ಕೊಂಡಿದ್ದಾರೆ. ಇವರು ಮೂರ್ನಾಡುವಿನ ಇಸ್ಮಾಯಿಲ್ ಜೆ.ಎಚ್. ಹಾಗೂ ಸಹರ್ ಬಾನ್ ದಂಪತಿಯ ಪುತ್ರರಾಗಿದ್ದಾರೆ.