ಮಡಿಕೇರಿ, ಜೂ. ೧೪ : ಕೇಂದ್ರ ಪುರಸ್ಕೃತ ಯೋಜನೆಯಡಿ ‘ಪ್ರಾಯೋಜಕತ್ವ’ ಎಂಬ ಕಾರ್ಯ ಕ್ರಮವನ್ನು, ೧೮ ವರ್ಷದೊಳಗಿನ ಮಕ್ಕಳನ್ನು ವಿಸ್ತೃತ ಕುಟುಂಬದ ವಾತಾವರಣದಲ್ಲಿ ಆರೈಕೆ ಮಾಡುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ರಕ್ಷಣಾ ಘಟಕದ ಮೂಲಕ ಪ್ರತಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಮಾಸಿಕ ರೂ.೪,೦೦೦ ದಷ್ಟು ಹಣ ಫಲಾನು ಭವಿಗಳ ಖಾತೆಗೆ ಜಮಾ ಆಗುತ್ತಿದೆ. ಮಗುವಿನ ವೈದ್ಯಕೀಯ, ಶೈಕ್ಷಣಿಕ ಹಾಗೂ ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ಅಗತ್ಯವಿರುವ ಪೂರಕ ಬೆಂಬಲವು ಈ ಮಾಹೆಯಾನದ ಮೂಲಕ ಈಡೇರಿಸುವ ಉದ್ದೇಶ ಯೋಜನೆಯದ್ದಾಗಿದ್ದು, ಸಮುದಾಯದಲ್ಲಿ ಸ್ಥಳಾಂತರಗೊಳ್ಳದೆ ತಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರದಲ್ಲೇ ಮಕ್ಕಳು ಬೆಳೆಯಲು ಈ ಯೋಜನೆ ಸಹಕಾರಿಯಾಗಲಿದೆ.
೨೦೧೩-೧೪ರಿಂದಲೇ ಈ ಯೋಜನೆ ಚಾಲ್ತಿಯಲ್ಲಿದ್ದು, ಅಂದು ಮಾಸಿಕ ರೂ.೧,೦೦೦ ನೀಡಲಾಗುತ್ತಿತ್ತು. ನಂತರ ೨೦೨೨ರಲ್ಲಿ ಮಾರ್ಗಸೂಚಿ ಬದಲಾಗಿದ್ದು, ಮಾಸಿಕ ರೂ.೪,೦೦೦ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ.
೩ ತಿಂಗಳುಗಳಿಗೊಮ್ಮೆ ಫಲಾನು ಭವಿಗಳ ಅರ್ಜಿ ಪರಿಷ್ಕರಣೆ, ಹೊಸ ಅರ್ಜಿಗಳ ಸ್ವೀಕೃತಿಯನ್ನು ಮಾಡ ಲಾಗುತ್ತದೆ. ಅರ್ಹ ಫಲಾನುಭವಿಗಳು ನೇರವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಯನ್ನು ಸಂಪರ್ಕಿ ಸಬಹುದಾಗಿದೆ.
ಫಲಾನುಭವಿಗಳಾಗಲು ಮಾನದಂಡಗಳು
* ತಾಯಿ ವಿಧವೆ ಅಥವಾ ವಿಚ್ಛೇದಿತೆ ಅಥವಾ ಕುಟುಂಬದಿAದ ಪರಿತ್ಯಜಿಸಲ್ಪಟ್ಟಿರಬೇಕು.
* ಮಕ್ಕಳು ಅನಾಥರಾಗಿದ್ದರೆ ಹಾಗೂ ವಿಸ್ತೃತ ಕುಟುಂಬದೊAದಿಗೆ ಜೀವಿಸುತ್ತಿದ್ದರೆ ಯೋಜನೆ ಅನ್ವಯವಾಗುತ್ತದೆ.
* ಪೋಷಕರು, ಜೀವಕ್ಕೆ ಅಪಾಯವಿರುವ/ ಗಂಭೀರ ಸ್ವರೂಪದ ಖಾಯಿಲೆಯಿಂದ ಬಳಲುತ್ತಿದ್ದರೆ.
* ಪೋಷಕರು ಅಶಕ್ತರಾಗಿದ್ದರೆ ಅಥವಾ ಮಕ್ಕಳನ್ನು ನೋಡಿಕೊಳ್ಳಲು ಆರ್ಥಿಕವಾಗಿ ಹಾಗೂ ದೈಹಿಕವಾಗಿ ಅಸಮರ್ಥರಾಗಿದ್ದರೆ.
* ಜೆಜೆ ಕಾಯ್ದೆ ೨೦೧೫ ಪ್ರಕಾರ ಮಕ್ಕಳು, ಪೋಷಣೆ ಮತ್ತು ರಕ್ಷಣೆಯ ಅಗತ್ಯ ಹೊಂದಿದ್ದರೆ, ಅಂದರೆ ವಸತಿರಹಿತರು, ಯಾವುದಾದರು ನೈಸರ್ಗಿಕ ವಿಕೋಪಗಳ ಸಂತ್ರಸ್ತರು, ಬಾಲಕಾರ್ಮಿಕರು, ಬಾಲ್ಯವಿವಾಹದ ಸಂತ್ರಸ್ತರು, ಮಾನವ ಕಳ್ಳಸಾಗಣೆ ಸಂತ್ರಸ್ತರು, ಹೆಚ್.ಐ.ವಿ/ಏಡ್ಸ್ ಪರಿಣಾಮ ಪೀಡಿತ ಮಗು, ವಿಶೇಷಚೇತನ ಮಗು, ತಪ್ಪಿಸಿಕೊಂಡಿರುವ, ಓಡಿಬಂದಿರುವ ಮಗು, ಬಾಲ ಭಿಕ್ಷÄಕರು, ಬೀದಿಯಲ್ಲಿ ವಾಸಿಸುತ್ತಿದ್ದರೆ, ಬೆಂಬಲ ಹಾಗೂ ಪುನರ್ವಸತಿಯ ಅಗತ್ಯವಿರುವಂತಹ ಹಿಂಸೆಗೆ ಒಳಪಟ್ಟ, ನಿಂದಿಸಲ್ಪಟ್ಟ ಅಥವಾ ಶೋಷಿತ ಮಕ್ಕಳಿಗೆ ಯೋಜನೆ ಅನ್ವಯವಾಗುತ್ತದೆ.
(ಮೊದಲ ಪುಟದಿಂದ)
ಸಲ್ಲಿಸಬೇಕಿರುವ ದಾಖಲಾತಿಗಳ ವಿವರ
ಕುಟುಂಬದ ವಾರ್ಷಿಕ ಆದಾಯ (ಗ್ರಾಮೀಣ ಪ್ರದೇಶದವರಿಗೆ ರೂ.೭೨,೦೦೦ ಹಾಗೂ ನಗರ ಪ್ರದೇಶದವರಿಗೆ ರೂ.೯೬,೦೦೦) ಮೀರದಿರುವ ಬಗ್ಗೆ ಕಂದಾಯ ಇಲಾಖೆಯಿಂದ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಪಡೆದಿರಬೇಕು. ಪ್ರಸ್ತುತ ಶಾಲೆ/ ಕಾಲೇಜಿಗೆ ದಾಖಲಾಗಿರುವ ಬಗ್ಗೆ ವ್ಯಾಸಂಗ ದೃಢೀಕರಣ ಪತ್ರ ಪಡೆದಿರಬೇಕು. ಮಗುವಿನ ೨ ಭಾವಚಿತ್ರ, ಬ್ಯಾಂಕ್ ಪಾಸ್ಬುಕ್, ಪಡಿತರ ಚೀಟಿ, ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ತಂದೆ/ ತಾಯಿ ಮರಣ ಹೊಂದಿರುವ ಬಗ್ಗೆ ಮರಣ ಪ್ರಮಾಣ ಪತ್ರ, ತಂದೆ/ ತಾಯಿ ಜೀವಂತವಿದ್ದಲ್ಲಿ ಅವರ ಆಧಾರ್ ಕಾರ್ಡ್ ಪ್ರತಿ, ತಂದೆ/ತಾಯಿ ಜೀವಕ್ಕೆ ಅಪಾಯವೊಡ್ಡುವ ಗಂಭೀರ ಸ್ವರೂಪದ ಖಾಯಿಲೆಯಿಂದ ಬಳಲುತ್ತಿದ್ದರೆ ಸರಕಾರಿ ವೈದ್ಯರಿಂದ ವೈದ್ಯಕೀಯ ಪ್ರಮಾಣ ಪತ್ರ ಒದಗಿಸಿ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಮಡಿಕೇರಿ ಬ್ರಾಹ್ಮಣರ ಕಲ್ಯಾಣ ಮಂಟಪದ ಮುಂಭಾಗದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು. ಫೋ:೦೮೨೭೨-೨೨೮೮೦೦, ಇ-ಮೇಲ್: ಜಛಿಠಿoಞoಜಚಿgu@gmಚಿiಟ.ಛಿom