ಶ್ರೀಮಂಗಲ, ಜೂ. ೧೪: ಹುದಿಕೇರಿ ಪಟ್ಟಣದ ಸಮೀಪ ಹೈಸೊಡ್ಲೂರು ಗ್ರಾಮದಲ್ಲಿ ರೂ. ೧೯.೩೪ ಕೋಟಿ ಅನುದಾನದಲ್ಲಿ ನಿರ್ಮಾಣವಾಗಲಿರುವ ೬೬/೧೧ ವಿದ್ಯುತ್ ಸರಬರಾಜು ಉಪ ಕೇಂದ್ರದ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಭೂಮಿಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಜನರ ಬಹುಕಾಲದ ಬೇಡಿಕೆಯಾದ ಹುದಿಕೇರಿ ಹೋಬಳಿಯ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಭಾಗದ ಎಲ್ಲಾ ಮುಖಂಡರು ಪ್ರಯತ್ನ ನಡೆಸುತ್ತ ಬಂದಿದ್ದಾರೆ. ಜನರ ಬೇಡಿಕೆಗೆ ಬೇಡಿಕೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಸಹಕಾರ ನೀಡಿದ್ದು, ನಮ್ಮ ಸರಕಾರ ಸ್ಪಂದಿಸಿ ಉಪ ಕೇಂದ್ರವನ್ನು ಮಂಜೂರು ಮಾಡಿದೆ. ಗುಣಮಟ್ಟದಲ್ಲಿ ಕಾಮಗಾರಿ ನಡೆಯುವಂತಾಗಲಿ ಟೆಂಡರ್‌ನಲ್ಲಿ ನಮೂದಿಸಿದ ಕಾಲಮಿತಿಯಲ್ಲಿ ಕಾಮಗಾರಿ ಪೂರೈಸುವಂತಾಗಲಿ ಎಂದು ಹೇಳಿದರು.

ಈ ಉಪ ಕೇಂದ್ರ ಸ್ಥಾಪನೆಯಾದ ನಂತರ ಹುದಿಕೇರಿ ಹೋಬಳಿಯ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಇದಲ್ಲದೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಐದು ವಿದ್ಯುತ್

(ಮೊದಲ ಪುಟದಿಂದ) ಉಪ ಕೇಂದ್ರಗಳನ್ನು ಸರ್ಕಾರ ಮಂಜೂರಾತಿ ನೀಡಿದೆ. ಇದರಲ್ಲಿ ಬಾಳೆಲೆ, ಸಿದ್ದಾಪುರ, ಮೂರ್ನಾಡು ಉಪಕೇಂದ್ರಗಳು ಟೆಂಡರ್ ಆಗಿದ್ದು, ಸದ್ಯದಲ್ಲಿಯೇ ಕಾಮಗಾರಿಯನ್ನು ಗುತ್ತಿಗೆದಾರರು ಕೈಗೆತ್ತಿಕೊಳ್ಳಲಿದ್ದಾರೆ. ೩೩/೧೧ ಉಪಕೇಂದ್ರಗಳು ಕಳತ್ಮಾಡು, ಸಂಪಾಜೆ, ಭಾಗಮಂಡಲದಲ್ಲಿ ಸಹ ಸ್ಥಾಪನೆಗೆ ಸರ್ಕಾರದಿಂದ ಮಂಜೂರಾಗಿದೆ. ಇದಲ್ಲದೆ ರೂ. ೨೩೦ ಕೋಟಿ ಅನುದಾನದಲ್ಲಿ ವಿದ್ಯುತ್ ಮಾರ್ಗವನ್ನು ಹಾಗೂ ಪರಿವರ್ತಕಗಳನ್ನು ಅದರ ಸಾಮರ್ಥ್ಯವನ್ನು ಹೆಚ್ಚಿಸಿ ಬಲವರ್ಧನೆಗೊಳಿಸುವ ವಿಶೇಷ ಯೋಜನೆ ಈಗಾಗಲೇ ಚಾಲನೆಯಲ್ಲಿದ್ದು, ಇದು ಇದೇ ಡಿಸೆಂಬರ್ ವೇಳೆಗೆ ಮುಕ್ತಾಯಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಚೀಫ್ ಎಲೆಕ್ಟಿçಕ್ ಆಫೀಸರ್ ತೀತಿರ ರೋಷನ್ ಅಪ್ಪಚ್ಚು, ಕೆಪಿಟಿಸಿಎಲ್ ಹಿರಿಯ ಅಧೀಕ್ಷಕ ಇಂಜಿನಿಯರ್ ರಮೇಶ್ ಟಿ.ಎಸ್, ಕಾರ್ಯನಿರ್ವಾಹಕ ಇಂಜಿನಿಯರ್ (ಯೋಜನಾ ವಿಭಾಗ ಕೊಡಗು) ಮಾದೇಶ್, ಸೆಸ್ಕ್ ಗೋಣಿಕೊಪ್ಪ ಎ.ಇ.ಇ. ಸತೀಶ್, ಹಿರಿಯರಾದ ಚೆಕ್ಕೇರ ವಾಸು ಕುಟ್ಟಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ, ಚೆಕ್ಕೇರ ಸುಧೀರ್, ಚೆಕ್ಕೇರ ಸಚಿನ್ ಸೋಮಯ್ಯ, ಅಜ್ಜಿಕುಟ್ಟಿರ ಗಿರೀಶ್, ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಕುಪ್ಪಣಮಾಡ ನೀಮಾ ಕಾವೇರಮ್ಮ, ಹಿರಿಯರಾದ ಅಪ್ಪಚ್ಚಂಗಡ ಮೋಟಯ್ಯ, ಗ್ರಾ.ಪಂ. ಸದಸ್ಯರಾದ ಕೊಡಂಗಡ ವಾಸು ಬಿದ್ದಪ್ಪ, ಕೊಡಂಗಡ ದಮಯಂತಿ, ಬೊಜ್ಜಂಗಡ ಸುನಿಲ್ ಹಾಜರಿದ್ದರು.