ಚೆಟ್ಟಳ್ಳಿ, ಜೂ. ೪: ತಮಿಳುನಾಡಿನ ರಾಣಿಪೇಟ್‌ನಲ್ಲಿ ನಡೆದ ೧೯ನೇ ದಿ ಪಾಲಾರ್ ಚಾಲೆಂಜ್ ಆಫ್ ರೋಡ್ ರ‍್ಯಾಲಿಯಲ್ಲಿ ಮೂರ್ನಾಡುವಿನ ಪುದಿಯೊಕ್ಕಡ ಸೂರಜ್ ಬೋಜಣ್ಣ ಹಾಗೂ ಅಮ್ಮತ್ತಿಯ ಉದ್ದಪ್ಪಂಡ ತಿಮ್ಮಣ್ಣ ಥಾರ್ ವಿಭಾಗದಲ್ಲಿ ಮೊದಲ ಹಾಗೂ ವೈಯಕ್ತಿಕ ವಿಭಾಗದಲ್ಲಿ ಮೂರನೇ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ವೈಯಕ್ತಿಕ ವಿಭಾಗದಲ್ಲಿ ಮೊದಲ ಬಹುಮಾನ ಪಡೆದಿದ್ದಾರೆ.

ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡಿನ ನುರಿತ ರ‍್ಯಾಲಿಪಟುಗಳು ಭಾಗವಹಿಸಿದ್ದರು. ಮೊದಲ ದಿನ ನದಿ ದಡದ ಮರಳಿನಲ್ಲಿ ಥಾರ್ ಜೀಪನ್ನು ಓಡಿಸುವ ಸಹಾಸ ಕ್ರೀಡೆ, ಎರಡನೇ ದಿನ ಕಲ್ಲುಬಂಡೆಗಳ ನಡುವೆ ಸಾಗುವುದು ಹಾಗು ಮೂರನೇ ದಿನ ಕಡಿದಾದ ಪ್ರದೇಶಗಳಲ್ಲಿ ಜೀಪನ್ನು ಚಾಲಿಸಬೇಕಿತ್ತು. ಮೊದಲದಿನ ವಾಹನಕ್ಕೆ ತೊಂದರೆ ಉಂಟಾದರೂ ರಾತೋರಾತ್ರಿಯೇ ಜೀಪನ್ನು ಸರಿಪಡಿಸಿ ಚಲಾಯಿಸಲಾಗಿತ್ತು. ಇವರ ತಂಡದೊAದಿಗೆ ಬೆಂಗಳೂರಿನ ರ‍್ಯಾಲಿಪಟುಗಳಾದ ಪಿವಿಎಸ್ ಮೂರ್ತಿ ಹಾಗೂ ವಿನಯ್ ಥೋಮಸ್ ಭಾಗವಹಿಸಿದ್ದರು.