ಮಡಿಕೇರಿ, ಜೂ. ೩: ಮಡಿಕೇರಿ ನಗರಸಭೆಯ ೨ನೇ ಅವಧಿಯ ಅಧ್ಯಕ್ಷರಾಗಿ ಕಲಾವತಿ ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಜೈನಿ ಆಯ್ಕೆಗೊಂಡಿದ್ದು, ನಗರದ ಅಭಿವೃದ್ಧಿಗೆ ಅವರುಗಳು ಕಂಡಿರುವ ಕನಸು, ಯೋಜನೆಗಳ ಕಾರ್ಯಗತ, ಆಡಳಿತದಲ್ಲಿ ತರಬೇಕಾದ ಸುಧಾರಣೆಯ ಕುರಿತು ‘ಶಕ್ತಿ’ ನಡೆಸಿದ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊAಡಿದ್ದಾರೆ. ದೊರೆತಿರುವ ಒಂದೂವರೆ ವರ್ಷದ ಅವಧಿಯಲ್ಲಿ ಮಡಿಕೇರಿ ನಗರವನ್ನು ಸ್ವಚ್ಛಂದ ಹಾಗೂ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಾಗಿ ಭರವಸೆಯ ನುಡಿಗಳನ್ನಾಡಿದ್ದಾರೆ.