ಬ್ರೆಜಿಲ್, ಜೂ. ೩: ಪಾಕಿಸ್ತಾನದ ಎಲ್ಲೆಡೆ ಕಂಡುಬರುವ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಂಡರೆ ಮಾತ್ರ ಆ ರಾಷ್ಟçದೊಂದಿಗೆ ಮಾತುಕತೆಗೆ ಭಾರತ ಮುಂದಾಗಲಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಮಂಗಳವಾರ ಹೇಳಿದ್ದಾರೆ.
ಬ್ರೆಜಿಲ್ಗೆ ತೆರಳಿರುವ ಸರ್ವ ಪಕ್ಷ ನಿಯೋಗದ ನಾಯಕತ್ವ ವಹಿಸಿರುವ ಶಶಿ ತರೂರ್, ‘ಪಾಕಿಸ್ತಾನ ಹೇಳುವಂತೆ ಅವರು ಮುಗ್ದರಾಗಿದ್ದರೆ ವಾಟೆಂಡ್ ಉಗ್ರರಿಗೆ ಯಾಕೆ ಸುರಕ್ಷಿತ ನೆಲೆ ಒದಗಿಸಿದ್ದಾರೆ? ಉಗ್ರರು ಶಾಂತಿಯುತವಾಗಿ ಬದುಕಲು, ತರಬೇತಿ ಶಿಬಿರಗಳನ್ನು ನಡೆಸಲು ಮತ್ತಷ್ಟು ಜನರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಶಸ್ತಾçಸ್ತçಗಳೊಂದಿಗೆ ಸಜ್ಜುಗೊಳಿಸಲು ಏಕೆ ಸಮರ್ಥರಾಗಿದ್ದಾರೆ? ಎಂದು ಶಶಿ ತರೂರ್ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದೊಂದಿಗೆ ಮಾತನಾಡಲು ಭಾಷೆಯ ತೊಂದರೆ ಇಲ್ಲ: ಆದರೆ, ಸಭ್ಯತೆ ಮತ್ತು ಶಾಂತಿಗಾಗಿ ಸಾಮಾನ್ಯ ದೃಷ್ಟಿಯನ್ನು ಕಂಡುಕೊಳ್ಳುವುದಾಗಿದೆ. ಎಲ್ಲೆಡೆ ಕಂಡುಬರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲಿ, ತದನಂತರ ನಾವು ಮಾತುಕತೆ ನಡೆಸಬಹುದು ಎಂದು ಅವರು ಹೇಳಿದರು.
ನಾವು ಶಾಂತಿಯಿAದ ಉಳಿಯಲು, ಬೆಳೆಯಲು ಮತ್ತು ಅಭಿವೃದ್ಧಿಯಾಗಲು ಬಯಸುತ್ತೇವೆ. ಅವರು ನಮ್ಮನ್ನು ಒಂಟಿಯಾಗಿ ಬಿಡಲು ಬಯಸುವುದಿಲ್ಲ. ಅವರು ನಮ್ಮನ್ನು ನಾಶಪಡಿಸಲು ಬಯಸುತ್ತಾರೆ. ಆದರೆ ಅದು ಅಂದುಕೊAಡಷ್ಟು ಸುಲಭವಲ್ಲಾ. ಆ ಕಲ್ಪನೆಯನ್ನು ಮರೆತುಬಿಡುವುದೇ ಉತ್ತಮ ಎಂದು ಅವರು ಹೇಳಿದರು.
೧೧ನೇ ಬ್ರಿಕ್ಸ್ ಸಂಸದೀಯ ವೇದಿಕೆಯನ್ನು ಆಯೋಜಿಸುತ್ತಿರುವ ಬ್ರೆಜಿಲ್ ಭಾರತೀಯ ನಾಗರಿಕರ ವಿರುದ್ಧ ಭಯೋತ್ಪಾದನೆ ಕುರಿತು ಹೇಳಿಕೆ ನೀಡಬಹುದು ಎಂದು ಭಾರತ ಆಶಿಸುತ್ತಿದೆಯೇ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ತರೂರ್, ಬ್ರಿಕ್ಸ್ ವಿಭಿನ್ನ ಕಾರ್ಯಸೂಚಿಯನ್ನು ಹೊಂದಿದೆ ಎಂದು ಭಾವಿಸುತ್ತೇನೆ. ಈಗಾಗಲೇ ಅವರು ಈ ವಿಚಾರದಲ್ಲಿ ಕೆಲಸ ಮಾಡುತ್ತಿದ್ದರೂ ಅದು ನನಗೆ ಗೊತ್ತಿಲ್ಲ ಎಂದರು. ಭಯೋತ್ಪಾದನೆಯ ಮೂಲಸೌಕರ್ಯವನ್ನು ಕಿತ್ತುಹಾಕುವಲ್ಲಿ ಪಾಕಿಸ್ತಾನ ಸಂಪೂರ್ಣ ವಿಫಲವಾಗಿದೆ ಎಂದು ಅವರು ಹೇಳಿದರು.
ಭಾರತದ ನಿಲುವನ್ನು ವಿದೇಶಗಳು ಗುರುತಿಸುತ್ತಿವೆಯೇ? ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ರಾಷ್ಟçಗಳು ಗುರುತಿಸುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಶಿ ತರೂರ್, ನಿಯೋಗವು ಇಲ್ಲಿಯವರೆಗೆ ನಾಲ್ಕು ರಾಷ್ಟçಗಳಾದ ಗಯಾನಾ, ಪನಾಮ, ಕೊಲಂಬಿಯಾ ಮತ್ತು ಬ್ರೆಜಿಲ್ಗೆ ತೆರಳಿದೆ. ಹೋದ ಕಡೆಯಲ್ಲೆಲ್ಲಾ ಸ್ಪಷ್ಟವಾಗಿ ಯಶಸ್ಸನ್ನು ಸಾಧಿಸಿದ್ದೇವೆ. ಯಶಸ್ಸಿನ ಬಗ್ಗೆ ಹೆಮ್ಮೆಪಡಲು ಇಷ್ಟಪಡುವುದಿಲ್ಲ. ಅದು ಇತರರಿಂದ ನಿರ್ಣಯಿಸಬೇಕಾಗುತ್ತದೆ. ಆದರೆ ಕೆಲವು ತಪ್ಪುಗ್ರಹಿಕೆಗಳನ್ನು ಹೊಂದಿರುವವರಿಗೆ ಸೇರಿದಂತೆ ಭೇಟಿಯಾದ ರಾಷ್ಟçಗಳಲ್ಲಿ ನಮ್ಮ ಸಂದೇಶವನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಶಶಿತರೂರ್ ತಿಳಿಸಿದರು.