*ಸಿದ್ದಾಪುರ. ಜೂ. ೩: ಕಳೆದ ಅನೇಕ ವರ್ಷಗಳಿಂದ ಗ್ರಾ.ಪಂ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ನಂಜರಾಯಪಟ್ಟಣ ಅಂಚೆ ಕಚೇರಿ ಇಂದು ಅವ್ಯವಸ್ಥೆಗಳಿಂದ ಕೂಡಿದೆ.

ಮಳೆ ಬಂದರೆ ಜಲಾವೃತಗೊಳ್ಳುವ ಕಚೇರಿಯ ಕಟ್ಟಡದ ಮೇಲ್ಛಾವಣಿಯಿಂದ ನೀರು ಸೋರುತ್ತಲೇ ಇದೆ. ಸಂಪರ್ಕ ಸಾಧನಗಳಲ್ಲಿ ಸಾಮಾಜಿಕ ಜಾಲತಾಣ ಎಷ್ಟೇ ಪ್ರಭಾವ ಬೀರುತ್ತಿದ್ದರೂ ಅಗತ್ಯ ವ್ಯವಹಾರಗಳಿಗೆ ಅಂಚೆ ಕಚೇರಿ ಇಂದು ಕೂಡ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿದೆ. ಇದೇ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಅಂಚೆ ಕಚೇರಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮದಲ್ಲಿ ಅಂಚೆ ಕಚೇರಿಯೊಂದಿದೆ. ಗ್ರಾ.ಪಂ.ಗೆ ಸೇರಿದ ಕಟ್ಟಡದಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿದೆ ಮತ್ತು ಜನೋಪಯೋಗಿ ಕಚೇರಿಯಾಗಿ ಸಂಪರ್ಕ ಸಾಧಿಸಿದೆ. ಆದರೆ ಕಳೆದ ೨ ವಾರಗಳ ಕಾಲ ಸುರಿದ ಧಾರಾಕಾರ ಮಳೆಗೆ ಕಚೇರಿ ಜಲಾವೃತಗೊಂಡು ಅವ್ಯವಸ್ಥೆ ಕಾಡಿತು. ಮೇಲ್ಛಾವಣಿಯಿಂದಲೂ ನೀರು ಸೋರಿ ಕಡತಗಳು ಮತ್ತು ಕಂಪ್ಯೂಟರ್‌ಗೆ ಹಾನಿಯಾಗುವ ಆತಂಕ ಎದುರಾಯಿತು.

ಇದನ್ನು ಮನಗಂಡ ನಂಜರಾಯಪಟ್ಟಣ ಗ್ರಾ.ಪಂ. ಅಧ್ಯಕ್ಷ ಸಿ.ಎಲ್. ವಿಶ್ವ ಅವರು ಹೆಂಚುಗಳನ್ನು ಅಳವಡಿಸಲು ಕ್ರಮ ಕೈಗೊಂಡರು. ಆದರೆ ಹೆಂಚುಗಳನ್ನು ಹಾಕಿದ ನಂತರವೂ ಅಂಚೆ ಕಚೇರಿ ಸೋರುತ್ತಿದ್ದು, ಕೆಲಸ ಮಾಡಲು ಸಾಧ್ಯವಾಗದೆ ಸಿಬ್ಬಂದಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಸ್ಟ್ ಮಾಸ್ಟರ್ ಗ್ರಾ.ಪಂ.ಗೆ ಮತ್ತೊಮ್ಮೆ ದೂರು ಸಲ್ಲಿಸಿ ಮಳೆಯಿಂದ ಯಾವುದೇ ತೊಂದರೆಯಾಗದAತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. - ಅಂಚೆಮನೆ ಸುಧಿ