ಶನಿವಾರಸAತೆ, ಮೇ ೨೭: ಶನಿವಾರಸಂತೆಯ ತೋಟವೊಂದರಲ್ಲಿ ಕೂಲಿ ಕಾರ್ಮಿಕನಾಗಿರುವ ಅಸ್ಸಾಂ ಮೂಲದ ವ್ಯಕ್ತಿ ಮೈನೂಲ್ ಹಕ್ ಎಂಬಾತ ಅಸ್ಸಾಂಗೆ ಹೋಗಿ ಮರಳಿ ಶನಿವಾರಸಂತೆಗೆ ಹಿಂದಿರುಗುವಾಗ ಅಕ್ರಮವಾಗಿ ತಂದಿದ್ದ ೧ ಕೆ.ಜಿ. ಗಾಂಜಾದ ಬಗ್ಗೆ ದೊರೆತ ಖಚಿತ ಮಾಹಿತಿ ಅನ್ವಯ ಶನಿವಾರಸಂತೆ ಪೊಲೀಸರು ಆತನನ್ನು ಸಂತೆಮಾರುಕಟ್ಟೆ ಬಳಿ ಲೈನ್‌ಮನೆಗೆ ಹೋಗುವ ಮೊದಲೇ ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಶನಿವಾರಸAತೆ ಪೊಲೀಸ್ ಠಾಣಾ ವ್ಯಾಪ್ತಿಯ ವೃತ್ತ ನಿರೀಕ್ಷಕ ಕೃಷ್ಣರಾಜ್ ನೇತೃತ್ವದಲ್ಲಿ ಪಿಎಸ್‌ಐ ಹೆಚ್.ವೈ. ಚಂದ್ರ, ಸಿಬ್ಬಂದಿ ಹರ್ಷ, ಶಿವಪ್ಪ, ಮಹೇಶ್, ಪ್ರದೀಪ್, ಧನಂಜಯ್, ಶಶಿಧರ್, ಡಿಂಪಲ್ ಹಾಗೂ ವೆಂಕಟೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶನಿವಾರಸಂತೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಒಂದು ಕೆ.ಜಿ. ಗಾಂಜಾವನ್ನು ಪತ್ತೆಹಚ್ಚಿ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ ಪ್ರಕರಣ ಇದಾಗಿದ್ದು, ಸಾರ್ವಜನಿಕ ವಲಯದಲ್ಲಿ ಶನಿವಾರಸಂತೆ ಪೊಲೀಸ್ ಇಲಾಖೆ ಬಗ್ಗೆ, ಕಾನೂನು ಪರಿಪಾಲನೆ ಬಗ್ಗೆ ಮೆಚ್ಚುಗೆ, ಗೌರವ ವ್ಯಕ್ತವಾಗಿದೆ.