ಕರಿಕೆ, ಮೇ ೨೭: ಮಡಿಕೇರಿ ತಾಲೂಕಿನ ನೆಲಜಿ ಗ್ರಾಮದ ಪೀಠೋಪಕರಣ ಮಳಿಗೆಯೊಂದರಲ್ಲ್ಲಿ ಅಕ್ರಮವಾಗಿ ನಂದಿ ಮರದ ನಾಟಾಗಳನ್ನು ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊಡಗು ಅರಣ್ಯ ಸಂಚಾರಿ ದಳವು ೩೯ ನಂದಿ ಮರದ ನಾಟಾಗಳನ್ನು ವಶಪಡಿಸಿಕೊಂಡು ಮಳಿಗೆಯ ಮಾಲೀಕ ಕೆ.ಎಂ. ಅಶ್ರಫ್ ಎಂಬಾತನ ಮೇಲೆ ಕರ್ನಾಟಕ ಅರಣ್ಯ ಕಾಯ್ದೆ ೧೯೬೩ರ ಕಲಂ ೫೦, ೬೨, ೮೦ ಹಾಗೂ ಕರ್ನಾಟಕ ಅರಣ್ಯ ನಿಯಮ ೧೯೬೯ ರ ನಿಯಮ ೧೪೪, ೧೬೫ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದೆೆ. ಕಾರ್ಯಾಚರಣೆಯಲ್ಲಿ ಕೊಡಗು ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾನಶ್ರೀ ಹಾಗೂ ತಂಡದವರು ಪಾಲ್ಗೊಂಡಿದ್ದರು.