ಸೋಮವಾರಪೇಟೆ, ಮೇ ೨೬: ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿಯ ಗ್ರಾಮಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರೊಂದಿಗೆ ತಾಲೂಕಿನಾದ್ಯಂತ ವಾಯು ವರುಣನ ಆರ್ಭಟ ಮುಂದುವರೆದಿದ್ದು, ಗ್ರಾಮೀಣ ಭಾಗದ ಹಲವಷ್ಟು ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿವೆ. ಜನಜೀವನ ಕಳೆದೆರಡು ದಿನಗಳಿಂದ ಅಸ್ತವ್ಯಸ್ಥಗೊಂಡಿದೆ.

ಕೆಲದಿನಗಳಿAದ ಸುರಿಯುತ್ತಿರುವ ಮಳೆಗೆ ಸೋಮವಾರಪೇಟೆ-ತೋಳೂರುಶೆಟ್ಟಳ್ಳಿ-ಕೂತಿ ಮಾರ್ಗದ ಮುಖ್ಯ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸಂಚಾರಕ್ಕೆ ತೊಡಕಾಗುತ್ತಿದೆ. ರಸ್ತೆ ಅಗಲೀಕರಣದ ಸಲುವಾಗಿ ರಸ್ತೆ ಬದಿಯ ಚರಂಡಿಯನ್ನು ಮುಚ್ಚಲಾಗಿದೆ. ಇದರಿಂದಾಗಿ ಮಳೆ ನೀರು ರಸ್ತೆಯ ಮೇಲೆ ಹರಿದು ರಸ್ತೆಯು ಸಂಪೂರ್ಣ ಜಲಾವೃತವಾಗಿದೆ.

ಮುಖ್ಯರಸ್ತೆಯ ಹೊಸಬೀಡು, ಕೂಡುರಸ್ತೆ, ತೋಳೂರುಶೆಟ್ಟಳ್ಳಿಯಲ್ಲಿ ರಸ್ತೆಯ ಮೇಲೆ ನೀರು ನಿಂತಿದ್ದು ಬೈಕ್ ಸವಾರರು ಕಷ್ಟಪಡುವಂತಾಗಿದೆ. ಹೊಸಬೀಡು ಗ್ರಾಮದಲ್ಲಿ ಇತ್ತೀಚೆಗೆ ಸೇತುವೆ ಕಾಮಗಾರಿ ಮಾಡುತ್ತಿದ್ದು, ಸೇತುವೆ ಸಮೀಪದ ರಸ್ತೆಯಲ್ಲಿನ ಮೋರಿಯು ಮುರಿದು ಗುಂಡಿಬಿದ್ದಿದೆ. ದೊಡ್ಡ ವಾಹನಗಳು ಸಂಚರಿಸಿದರೆ ಗುಂಡಿ ಇನ್ನಷ್ಟು ದೊಡ್ಡದಾಗಿ ಸಂಚಾರಕ್ಕೆ ತೊಡಕಾಗಲಿದೆ. ಗುತ್ತಿಗೆದಾರರು ತಕ್ಷಣ ಈ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇನ್ನೇನು ಕೆಲ ದಿನದಲ್ಲಿ ಶಾಲಾ - ಕಾಲೇಜುಗಳು ಆರಂಭಗೊಳ್ಳಲಿದ್ದು, ಶಾಲಾ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ವಾಹನಗಳ ಸಂಚಾರ ಸರ್ಕಸ್‌ನಂತಾಗಿದೆ. ತಕ್ಷಣವೇ ಸಂಬAಧಪಟ್ಟ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹೊಸಬೀಡು ಸಮೀಪ ರಸ್ತೆಯ ಮೇಲೆ ನೀರು ನಿಂತು ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ನೀರು ರಸ್ತೆಯ ಮೇಲೆಯೇ ನಿಂತಿದ್ದು, ಪಾದಚಾರಿಗಳು ಸರ್ಕಸ್ ಮಾಡುವಂತಾಗಿದೆ.

ಕಳೆದ ೨೪ ಗಂಟೆಗಳಲ್ಲಿ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶ ವ್ಯಾಪ್ತಿಯ ಗ್ರಾಮಗಳಾದ ಕೊತ್ನಳ್ಳಿಯಲ್ಲಿ ೬.೫೦ ಇಂಚು, ಶಾಂತಳ್ಳಿಗೆ ೫.೫೦ ಇಂಚು, ಬೆಟ್ಟದಳ್ಳಿಗೆ ೪.೭೦ ಇಂಚಿನಷ್ಟು ದಾಖಲೆಯ ಮಳೆಯಾಗಿದೆ.

ವಿದ್ಯುತ್ ಕಂಬಗಳು ನೆಲಕ್ಕೆ: ಮಳೆಯೊಂದಿಗೆ ಭಾರೀ ಗಾಳಿಯೂ ಬೀಸುತ್ತಿರುವುದರಿಂದ ಮರದ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದು, ವಿದ್ಯುತ್ ಕಂಬಗಳು ಮುರಿದು ಬೀಳುತ್ತಿವೆ. ಪರಿಣಾಮ ಹಲವಷ್ಟು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಮರ ಬಿದ್ದು ೭ ಕಂಬಗಳು ನೆಲಕ್ಕುರುಳಿವೆ. ಸೆಸ್ಕ್ನಿಂದ ಪರಿಹಾಯ ಕಾರ್ಯ ಪ್ರಗತಿಯಲ್ಲಿದೆ.

ಕೊಡ್ಲಿಪೇಟೆ ಭಾಗದಲ್ಲಿ ಮರಗಳು ಧರೆಗೆ: ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು, ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತೋಟದೊಳಗೆ ಬಿದ್ದಿರುವ ಕಂಬಗಳನ್ನು ಪತ್ತೆಹಚ್ಚುವ ಕೆಲಸ ಪ್ರಗತಿಯಲ್ಲಿದೆ.

ಕೊಡ್ಲಿಪೇಟೆ ಹೋಬಳಿಯಾದ್ಯಂತ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಕೊಡ್ಲಿಪೇಟೆ-ಶನಿವಾರಸಂತೆ ಮುಖ್ಯ ಹೆದ್ದಾರಿಗೆ ಅಡ್ಡಲಾಗಿ ಬ್ಯಾಡಗೊಟ್ಟದಲ್ಲಿ ರಸ್ತೆ

(ಮೊದಲ ಪುಟದಿಂದ) ಬದಿಯಲ್ಲಿದ್ದ ಗೋಳಿ ಮರ ಹಾಗೂ ತೋಟದಲ್ಲಿದ್ದ ಬಳಂಜಿ ಮರ ಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು.

ಇದರೊಂದಿಗೆ ಕೊಡ್ಲಿಪೇಟೆ-ಮಲ್ಲಿಪಟ್ಟಣ ಮುಖ್ಯ ರಸ್ತೆಗೆ ಅಡ್ಡಲಾಗಿ ಬಸವನಾರೆ ಗ್ರಾಮದಲ್ಲಿ ಹಲಸಿನ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು, ಕೂಡ್ಲೂರು, ಕೆಳಕೊಡ್ಲಿ, ಎಣ್ಣೆಗದ್ದೆ ಭಾಗದಲ್ಲಿಯೂ ಸಹ ಮರಗಳು ಕೆಳಗುರುಳಿವೆ. ಕೊಡ್ಲಿಪೇಟೆ ಭಾಗದಲ್ಲಿ ಪ್ರಸಕ್ತ ಸಾಲಿನ ಕಳೆದ ಮೂರು ದಿನಗಳ ಮಳೆಗೆ ಒಟ್ಟು ೧೧ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕಂಬಗಳು ಧರಾಶಾಹಿಯಾದ ಹಿನ್ನೆಲೆ ಎರಡು ದಿನ ಕೊಡ್ಲಿಪೇಟೆ ಭಾಗದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ಅನಿರೀಕ್ಷಿತ ಮಳೆ ಹಾಗೂ ಹಾನಿಯ ಬಗ್ಗೆ ಎಚ್ಚೆತ್ತುಕೊಂಡಿರುವ ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

ಶಾಸಕ ಮಂತರ್‌ಗೌಡ ಭೇಟಿ: ಪಟ್ಟಣ ಸಮೀಪದ ಬೇಳೂರು ಹಾಗೂ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮರಗಳು ಉರುಳಿ ವಿದ್ಯುತ್ ಕಂಬಗಳು ಹಾನಿಗೀಡಾದ ಸ್ಥಳಗಳಿಗೆ ಶಾಸಕ ಡಾ. ಮಂತರ್ ಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದರೊಂದಿಗೆ ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊAದಿಗೆ ಸಮಾಲೋಚನೆ ನಡೆಸಿದರು. ಮಳೆ ಹಾಗೂ ಗಾಳಿ ಹೆಚ್ಚಿರುವ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸಿದ್ಧಾಪುರ, ಮೇ ೨೬: ಕಳೆದ ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಸಂಪರ್ಕವಿಲ್ಲದೆ ವೀರಾಜಪೇಟೆಯ ವಾರ್ಡ್ ಕಾರ್ಗತ್ತಲಿನಲ್ಲಿದ್ದ ವೀರಾಜಪೇಟೆ ಪುರಸಭಾ ವ್ಯಾಪ್ತಿಯ ಸುಂಕದಕಟ್ಟೆ ಹಾಗೂ ದಂತ ವ್ಯೆದ್ಯಕೀಯ ಕಾಲೇಜಿನ ಆಸುಪಾಸಿನ ನಿವಾಸಿಗಳ ಸಮಸ್ಯೆಯನ್ನು ಅರಿತು ಸ್ಥಳಿಯ ಯುವಕರುಗಳಾದ ರೋಹಿತ್, ಕೃಷ್ಣ ಅಪ್ಪುಣು, ರಾಜೇಶ್, ಮಂಜು ವಿಜು, ದಿನೇಶ್ ರಾಜೇಶ್‌ರೊಂದಿಗೆ ವೀರಾಜಪೇಟೆ ವಿದ್ಯುತ್ ಪ್ರಸರಣ ನಿಗಮದ ಸಿಬ್ಬಂದಿಗಳಾದ ವಿರೂಪಾಕ್ಷ, ಅಶೋಕ, ಹನುಮಂತು, ಹಾಗೂ ಅಪ್ಪು ಅರವರೊಂದಿಗೆ ಸ್ಥಳೀಯರು ಹಾಗೂ ವೀರಾಜಪೇಟೆ ಪುರಸಭಾ ನಾಮನಿರ್ದೇಶಕ ಸದಸ್ಯ ಶಬರೀಶ್ ಶೆಟ್ಟಿ ರವರ ಒಡಗೂಡಿ ವಿದ್ಯುತ್ ಪ್ರಸರಣ ತಂತಿಗಳ ಮೇಲೆ ಬಿದ್ದಿದ್ದ ಸುಮಾರು ಏಳರಿಂದ ಎಂಟು ದೊಡ್ಡ ಗಾತ್ರದ ಮರದ ರೆಂಬೆಗಳನ್ನು ತೆರವುಗೊಳಿಸಿದರು.

ಸ್ಥಳೀಯ ರೆಸಾರ್ಟ್ ಒಂದರ ಒಳಭಾಗದಲ್ಲಿ ಹಾದುಹೋಗಿದ್ದ ಮುಖ್ಯ ಪ್ರಸರಣದ ತಂತಿ ಮೇಲೆ ಬಿದ್ದಿದ್ದ ಭಾರೀ ಗಾತ್ರದ ಮರವನ್ನು ತೆರವುಗೊಳಿಸಿದರು. ಸಮರ್ಪಕವಾದ ವಿದ್ಯುತ್ ಸಂಪರ್ಕ ಈ ವಿಭಾಗಕ್ಕೆ ದೊರೆಯುವಂತೆ ಮಾಡಿದ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.