ನಾಪೋಕ್ಲು, ಮೇ ೨೭: ವೀರಾಜಪೇಟೆ ಸಮೀಪದ ಕೆದಮುಳ್ಳೂರಿನ ಕೊಟ್ಟಚ್ಚಿಯಲ್ಲಿ ಕಾಡಾನೆಗಳು ದಾಂಧಲೆ ನಡೆಸಿ ತೆಂಗು, ಅಡಿಕೆ, ಕಾಫಿಯ ಗಿಡಗಳನ್ನು ಮುರಿದು ಹಾಕಿವೆ.

ಪೊಕ್ಕುಳಂಡ್ರ ಪಾರ್ವತಿ ಅವರ ಮನೆಯ ಸಮೀಪದ ತೋಟಕ್ಕೆ ಸೋಮವಾರ ನಡುರಾತ್ರಿ ಕಾಡಾನೆಗಳು ನುಗ್ಗಿದ್ದು ಎಂಟು ತೆಂಗಿನ ಗಿಡಗಳು ಸೇರಿದಂತೆ ಅಡಿಕೆ, ಬಾಳೆ ಗಿಡಗಳನ್ನು ಮುರಿದುಹಾಕಿ ನಷ್ಟಪಡಿಸಿವೆ. ಕೃಷಿಫಸಲು ನಷ್ಟವಾಗಿದ್ದು ಸಂಬAಧಪಟ್ಟವರು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.