ಸೋಮವಾರಪೇಟೆ, ಮೇ.೨೩ : ಕಳೆದ ತಾ.೯ರಂದು ಕುಶಾಲನಗರ ದಿಂದ ಸೋಮವಾರಪೇಟೆಗೆ ಆಗಮಿಸಿ, ಸ್ನೇಹಿತರಿಂದಲೇ ಹತ್ಯೆಯಾಗಿದ್ದ ಪಟ್ಟಣದ ಕಕ್ಕೆಹೊಳೆ ಜಂಕ್ಷನ್ ನಿವಾಸಿ ಎನ್.ಡಿ. ಸಂಪತ್ ಅಲಿಯಾಸ್ ಶಂಭುವಿನ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖಾ ತಂಡ ಅಂತಿಮವಾಗಿ ಐವರು ಆರೋಪಿಗಳನ್ನು ಬಂಧಿಸಿದ್ದು, ಬಂದಿತ ಐವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಪ್ರಕರಣದಲ್ಲಿ ಎ-೧ ಆರೋಪಿಯಾಗಿ ಹಾನಗಲ್ಲು ಗ್ರಾಮದ ಕಿರಣ್ನನ್ನು ಹೆಸರಿಸಿದ್ದರೆ, ನಂತರದ ಸ್ಥಾನದಲ್ಲಿ ಕಾನ್ವೆಂಟ್ಬಾಣೆಯ ಪಿ.ಎಂ. ಗಣಪತಿ, ಕಿರಣ್ನ ಪತ್ನಿ ಸಂಗೀತ, ಗಣಪತಿಯ ಸಹೋದರ ಗೋಪಿ, ಕಿರಣ್ನ ಸಂಬAಧಿ ಶ್ರೀಧರ್ ಅವರುಗಳನ್ನು ಗುರುತಿಸಿ, ಎಫ್ಐಆರ್ ದಾಖಲಿಸಿದ್ದಾರೆ.
ಬಂದಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆ ಅವಶ್ಯಕತೆಯಿರುವ ಹಿನ್ನೆಲೆ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದ ಎ-೪ ಮತ್ತು ಎ-೫ ಆರೋಪಿಗಳಾದ ಗೋಪಿ ಹಾಗೂ ಶ್ರೀಧರ್ ಅವರುಗಳನ್ನು ತಾ. ೨೬ರವರೆಗೆ, ಎ-೧ ರಿಂದ ಎ.೩ರವರೆಗಿನ ಆರೋಪಿಗಳಾದ ಕಿರಣ್, ಗಣಪತಿ ಮತ್ತು ಸಂಗೀತ ಅವರುಗಳನ್ನು ತಾ. ೨೭ರವರೆಗೆ ಪೊಲೀಸ್ ಕಸ್ಟಡಿಗೆ ಒಳಪಡಿಸಲಾಗಿದೆ.
ಆರೋಪಿಗಳು ಕೃತ್ಯ ಎಸಗುವುದಕ್ಕೂ ಮುನ್ನ ಮಾಡಿ ಕೊಂಡಿದ್ದ
(ಮೊದಲ ಪುಟದಿಂದ) ಪೂರ್ವ ತಯಾರಿ, ಹತ್ಯೆ ಮಾಡಿದ ನಂತರ ಮೃತದೇಹದೊಂದಿಗೆ ಓಡಾಡಿದ ಸ್ಥಳಗಳು, ಶವವನ್ನು ಎಸೆದ ಸ್ಥಳ, ಕೃತ್ಯಕ್ಕೆ ಬಳಸಿದ ಹತ್ಯಾರುಗಳನ್ನು ಅಡಗಿಸಿಟ್ಟಿದ್ದ ಸ್ಥಳ, ನಂತರ ತಲೆ ಮರೆಸಿಕೊಂಡು ತಂಗಿದ್ದ ಸ್ಥಳ ಇತ್ಯಾದಿ ಅಂಶಗಳ ಬಗ್ಗೆ ವಿಚಾರಣೆ ತೀವ್ರಗೊಳಿಸಿರುವ ಪೊಲೀಸರು, ಆರೋಪಿಗಳಿಂದ ಇಂಚಿAಚೂ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ಈ ನಡುವೆ ಕೊಲೆ ಮಾಡಿನ ನಂತರ ಸಂಪತ್ನ ಮೃತದೇಹವನ್ನು ಹುಣಸೂರಿನ ಕೆರೆಯೊಂದಕ್ಕೆ ಎಸೆಯುವ ಯೋಜನೆ ಕೊನೆ ಕ್ಷಣದಲ್ಲಿ ವಿಫಲಗೊಂಡು, ಮೈಸೂರು ಜಿಲ್ಲೆಗೆ ವರ್ಗವಾಗಬೇಕಿದ್ದ ಮೃತದೇಹ ಹಾಸನ ಜಿಲ್ಲೆಗೆ ಸಾಗಿಸಲ್ಪಟ್ಟ ವಿಚಾರಗಳನ್ನು ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಸಂಪತ್ನ ಹತ್ಯೆ ಘಟನೆಗೆ ಸಂಬAಧಿಸಿದAತೆ ಆರೋಪಿಗಳಾದ ಕಿರಣ್ ಹಾಗೂ ಗೋಪಿಯನ್ನು ಬೆಂಗಳೂರಿನಿAದ, ಗಣಪತಿಯನ್ನು ಬೆಳ್ತಂಗಡಿಯಿAದ, ಶ್ರೀಧರ್ನನ್ನು ಚನ್ನರಾಯಪಟ್ಟಣದಿಂದ, ಸಂಗೀತಾಳನ್ನು ಹಾನಗಲ್ಲು ಗ್ರಾಮದ ಮನೆಯಿಂದ ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ತೀವ್ರಗೊಳಿಸಿದ್ದಾರೆ.
ಸಂಗೀತಾಳ ಮಾತು ಕೇಳಿ ಹಾನಗಲ್ಲು ಕೆರೆ ಬಳಿಯ ಖಾಲಿ ಜಾಗಕ್ಕೆ ಆಗಮಿಸಿದ ಸಂಪತ್ ಮೇಲೆ, ಕಾಡಿನಂತಿರುವ ಜಾಗದೊಳಗೆ ಕುಳಿತಿದ್ದ ಗಣಪತಿ ಗುಂಡು ಹಾರಿಸಿದ್ದು, ಇದು ಗುರಿ ಮುಟ್ಟಿಲ್ಲ. ಮಳೆಯಿಂದಾಗಿ ನೆಲ ಜಾರಿದ್ದು, ಗಣಪತಿ ಕೋವಿಯೊಂದಿಗೆ ಕೆಳ ಬೀಳುತ್ತಿದ್ದಂತೆ, ಅನಿರೀಕ್ಷಿತ ಘಟನೆಯಿಂದ ಸಂಪತ್ ಎಚ್ಚರಗೊಂಡು ತಕ್ಷಣ ಸ್ಥಳದಿಂದ ಕಾಲ್ಕೀಳಲು ಮುಂದಾದ. ಆದರೆ ಕತ್ತಿಯೊಂದಿಗೆ ಹೊಂಚು ಹಾಕಿದ್ದ ಕಿರಣ್, ಏಕಾಏಕಿ ಸಂಪತ್ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದಾನೆ. ಮತ್ತೊಂದು ಅನಿರೀಕ್ಷಿತ ಘಟನೆಯಿಂದ ಎಚ್ಚರಗೊಳ್ಳುವ ಮೊದಲೇ ಸಂಪತ್ ಹೆಣವಾಗಿದ್ದ.
ಗುಂಡಿನ ಶಬ್ದ ಕೇಳುತ್ತಿದ್ದಂತೆ ಸಂಗೀತಾ ಸ್ಥಳದಿಂದ ಓಡಿ ಮನೆಗೆ ಬಂದು ಬಾಗಿಲು ಭದ್ರಪಡಿಸಿಕೊಂಡಿದ್ದಾಳೆ. ಸಂಪತ್ ಮೇಲೆ ಅದಾಗಲೇ ದ್ವೇಷ ಇದ್ದುದರಿಂದ ಕಿರಣ್ ಹಾಗೂ ಗಣಪತಿ ಹೊಡೆಯಬಹುದು ಎಂದಷ್ಟೇ ಸಂಗೀತಾ ಭಾವಿಸಿದ್ದಳು. ಆದರೆ ಹತ್ಯೆಯ ಬಗ್ಗೆ ಊಹಿಸಿರಲಿಲ್ಲ ಎಂದು ವಿಚಾರಣೆ ಸಂದರ್ಭ ಸಂಗೀತಾ ಬಾಯಿಬಿಟ್ಟಿದ್ದಾಳೆ ಎನ್ನಲಾಗಿದೆ.
ಕೃತ್ಯಕ್ಕೆ ಬಳಸಿದ ಕೋವಿಯನ್ನು ತೋಟದೊಳಗೆ ಅಡಗಿಸಿಟ್ಟು, ಸಂಗೀತಾಳ ಮನೆಗೆ ಆಗಮಿಸಿದ ಆರೋಪಿಗಳು ಬಟ್ಟೆಯನ್ನು ಬದಲಿಸಿದ್ದಾರೆ. ಈ ಬಟ್ಟೆಗಳೂ ಸೇರಿದಂತೆ ಸಂಪತ್ ಧರಿಸಿದ್ದ ಬಟ್ಟೆಯನ್ನು ಬ್ಯಾಗಿನಲ್ಲಿ ಹಾಕಿದ್ದು ಇದನ್ನು ಸಂಗೀತಾ ಸುಟ್ಟಿದ್ದಾಳೆ. ಈ ಬ್ಯಾಗಿನಲ್ಲಿ ಸಂಪತ್ಗೆ ಸೇರಿದ್ದ ಮೊಬೈಲ್ಗಳೂ ಇದ್ದವು ಎನ್ನಲಾಗಿದೆ. ನಂತರ ಸಂಪತ್ ತಂದಿದ್ದ ಪುಂಟೋ ಕಾರಿನಲ್ಲಿಯೇ ಆತನ ಶವವನ್ನು ಇಟ್ಟುಕೊಂಡು ತಾಕೇರಿ, ಗರ್ವಾಲೆ ಮಾರ್ಗದಲ್ಲಿ ಹಟ್ಟಿಹೊಳೆ ಸಮೀಪ ಹೋಗಿದ್ದಾರೆ.
ಇಲ್ಲಿಂದ ಮೊದಲೇ ಯೋಜನೆ ರೂಪಿಸಿದಂತೆ ಬೆಂಗಳೂರಿನಿAದ ಬಾಡಿಗೆ ಕಾರನ್ನು ಕರೆಸಿಕೊಂಡು, ಮಡಿಕೇರಿಯಿಂದ ೪ ಲೀಟರ್ ಪೆಟ್ರೋಲ್ ತರುವಂತೆ ಚಾಲಕನೋರ್ವನಿಗೆ ಹೇಳಿ, ಆ ಪೆಟ್ರೋಲ್ನ್ನು ಸಂಪತ್ ತಂದಿದ್ದ ಕಾರಿಗೆ ತುಂಬಿಸಿಕೊAಡು, ನಂತರ ಹಟ್ಟಿಹೊಳೆಯಿಂದ ಒಳ ರಸ್ತೆಯ ಮೂಲಕ ಬೆಟ್ಟದಳ್ಳಿ ಮಾರ್ಗವಾಗಿ ಕುಂದಳ್ಳಿ, ಮಾಗೇರಿ, ಬಾಣಗೇರಿ ಮೂಲಕ ಸಾಗಿದ್ದಾರೆ. ಬಾಣಗೇರಿ ಸಮೀಪದ ಹೊಸಳ್ಳಿಯಲ್ಲಿ ಮೃತದೇಹವನ್ನು ಎಸೆದು, ಕಲ್ಲಹಳ್ಳಿಯಲ್ಲಿ ಪುಂಟೋ ಕಾರನ್ನು ನಿಲ್ಲಿಸಿ, ಬೆಂಗಳೂರಿನ ಚಾಲಕ ತಂದಿದ್ದ ಇಟಿಯೋಸ್ ಕಾರಿನಲ್ಲಿ ವಾಪಸ್ ಮನೆಗೆ ಆಗಮಿಸಿದ್ದಾರೆ.
ಮನೆಗೆ ಆಗಮಿಸಿದ ಆರೋಪಿಗಳು ಮತ್ತೆ ಬಟ್ಟೆ ಬದಲಿಸಿದ್ದು, ಹಳೆಯ ಬಟ್ಟೆಯನ್ನು ಸುಟ್ಟಿದ್ದಾರೆ. ಮಾರನೇ ದಿನ ಇಲ್ಲೇ ಇದ್ದು, ನಂತರ ಊರುಬಿಟ್ಟಿದ್ದಾರೆ. ಈ ನಡುವೆ ಹತ್ಯೆ ಘಟನೆಯಲ್ಲಿ ಉಳಿದ ಈರ್ವರು ಪಾತ್ರವಹಿಸಿರುವುದು ಪೊಲೀಸರ ತನಿಖೆಯಿಂದ ಹೊರಬಂದಿದೆ.
ಗಣಪತಿಯ ಸಹೋದರ ಗೋಪಿ ಬೆಂಗಳೂರಿನಲ್ಲಿದ್ದು, ಗಣಪತಿಯ ಸೂಚನೆಯಂತೆ ಬಾಡಿಗೆ ಕಾರಿಗೆ ನಂಬರ್ ಪ್ಲೇಟ್ ಬದಲಿಸಿ ಪರಿಚಯ ಇರುವ ಮನು ಎಂಬಾತನನ್ನು ಕಳುಹಿಸಿದ್ದಾನೆ. ಇಟಿಯೋಸ್ ಕಾರಿನಲ್ಲಿ ಮನು ಆಗಮಿಸಿ, ಹಟ್ಟಿಹೊಳೆಯಲ್ಲಿ ಪೆಟ್ರೋಲ್ ನೀಡಿ ಕಾರನ್ನು ಹಿಂಬಾಲಿಸಿ, ಕಲ್ಲಹಳ್ಳಿಯಿಂದ ಗಣಪತಿ ಹಾಗೂ ಕಿರಣ್ನನ್ನು ವಾಪಸ್ ಮನೆಗೆ ಕರೆತಂದಿದ್ದಾನೆ.
ನನ್ನ ಅಣ್ಣನಿಗೆ ವಿರೋಧಿಗಳು ಹೆಚ್ಚಿದ್ದು, ಅಸಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರನ್ನು ಯಾರಾದರೂ ಗಮನಿಸಿದರೆ ಮತ್ತೆ ಹಿಂಬಾಲಿಸುತ್ತಾರೆ. ಹೀಗಾಗಿ ನಕಲಿ ನಂಬರ್ ಪ್ಲೇಟ್ ಅಳವಡಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಗೋಪಿ ನಂಬಿಸಿ, ನಂಬರ್ ಪ್ಲೇಟ್ ನೀಡಿ ಕಳುಹಿಸಿದ್ದಾನೆ. ಹತ್ಯೆ ಪ್ರಕರಣದಲ್ಲಿ ಚಾಲಕನ ಪಾತ್ರ ಇಲ್ಲದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.
ಹುಣಸೂರಿನ ಕೆರೆಗೆ ಸ್ಕೆಚ್: ಕೃತ್ಯ ನಡೆಸಿದ ನಂತರ ಸಂಪತ್ನ ಮೃತದೇಹವನ್ನು ಹುಣಸೂರಿನ ಕೆರೆಗೆ ಹಾಕುವ ಬಗ್ಗೆ ಕಿರಣ್ನ ಸಂಬAಧಿ ಶ್ರೀಧರ್ ಸ್ಕೆಚ್ ರೂಪಿಸಿದ್ದ ಎನ್ನಲಾಗಿದೆ. ಮೃತದೇಹವನ್ನು ಟಾರ್ಪಲ್ನಲ್ಲಿ ಸುತ್ತಿ, ಕಲ್ಲು ಕಟ್ಟಿ ಕೆರೆಗೆ ಹಾಕಿದರೆ ಮೃತದೇಹ ತೇಲುವುದಿಲ್ಲ. ಇದರೊಂದಿಗೆ ದುರ್ವಾಸನೆಯೂ ಬರುವುದಿಲ್ಲ ಎಂದು ಯೋಜಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಮಾಗೇರಿಯತ್ತ ಹೋಗಿದ್ದಾರೆ.
ಕಿರಣ್ ಮನೆಯಲ್ಲಿತ್ತು ಸಂಪತ್ನ ಚಿನ್ನ: ಪೊಲೀಸ್ ಕಸ್ಟಡಿಯಲ್ಲಿರುವ ಕಿರಣ್ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಕೃತ್ಯ ನಡೆದ ದಿನ ಸಂಪತ್ ಧರಿಸಿದ್ದ ಚಿನ್ನದ ಚೈನ್ನ್ನು ಕಿರಣ್ನ ಮನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೆ ಹಿಂಭಾಗದಲ್ಲಿ ಕೊಟ್ಟಿಗೆಯಂತಿರುವ ಕೊಠಡಿಯ ಗೋಡೆಯೊಳಗೆ ಚೈನ್ನ್ನು ಅಡಗಿಸಿಟ್ಟು, ಇಟ್ಟಿಗೆಯಿಂದ ಪ್ಲಾಸ್ಟರಿಂಗ್ ಮಾಡಲಾಗಿತ್ತು. ಇದನ್ನು ಪೊಲೀಸರ ಸಮಕ್ಷಮ ಕಿರಣ್ ತೆಗೆದು ತನಿಖಾಧಿಕಾರಿಗಳಿಗೆ ಕೊಟ್ಟಿದ್ದಾನೆ. ಹಾಗೆಯೇ ತೋಟದೊಳಗೆ ಇಟ್ಟಿದ್ದ ಕೋವಿ, ಕೃತ್ಯಕ್ಕೆ ಬಳಸಿದ ಒಂದು ದೊಣ್ಣೆ, ಕತ್ತಿ, ಕಿರಣ್ನ ಮಹೀಂದ್ರ ಎಲೆಕ್ಟ್ರಿಕ್ ಕಾರು, ಮನುವಿನ ಇಟಿಯೋಸ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
೭ ಲಕ್ಷಕ್ಕೆ ಸುಪಾರಿ-ತನಿಖೆಯಿಂದ ಬಹಿರಂಗ: ಈ ಮಧ್ಯೆ ಸಂಪತ್ನನ್ನು ಮುಗಿಸಲು ಸೋಮವಾರಪೇಟೆಯ ರೌಡಿಶೀಟರ್ ಓರ್ವನಿಗೆ ಕಿರಣ್ ಹಂತ ಹಂತವಾಗಿ ೭ ಲಕ್ಷ ನೀಡಿದ್ದ ಎನ್ನಲಾಗಿದೆ. ಹಳೆಯ ಕಾರು ಖರೀದಿಗೆ, ಸಹಪಾಠಿಗಳಿಗೆ ನೀಡಲು ಎಂದು ರೌಡಿಶೀಟರ್ ಹಣ ಪಡೆದಿದ್ದ. ಆದರೆ ಕೃತ್ಯ ಎಸಗಲು ಮುಂದಾಗಿರಲಿಲ್ಲ. ಸಹಪಾಠಿ ಜೈಲಿನಲ್ಲಿದ್ದಾನೆ ಬಂದ ನಂತರ ಕೆಲಸ ಮಾಡುತ್ತೇವೆ ಎಂದು ಕಾಲಹರಣ ಮಾಡುತ್ತಿದ್ದ. ಇದರಿಂದಾಗಿ ಕಿರಣ್ ಹಾಗೂ ಗಣಪತಿಯೇ ಸಂಪತ್ಗೆ ಮುಹೂರ್ತವಿಟ್ಟಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಇದೀಗ ಸಂಪತ್ ಹತ್ಯೆಗೆ ಸಂಬAಧಿಸಿದAತೆ ಒಟ್ಟು ೫ ಮಂದಿ ಆರೋಪಿಗಳು ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಆರೋಪಿಗಳೊಂದಿಗೆ ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದು, ವಿಚಾರಣೆ ಪೂರ್ಣಗೊಂಡ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ಕೈಗೊಂಡಿದ್ದಾರೆ.