ಸೋಮವಾರಪೇಟೆ, ಮೇ.೨೩: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಮರುಮೌಲ್ಯಮಾಪನದಲ್ಲಿ ವಿದ್ಯಾರ್ಥಿನಿಯರು ಜಿಲ್ಲೆಗೆ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.

ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು

(ಮೊದಲ ಪುಟದಿಂದ) ವಿದ್ಯಾಸಂಸ್ಥೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸಿ.ಎಸ್.ಆದ್ವಿ ೬೨೩ ಅಂಕಗಳನ್ನು ಪಡೆದು ಶೇ.೯೯.೬೮ ಫಲಿತಾಂಶದೊAದಿಗೆ ಕೊಡಗು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ. ಕನ್ನಡ ೧೨೪, ಇಂಗ್ಲೀಷ್ ೧೦೦, ಹಿಂದಿ ೧೦೦, ಗಣಿv ೧೦೦, ವಿಜ್ಞಾನ ೯೯, ಸಮಾಜ ವಿಜ್ಞಾನ ೧೦೦, ಅಂಕಗಳಿಸಿ ಸಾಧನೆ ಮಾಡಿದ್ದಾರೆ. ಬೆಂಕಳ್ಳಿ-ಕೊತ್ನಳ್ಳಿ ಗ್ರಾಮದ ಕೃಷಿಕ ಸತೀಶ್ ಹಾಗೂ ಪ್ರಗತಿ ದಂಪತಿ ಪುತ್ರಿಯಾಗಿರುವ ಆದ್ವಿ ಅವರು ತನ್ನೂರಿಗೆ ಸರ್ಕಾರಿ ಬಸ್ ಇಲ್ಲದಿರುವುದರಿಂದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿದ್ದುಕೊಂಡು ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದರು.

ಶನಿವಾರಸಂತೆ ಸೆಕ್ರೇಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಡಿ.ತೇಜಸ್ವಿನಿ ೬೨೫ ಕ್ಕೆ ೬೨೧ ಅಂಕಗಳೊAದಿಗೆ ಶೇ.೯೯.೩೬ ಫಲಿತಾಂಶದೊAದಿಗೆ ಕೊಡಗು ಜಿಲ್ಲೆಯ ಟಾಪರ್ ಆಗಿದ್ದಾರೆ. ಕನ್ನಡ ೯೯, ಇಂಗ್ಲೀಷ್ ೯೪, ಭೌತಶಾಸ್ತç ೧೦೦, ರಸಾಯನಶಾಸ್ತç ೯೮, ಗಣಿತ ೧೦೦, ಗಣಕ ವಿಜ್ಞಾನ ೧೦೦, ಅಂಕಗಳನ್ನು ಗಳಿಸಿದ್ದಾರೆ. ಬೀರಳ್ಳ ಗ್ರಾಮದ ಮಾಜಿ ಸೈನಿಕ ಹಾಗೂ ಕೃಷಿಕ ಎಲ್.ಎನ್.ಧರ್ಮಪ್ಪ, ಕೆ.ಬಿ.v Áರಾಮಣಿ ದಂಪತಿ ಪುತ್ರಿ.