ಮಡಿಕೇರಿ, ಮೇ ೨೩: ಮೈಸೂರು ದಸರಾ ಅಂಬಾರಿ ಆನೆ ಬಲರಾಮನ ಸ್ಮಾರಕ ನಿರ್ಮಾಣಕ್ಕೆ ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್ಮೆಂಟ್ ಟ್ರಸ್ಟ್ ವತಿಯಿಂದ ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮನವಿ ಸಲ್ಲಿಸಲಾಯಿತು. ಬಲರಾಮ ಆನೆಯ ಅಭಿಮಾನಿಗಳ ಬಳಗ ಮತ್ತಿಗೋಡು ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಾಣಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಶೀಘ್ರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಟ್ರಸ್ಟ್ ಮತ್ತು ಬಳಗದ ನೇತೃತ್ವದಲ್ಲಿ ಪ್ರತಿಭಟನೆ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾಧ್ಯಕ ಮೈನಾ ಲೋಕೇಶ್ ಸಂಘಟನಾ ಕಾರ್ಯದರ್ಶಿ ವಿಷ್ಣು ನಾಚಪ್ಪ ಹಾಗೂ ಬಲರಾಮ ಆನೆಯ ಅಭಿಮಾನಿ ಬಳಗ ಸಂಚಾಲಕರಾದ ಜಗನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.