ಐಗೂರು, ಮೇ ೨೩: ನೇಪಾಳದ ಕಟ್ಮಂಡುವಿನಲ್ಲಿ ದಿನಾಂಕ ತಾ. ೩೦ ಮತ್ತು ೩೧ ರಂದು ನಡೆಯುವ ಪ್ರಥಮ ಏಷಿಯನ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಭಾರತ ದೇಶವನ್ನು ಪ್ರತಿನಿಧಿಸಲು ಕರ್ನಾಟಕ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್‌ನ ಕ್ರೀಡಾಪಟುಗಳಾದ ಕಾಜೂರು ಸರಕಾರಿ ಶಾಲೆಯ ವಿದ್ಯಾರ್ಥಿ ಕೌಶಿಕ್ ಕುಮಾರ್, ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ ವಿದ್ಯಾರ್ಥಿ ಮನ್ವಿತ್ ಮೋಹನ್, ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿನಿಗಳಾದ ಶರಣ ಎ. ಶೆಟ್ಟಿ ಮತ್ತು ವಿವಕ್ತ ಚೋಂದಮ್ಮ ಆಯ್ಕೆಯಾಗಿದ್ದಾರೆ.

ಈ ನಾಲ್ಕು ವಿದ್ಯಾರ್ಥಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರ ಮೂಲಕ ನೀಡಿದ ಸಹಾಯಧನವನ್ನು ತಾಲೂಕು ಕೆ.ಡಿ.ಪಿ. ಸದಸ್ಯ ಸಬಿತ ಚೆನ್ನಕೇಶವ ಅವರು ಐಗೂರಿನಲ್ಲಿ ವಿತರಿಸಿದರು.