ದೇವರಪುರ, ಮೇ ೨೨: ತರಾವರಿ ವೇಷಗಳು, ದೇವರಿಗೆ ಬೈಗುಳದ ಕಾಣಿಕೆ, ಹಾಡುತ್ತ, ಕುಣಿಯುತ್ತ ರಸ್ತೆಗಳಲ್ಲಿ ಕಾಣಿಕೆ ಸಂಗ್ರಹ, ನಂತರ ದೇವರ ಹುಂಡಿ ಸೇರಿದ ಹಣ..ಅಪರೂಪದ ಆಚರಣೆಗೆ ಸಾಕ್ಷಿಯಾದ ಭಕ್ತಗಣ.

ಹೌದು..ಅತೀ ವಿಶಿಷ್ಟ ಸಂಪ್ರದಾಯ, ಆಚಾರ-ವಿಚಾರ, ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಆದಿವಾಸಿಗಳು ಆಚರಿಸುವ ‘ಕುಂಡೆ ಹಬ್ಬ’ ಎಂದೇ ಖ್ಯಾತಿ ಪಡೆದಿರುವ ಬೇಡು ಹಬ್ಬಕ್ಕೆ ವರ್ಣರಂಜಿತ ತೆರೆ ಬಿದ್ದಿದೆ. ೨ ದಿನಗಳ ಕಾಲ ಪ್ರಮುಖವಾಗಿ ದಕ್ಷಿಣ ಕೊಡಗಿನ ನಾನಾ ಭಾಗಗಳು ಸೇರಿದಂತೆ ಜಿಲ್ಲೆಯ ಹಲವೆಡೆ ನಡೆದ ಈ ಹಬ್ಬದಲ್ಲಿ ವೇಷಧಾರಿಗಳು ಗಮನ ಸೆಳೆದರು. ವಿಶಿಷ್ಟ ಆಚರಣೆಯನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಜನ ದೇವರಪುರದ ಶ್ರೀ ಅಯ್ಯಪ್ಪ, ಭದ್ರಕಾಳಿಯಲ್ಲಿ ಸೇರಿದ್ದರು.

ಜಿಲ್ಲೆಯ ವಿವಿಧೆಡೆಗಳಿಂದ ದಕ್ಷಿಣ ಕೊಡಗಿನತ್ತ ವಾಹನಗಳ ಮೂಲಕ ಲಗ್ಗೆಯಿಟ್ಟ ವೇಷಧಾರಿಗಳು ಗೋಣಿಕೊಪ್ಪ, ಪೊನ್ನಂಪೇಟೆ, ತಿತಿಮತಿ ಸೇರಿದಂತೆ ವಿವಿಧ ಭಾಗಗಳಲ್ಲಿ ಹಾಡುತ್ತ, ಕುಣಿಯುತ್ತ, ಅಶ್ಲೀಲ ಪದಗಳನ್ನು ಜೋಡಿಸಿ ಬೈಯುತ್ತ ಜನರಿಗೆ ಹಣ ಸಂಗ್ರಹಿಸಿದರು.

ವೇಷಧಾರಿಗಳ ಆಕರ್ಷಣೆ

ಸೋರೆ ಬುರುಡೆಯ ಗಿಲಿಗಿಲಿ ಬೋರ್ಗೆರೆತ ನಾದದೊಂದಿಗೆ ವೇಷಧಾರಿ ಭಕ್ತಾದಿಗಳು ದೇವರ ಮಂತ್ರಜಪ ಕುಂಡೆ ಪದ ಬಳಕೆಯೊಂದಿಗೆ ಎದುರಿಗೆ ಸಿಕ್ಕ ಜನರಿಗೆ ವಾಚಮಗೋಚಾರವಾಗಿ ಬಯ್ಯುತ್ತಾ ದೇವರನ್ನು ಪ್ರಾರ್ಥಿಸುವ ಈ ಹಬ್ಬ ಗಮನ ಸೆಳೆಯಿತು.

ಸೋರೆ ಬುರುಡೆ, ಡ್ರಮ್, ಚಂಡೆ, ಕೊಳಲು, ಗಂಟೆ ಇನ್ನಿತರ ಶಬ್ದ ಹೊರಡಿಸುವ ಸಿಲ್ವರ್ ಪಾತ್ರೆಗಳು, ಬಕೆಟ್‌ಗಳು,

(ಮೊದಲ ಪುಟದಿಂದ) ತುತ್ತೂರಿ ಶಬ್ದಗಳು ಅಶ್ಲೀಲ ಬೈಗುಳಕ್ಕೆ ನಾದ ಹೊರಡಿಸುತ್ತಿದ್ದವು.

ಗೋಣಿಕೊಪ್ಪ ಪಟ್ಟಣ ಸೇರಿದಂತೆ ತಿತಿಮತಿ, ಪೊನ್ನಂಪೇಟೆ, ಪಾಲಿಬೆಟ್ಟ, ಬಾಳಲೆ, ಮಾಯಮುಡಿ, ವೀರಾಜಪೇಟೆ, ಸಿದ್ದಾಪುರ, ಕುಶಾಲನಗರ, ಭಾಗಗಳಲ್ಲಿಯೂ ಕುಂಡೆ ಹಬ್ಬ ನೃತ್ಯ, ಬೈಗುಳದೊಂದಿಗೆ ಎರಡು ದಿನದ ಕಾಡುಮಕ್ಕಳ ಸಂಭ್ರಮವಾಗಿತ್ತು. ದೇವರಪುರದ ಹೆಬ್ಬಾಲೆ ಗ್ರಾಮದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ ಅಂಗಳದಲ್ಲಿ ವೇಷಧಾರಿಗಳು ನಾಗಸಾಧುಗಳಾಗಿ, ವಿಭಿನ್ನ ದೇವರ ರೂಪಗಳು, ಸೊಪ್ಪು, ಹರಿದ ಬಟ್ಟೆ, ಸ್ತಿçà ರೂಪ, ತುಂಡುಡುಗೆ, ವಿಭಿನ್ನ ಶೈಲಿಯಲ್ಲಿ ಆದಿವಾಸಿಗಳು ಡೋಲು ಬಾರಿಸುವುದರೊಂದಿಗೆ ನೃತ್ಯ ಮಾಡಿ ಆದಿವಾಸಿಗಳು ಸಹಸ್ರಾರು ಸಂಖ್ಯೆಯಲ್ಲಿ ಹರಕೆ ಪೂರೈಸಿ ದಕ್ಷಿಣ ಕೊಡಗಿನ ವಿಭಿನ್ನ ಬುಡಕಟ್ಟು ಸಮುದಾಯ ಆಚರಣೆ ಕಳೆಗಟ್ಟಿತ್ತು.

ಕಾಡಿನಲ್ಲಿ ವಾಸವಿರುವ ಆದಿವಾಸಿಗಳು ತನ್ನ ವೇಷಭೂಷಣವನ್ನು ಕಾಡಿನಲ್ಲಿ ಪ್ರಾಕೃತಿಕವಾಗಿ ಸಿಗುವ ವಸ್ತುಗಳಿಂದಲೇ ವಿಭಿನ್ನವಾಗಿ ಶೃಂಗರಿಸಿಕೊAಡು ಸಂಭ್ರಮಿಸುತ್ತಾರೆ. ಆದರೆ, ಇಂದು ತಾಂತ್ರಿಕವಾಗಿ ಮುಂದುವರೆದಿರುವ ಕಾರಣ ಕಾಲಕ್ಕೆ ತಕ್ಕಂತೆ ರಾಷ್ಟç ಹಾಗೂ ಅಂತರರಾಷ್ಟಿçÃಯ ಮಟ್ಟದ ವ್ಯಕ್ತಿಗಳಾಗಿ ವೇಷಭೂಷಣ ಮಾಡಿಕೊಂಡು ಜನರಿಂದ ಬೇಗ ಆಕರ್ಷಿತರಾಗುತ್ತಿದ್ದದ್ದು, ಕಂಡುಬAದಿತು.

ಧಾರ್ಮಿಕ ಆಚರಣೆ

ದೇವರಪುರದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಮಧ್ಯಾಹ್ನ ೩ ಗಂಟೆಗೆ ಎಲ್ಲಾ ವೇಷಧಾರಿಗಳು ಸೇರಿ ದೇವರ ಸನ್ನಿಧಿಯಲ್ಲಿ ಹಾಡುತ್ತಾ, ಕುಣಿಯುತ್ತಾ ತಮ್ಮ ಹರಕೆಯನ್ನು ಸಲ್ಲಿಸಿದರು. ಈ ಸಂದರ್ಭ ಸಾವಿರಕ್ಕೂ ಅಧಿಕ ಜನರು ದೂರದ ಊರಿನಿಂದ ಬಂದು ಸೇರಿದ್ದರು.

ಇದಕ್ಕೂ ಮೊದಲು ಅಲ್ಲಿನ ಅಂಬಲದಿAದ ಭದ್ರಕಾಳಿ ದೇವರು ವ್ಯಕ್ತಿಯ ಮೈಮೇಲೆ ಬಂದು ಹಬ್ಬದಲ್ಲಿ ಪಾಲ್ಗೊಂಡಿತು. ಇದರೊಂದಿಗೆ ಪಣಿಕ ಜನಾಂಗದ ಇಬ್ಬರು ವ್ಯಕ್ತಿಯರು ದೇವರ ಮೊಗವನ್ನು ತೆಗೆÀದುಕೊಂಡು ಕುದುರೆಯೊಂದಿಗೆ ಅಯ್ಯಪ್ಪ ದೇವರ ದೇವಸ್ಥಾನದತ್ತ ತೆರಳಿದರು. ಇದರೊಂದಿಗೆ ಇಬ್ಬರು ಕುದುರೆ ಹೊತ್ತ ಯುವಕರು ಹಾಗೂ ಭಂಡಾರ ಪೆಟ್ಟಿಗೆ ಹೊತ್ತ ತಕ್ಕಮುಖ್ಯಸ್ಥರು ತೆರಳಿದರು.

ದೇವರ ವಿಧಿವಿಧಾನದೊಂದಿಗೆ ನಡೆಯುವ ಈ ಹಬ್ಬದಲ್ಲಿ ಭಂಡಾರ ಪೆಟ್ಟಿಗೆ, ಬಿದಿರಿನಿಂದ ತಯಾರಿಸಿದ ಕೃತಕ ಕುದುರೆಯನ್ನು ಕಳ್ಳಿಚಂಡ ಮುತ್ತಣ್ಣ ಮತ್ತು ಮಂದಣ್ಣ ಹೊತ್ತು ದೇವಸ್ಥಾನದ ಕಣದಲ್ಲಿ ವೇಷಧಾರಿಗಳೊಂದಿಗೆ ಕುಣಿಯುವ ಮೂಲಕ ಹಬ್ಬಕ್ಕೆ ಮತ್ತಷ್ಟು ಭಕ್ತಿಯ ಪರಾಮರ್ಷೆಯನ್ನು ತಂದರು. ವನವಾಸಿ ಕಲ್ಯಾಣ ಸಮಿತಿ ವತಿಯಿಂದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಲಾಗಿತ್ತು.