ವೀರಾಜಪೇಟೆ, ಮೇ ೨೧: ಒಂದೇ ಮಳೆಗೆ ಒಂದು ತಿಂಗಳ ಹಿಂದೆ ಉದ್ಘಾಟನೆಗೊಂಡ ಅಂಬೇಡ್ಕರ್ ಭವನದ ತಡೆಗೋಡೆ ಕುಸಿದು ಬಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ವೀರಾಜಪೇಟೆಯ ಅಂಬೇಡ್ಕರ್ ಭವನ ನಿರ್ಮಿಸಲು ಉದ್ದೇಶಿಸಿ ನಾಲ್ಕೆöÊದು ವರ್ಷ ಕಳೆದರೂ ಪೂರ್ಣಗೊಂಡಿರಲಿಲ್ಲ, ನಿರ್ಮಿತಿ ಕೇಂದ್ರ ಇದರ ಗುತ್ತಿಗೆಯನ್ನು ಪಡೆದಿತ್ತು. ಶಾಸಕರ ಪ್ರಯತ್ನದಿಂದ ಅನುದಾನ ಒದಗಿಸಿಕೊಟ್ಟು ಕಾಮಗಾರಿ ಪೂರ್ಣಗೊಳಿಸಿ ಏಪ್ರಿಲ್ ೧೪ ರಂದು ಈ ಭವನ ಲೋಕಾರ್ಪಣೆಯಾಯಿತು. ಆದರೆ ಉದ್ಘಾಟನೆಗೊಂಡ ಒಂದೇ ತಿಂಗಳು ಕಳೆಯುವಷ್ಟರಲ್ಲಿ ಭವನದ ಒಳಭಾಗದಲ್ಲಿ ಇಂಟರ್ಲಾಕ್ ಹಾಕಿದ ಸ್ಥಳದ ತಡೆಗೋಡೆ ಸೋಮವಾರ ಸಂಜೆ ಸುರಿದ ಸಾಧಾರಣ ಮಳೆಗೆ ಕುಸಿದು ಬಿದ್ದಿದೆ. ಕುಸಿದುಬಿದ್ದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ರಾತೋರಾತ್ರಿ ಮಣ್ಣನೆಲ್ಲ ತೆರವುಗೊಳಿಸಲಾಗಿತ್ತು. ೧.೮೦ ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಭವನ ನಿರ್ಮಾಣಗೊಂಡಿದೆ. ತಡೆಗೋಡೆ, ಇಂಟರ್ಲಾಕ್ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ನಡೆಸಿಲ್ಲ ಎಂದು ಯೋಜನಾ ನಿರ್ದೇಶಕರು ಹೇಳಿಕೆ ನೀಡಿದ್ದಾರೆ. ಈ ಕಾಮಗಾರಿಯನ್ನು ಇದರ ನಿರ್ವಹಣಾ ಸಮಿತಿ ಮೂಲಕ ಸ್ಥಳೀಯ ಖಾಸಗಿ ಗುತ್ತಿಗೆದಾರÀರÀ ಮೂಲಕ ಕಾಮಗಾರಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಒಂದು ಸಣ್ಣ ಮಳೆಗೆ ಒಳಭಾಗದ ತಡೆಗೋಡೆ ನೆಲಕಚ್ಚಿ ಉಳಿದ ಭಾಗ ಬಿರುಕು ಬಿಟ್ಟಿರುವುದನ್ನು ಗಮನಿಸಿದರೆ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆಯೋ ಅಥವಾ ನಿನ್ನೆ ಸುರಿದ ಮಳೆಯ ನೀರು ಹರಿಯಲು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ ಪರಿಣಾಮ ಈ ಘಟನೆ ಸಂಭವಿಸಿದೆಯೇ ಎಂಬುದನ್ನು ನಿರ್ಮಿತಿ ಕೇಂದ್ರ ಸ್ಪಷ್ಟಪಡಿಸಬೇಕಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿಬರುತ್ತಿದೆ. ಹತ್ತು ವರ್ಷಗಳ ಹಿಂದೆ ಸುಮಾರು ಒಂದು ಕೋಟಿ ಎಂಬತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಕಾರ್ಯ ಆರಂಭಗೊAಡಿತು. ಆದರೆ ಕೆಲವು ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇದ್ದ ಕಾರಣ ಭವನ ಯಾವುದೇ ಉಪಯೋಗಕ್ಕೆ ಬರದೆ ಇದ್ದಾಗ ವೀರಾಜಪೇಟೆ ಶಾಸಕರ ಗಮನಕ್ಕೆ ಅಂಬೇಡ್ಕರ್ ಭವನ ಸಮಿತಿಯ ಸದಸ್ಯರು ಗಮನ ಸೆಳೆದಿದ್ದರು. ತಕ್ಷಣ ಶಾಸಕ ಪೊನ್ನಣ್ಣ ಅವರು ಸಂಭAಧಿಸಿದ ಇಲಾಖೆಯ ಅಧಿಕಾರಿಗಳ ಜೊತೆಗೆ ಮಾತನಾಡಿ ಉಳಿಕೆ ಕಾಮಗಾರಿಗೆ ಸುಮಾರು ಇಪ್ಪತೈದು ಲಕ್ಷ ರೂಪಾಯಿ ಅನುದಾನ ನೀಡಿ ಕಾಮಗಾರಿ ಮುಗಿಸುವಂತೆ ತಿಳಿಸಿದ್ದರು. ಸಭಾಂಗಣದಲ್ಲಿ ವಾಹನಗಳ ನಿಲುಗಡೆಗೆ ಮತ್ತು ಗಂಗೆ ಪೂಜೆ ಮಾಡಲು ಉಳಿಕೆ ಜಾಗವನ್ನು ಬಳಸಿಕೊಳ್ಳಲಾಗಿತ್ತು. ಆ ಜಾಗಕ್ಕೆ ಆಗಿನ ಸಂಸದ ಪ್ರತಾಪ್ ಸಿಂಹ ಅವರು ಐದು ಲಕ್ಷ ರೂಪಾಯಿ ಮತ್ತು ವಿಧಾನ ಪರಿಷತ್ ಸದಸ್ಯ ಸುಜಾ ಕುಶಲಪ್ಪ ಅವರು ಐದು ಲಕ್ಷ ರೂಪಾಯಿ ಅನುದಾನ ನೀಡಿದರು. ನಂತರ ವೀರಾಜಪೇಟೆ ಶಾಸಕ ಪೊನ್ನಣ್ಣ ಅವರು ಅಂಬೇಡ್ಕರ್ ನಿರ್ವಹಣಾ ಸಮಿತಿ ರಚನೆ ಮಾಡಿ ಕಾಮಗಾರಿ ಮುಗಿಸಿ ಅಂಬೇಡ್ಕರ್ ದಿನಾಚರಣೆಯಂದು ಲೋಕಾರ್ಪಣೆಗೊಳಿಸಿದ್ದರು.

ವೀರಾಜಪೇಟೆ ತಾಲೂಕಿನಲ್ಲಿ ಅಂಬೇಡ್ಕರ್ ಭವನದ ಅಗತ್ಯವಿದ್ದು ತಾಲೂಕು ವ್ಯಾಪ್ತಿಯಲ್ಲಿ ಭವನ ನಿರ್ಮಾಣವಾಗಬೇಕು ಎಂದು ಪ್ರಯತ್ನಿಸಿದ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಕಾರಣಕರ್ತರಾಗಿ, ನಿರಂತರ ಶ್ರಮವಹಿಸಿದ್ದ ನಿವೃತ್ತ ಯೋಧ ಗಣೇಶ್ ಅವರು ಘಟನೆ ಕುರಿತು ಮಾತನಾಡಿ ಭವನ ಆರಂಭವಾದ ಒಂದೇ ತಿಂಗಳಲ್ಲಿ ನೂತನ ತಡೆಗೋಡೆ ಕುಸಿತವಾಗಿ ನಗೆಪಾಟಲಿಗೆ ಈಡಾಗಿದೆ, ಕಳಪೆ ಕಾಮಗಾರಿ ನಡೆದಿದೆ, ತಕ್ಷಣ ಅವರ ಬಗ್ಗೆ ಶಾಸಕರು ಕ್ರಮವನ್ನು ಕೈಗೊಳ್ಳಬೇಕು ಅಲ್ಲದೆ ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ತಿಳಿಸಿದರು. ಜನಾಂಗದ ಸದಸ್ಯರಿಗೆ ಉಪಯೋಗವಾಗಲು ನಾವು ನಮ್ಮ ಸ್ವಂತ ಪರಿಶ್ರಮದಿಂದ ಈ ಭವನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದೆ. ಈ ರೀತಿಯ ಕಾಮಗಾರಿ ನನಗೆ ತುಂಬಾ ಬೇಸರ ತಂದಿದೆ ಎಂದು ಗದ್ಗದಿತರಾದರು.ಭವನ ನಿರ್ವಹಣೆ ಸಮಿತಿಯ ಸದಸ್ಯ ವಿ.ಕೆ. ಸತೀಶ್ ಮಾತನಾಡಿ, ಅಂಬೇಡ್ಕರ್ ಭವನಕ್ಕೆ ಯಾವುದೇ ಹಾನಿಯಾಗಿಲ್ಲ, ನೂತನ ತಡೆಗೋಡೆ ಮಣ್ಣು ಕುಸಿತದಿಂದ ಉಂಟಾಗಿದೆ. ನಿರ್ಮೀತಿ ಕೇಂದ್ರದವರು ಗುತ್ತಿಗೆ ಪಡೆದು ಖಾಸಗಿ ವ್ಯಕ್ತಿಗೆ ಕಾಮಗಾರಿ ಮಾಡಿಸಿದ್ದು ಇನ್ನೂ ನಮಗೆ ಹಸ್ತಾಂತರ ಮಾಡಿಲ್ಲ ಎಂದು ತಿಳಿಸಿದರು. ಗುತ್ತಿಗೆದಾರರನ್ನು ಕರೆಸಿ ತಕ್ಷಣ ಕ್ರಮವನ್ನು ಕೈಗೊಳ್ಳುವಂತೆ ತಾಕೀತು ಮಾಡಿದ್ದೇನೆ ಎಂದು ಸತೀಶ್ ಮಾಹಿತಿ ನೀಡಿದರು. ಸ್ಥಳೀಯ ಪುರಸಭೆ ಚುನಾಯಿತ ಸದಸ್ಯೆ ಬೊಪ್ಪಂಡ ಜೂನ ಸುನಿತಾ ಮಾತನಾಡಿ, ಈ ರೀತಿಯ ಕಳಪೆ ಕಾಮಗಾರಿ ಮಾಡಿ ಅಗೌರವ ತೋರಿದ್ದಾರೆ. ನಮ್ಮ ಅವಧಿಯಲ್ಲಿ ಉತ್ತಮ ಸಾರ್ವಜನಿಕ ಕೆಲಸ ಮಾಡಿದ್ದೇನೆ. ಅಂಬೇಡ್ಕರ್ ಭವನದ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಕೊನೆಯ ಅವಧಿಯಲ್ಲಿ ಈ ರೀತಿಯ ಕಳಪೆ ಕಾಮಗಾರಿ ನಡೆದಿದೆ, ಈ ಗುತ್ತಿಗೆದಾರರನ್ನು ಕಪುö್ಪ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಭವನದ ಯೋಜನೆ ಅಂಬೇಡ್ಕರ್ ಯೋಜನೆ ಅಭಿವೃದ್ಧಿ ಸಂಘವನ್ನು ರಚನೆ ಮಾಡಿ ೨೦೧೬ ರಲ್ಲಿ ಸಮಾಜ ಕಲ್ಯಾಣ ಇಲಾಖೆ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದಾಗ ಶಾಸಕರ ಮುಂದಾಳತ್ವ ದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ. ೧೮೦ ಲಕ್ಷ ಅನುದಾನ ಬಿಡುಗಡೆಯಾಗಿತ್ತು. ನಂತರ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಭೂಮಿಪೂಜೆ ನೆರವೇರಿಸಿದ್ದರು. ಕಟ್ಟಡ ಕಾಮಗಾರಿ ಯನ್ನು ನಿರ್ಮಿತಿ ಕೇಂದ್ರದವರು ಪ್ರಾರಂಬಿಸಿದರು. ಕಾಮಗಾರಿ ನಡೆಯುವ ಸಂದರ್ಭ ರೂ. ೧೫೦ ಲಕ್ಷ ಅನುದಾನ ಬಂದ ನಂತರ ಉಳಿದ ಹೆಚ್ಚುವರಿ ಅನುದಾನ ಇಲ್ಲ ಎಂಬ ಮಾತು ಕೇಳಿ ಬಂತು. ಈ ಸಂದರ್ಭ ವೀರಾಜಪೇಟೆ ಪುರಸಭೆ ಯಿಂದ ರೂ. ೨೦ ಲಕ್ಷ, ತಾಲೂಕಿನ ೩೬ ಗ್ರಾಮ ಪಂಚಾಯಿತಿಗಳಿAದ ಒಟ್ಟು ರೂ. ೧೧ ಲಕ್ಷವನ್ನು ಸಂಘದ ಸದಸ್ಯರ ಸಹಕಾರದಿಂದ ಪಡೆಯ ಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.