ತಾ. ೨೭ ರ ಅಮಾವಾಸ್ಯೆ ದಿನದಂದು ಸೂರ್ಯ - ಚಂದ್ರ - ಬುಧರು ಸಂಯೋಗ ಹೊಂದುವುದ ರಿಂದ ಉತ್ತಮ ಹಿಂಗಾರುಮಳೆ ತಾ. ೨೮ ರ ತನಕ ಕೊಡಗಿನಲ್ಲಿ ಫಲಿಸ ಬಹುದು. ವೃಷ್ಟಿಯ ಮುನ್ಸೂಚನೆಗೆ ಪ್ರಮುಖ ಗ್ರಹಗಳ ಚಲನೆಗೆ ಇಲ್ಲಿ ಪ್ರಾಮುಖ್ಯತೆ ಕೊಡಲಾಗಿದೆ. ತಾ. ೨೯ ರ ಸುಮಾರಿಗೆ ೨೦೨೫ ವಿಶ್ವಾವಸುನಾಮ ಸಂವತ್ಸರದ ನೈಋತ್ಯ ಮುಂಗಾರು ಕೇರಳವನ್ನು ಪ್ರವೇಶಿಸಬಹುದು. ಮೊದಲ ೮, ೧೦ ದಿನಗಳ ಕಾಲ ಉತ್ತಮ ಮಳೆ ಕೊಡಗಿನಲ್ಲಿಯೂ ಆಗಬಹುದು. ನೈಋತ್ಯ ಮುಂಗಾರು ವಾಡಿಕೆಗಿಂತ ಮೊದಲೇ ಕೇರಳ ಪ್ರವೇಶಿಸಿದರೂ ಹಿಂಗಾರು ವೃಷ್ಟಿ ಉತ್ತಮವಾಗಿ ಫಲಿಸಿದರೂ ಈ ವರ್ಷ ೨೦೨೫ ಕೊಡಗಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಲಕ್ಷಣಗಳಿವೆ. ಕಳೆದ ವರ್ಷ ೨೦೨೪ ರಲ್ಲಿ ಹಿಂಗಾರು ಮಳೆಯ ಪ್ರಮಾಣ ಕಡಿಮೆಯಿದ್ದರೂ ಏಪ್ರಿಲ್ ತಿಂಗಳ ೧೨ನೇ ತಾರೀಕು (೧೨.೪.೨೦೨೪), ಪನ್ನಂಗಾಲ ಹಬ್ಬದ ದಿನ ಸುರಿದ ಮಳೆ... ಕಡಿಮೆಯಾಗಲಿಲ್ಲ. ೨೦೨೪ ರಲ್ಲಿ ಮುಂಗಾರು ಸಾಮಾನ್ಯಕ್ಕಿಂತ ಹೆಚ್ಚು ಸುರಿದಿತ್ತು.

ಈ ವರ್ಷ ತಾ. ೧೯.೨.೨೦೨೫ ರ ಮೊದಲ ಮಳೆ ಕಕ್ಕಬ್ಬೆಯಲ್ಲಿ ಸುರಿಯಿತು. ಸೂರ್ಯನು ಆರಿದ್ರಾ ನಕ್ಷತ್ರವನ್ನು ಪ್ರವೇಶ ಮಾಡುವ ಕಾಲದಲ್ಲಿ (೨೨.೬.೨೦೨೫) ಚಂದಿರನು ಭರಣಿ ನಕ್ಷತ್ರದಲ್ಲಿರುವುದು ಕೆಲವು ಗ್ರಹಗಳು ಅಗ್ನಿ, ವಾಯು ನಕ್ಷತ್ರದಲ್ಲಿರುವುದು ಮಳೆಯ ಪರವಾಗಿ ಇಲ್ಲವೆಂದು ಹೇಳಬಹುದು.

ಆಗಸ್ಟ್ ತಿಂಗಳ ಮೊದಲ ೨ ವಾರಗಳಲ್ಲಿ (ಎರಡು) ಗುರು - ಶುಕ್ರರ ಸಮ್ಮಿಲನವು ಮಿಥುನ ರಾಶಿಯಲ್ಲಾಗುವುದು ಮಳೆಗೆ ಉತ್ತಮ ಯೋಗವಿದೆಯೆಂದು ಹೇಳಬಹುದು. ತಾ. ೯.೮.೨೦೨೫ ಹುಣ್ಣಿಮೆಯ ದಿನದ ಲಕ್ಷಣಗಳನ್ನು ನೋಡಿದರೆ ಕೊಡಗಿನಲ್ಲಿ ಮಳೆಯಿಂದ ಅವಾಂತರಗಳು ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳಿವೆ. (ಐಚಿಟಿಜ Sಟiಜes, ಈಟಚಿsh ಈಟooಜs... eಣಛಿ) ಸೆಪ್ಟೆಂಬರ್ ೭/೮ ರಲ್ಲಿ ನಡೆಯುವ ಚಂದ್ರಗ್ರಹಣವು ಭಾರತ ದೇಶಕ್ಕೆ ಕಾಣುತ್ತದೆ. ಅನಿರೀಕ್ಷಿತ ಭಾರೀ ಮಳೆ ಗ್ರಹಣ ಕಾಲದ ಆಸುಪಾಸಿನಲ್ಲಿ ಕೊಡಗಿನಲ್ಲಿ ಆಗಬಹುದು. ನಮ್ಮ ದೇಶ ಅಥವಾ ನೆರೆ ರಾಷ್ಟçಗಳಲ್ಲಿ ಭಾರೀ ಭೂಕಂಪವಾಗಬಹುದು. ಕಾಶ್ಮೀರ ತೊಂದರೆ ಭುಗಿಲೇಳಬಹುದು. ಒಟ್ಟಾರೆಯಾಗಿ ಈ ವರ್ಷದ ನೈಋತ್ಯ ಮುಂಗಾರು ವಾಡಿಕೆಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಆಗಬಹುದು. - ಕರೋಟಿರ ಶಶಿ ಸುಬ್ರಮಣಿ.