ಗೋಣಿಕೊಪ್ಪಲು, ಮೇ ೨೧: ಮುಂಬರುವ ದಿನಗಳಲ್ಲಿ ಅಧಿಕ ಮಳೆಯಾಗುವ ಹಿನ್ನೆಲೆಯಲ್ಲಿ ನದಿ ತೊರೆಗಳು ತುಂಬಿ ಹರಿಯುವ ಸಾಧ್ಯತೆ ಇರುವುದರಿಂದ ಮುನ್ನಚ್ಚರಿಕೆ ಕ್ರಮವಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಗೋಣಿಕೊಪ್ಪಲುವಿನ ಕೀರೆ ಹೊಳೆಯ ಎರಡು ಬದಿಯಲ್ಲಿಯೂ ದುರಸ್ತಿ ಕಾರ್ಯ ಕೈಗೊಳ್ಳಲಾಗಿದ್ದು, ಹೊಳೆಗೆ ತುಂಬಿರುವ ಹೂಳೆತ್ತುವ ಕಾರ್ಯ ಭರದಿಂದ ಸಾಗುತ್ತಿದೆ.
ಗೋಣಿಕೊಪ್ಪ ನಗರದ ಸಮೀಪವಿರುವ ೨ನೇ ವಿಭಾಗದಲ್ಲಿ ಕೀರೆಹೊಳೆಗೆ ಹೊಂದಿಕೊAಡAತೆ ಗುಡಿಸಲು ಹಾಗೂ ಹಲವು ಮನೆಗಳಲ್ಲಿ ಜನರು ವಾಸವಾಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಕೀರೆಹೊಳೆಯಲ್ಲಿ ನೀರು ಅಧಿಕಗೊಂಡ ಪರಿಣಾಮ ಹೊಳೆಯ ಬದಿಯಲ್ಲಿದ್ದ ಹಲವು ಕುಟುಂಬಗಳನ್ನು ಸ್ಥಳಾಂತರಗೊಳಿಸಲಾಗಿತ್ತು.
ಈ ಹಿನ್ನೆಲೆ ಮುನ್ನಚ್ಚರಿಕೆ ಕ್ರಮಕೈಗೊಂಡ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯು ಪ್ರತಿವರ್ಷ ನಗರದ ಪ್ರಮುಖ ಹೊಳೆಯಲ್ಲಿ ಹೂಳೆತ್ತುವ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿದೆ. ಇದರೊಂದಿಗೆ ಬೈಪಾಸ್ ಭಾಗದಲ್ಲಿಯೂ ಇರುವ ಕೈತೋಡನ್ನು ಕೂಡ ದುರಸ್ತಿಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗುತ್ತಿದೆ.