ಮಡಿಕೇರಿ, ಮೇ ೨೧: ಕೊಡವ ಕೌಟುಂಬಿಕ ಹಾಕಿ ಉತ್ಸವದ ಯಶಸ್ಸಿಗೆ, ಕ್ರೀಡಾಭಿಮಾನಿಗಳ ಪ್ರೋತ್ಸಾಹ - ಉತ್ತೇಜನವೂ ಪ್ರಮುಖ ಕಾರಣವಾಗಿದೆ. ಉತ್ಸವ ಆಯೋಜಕರ ಪರಿಶ್ರಮದೊಂದಿಗೆ, ಭಾರೀ ವೆಚ್ಚ ತಗುಲುವ ಪಂದ್ಯಾವಳಿಗೆ ಪ್ರಾಯೋಜಕರು, ಸರಕಾರದ ಅನುದಾನ, ತೀರ್ಪುಗಾರರ ತೊಡಗಿಸಿ ಕೊಳ್ಳುವಿಕೆ, ತಾಂತ್ರಿಕ ಸಮಿತಿಯವರ ತಿಂಗಳ ಕಾಲದ ದುಡಿಮೆ ಸೇರಿದಂತೆ ತೆರೆಮರೆಯಲ್ಲಿ ಹಲವರ ಕೊಡುಗೆಗಳೂ ಇಲ್ಲಿ ಸ್ಮರಣೀಯ. ಇವೆಲ್ಲದರ ಪರಿಣಾಮ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಕೊಡವ ಕುಟುಂಬಗಳಿಗೆ ಕೌಟುಂಬಿಕ ಹಾಕಿ ಎಂದರೆ ಇದೊಂದು ಭಾರೀ ಪ್ರತಿಷ್ಠೆಯ ವಿಚಾರವಾಗಿದೆ. ಇದು ಕೇವಲ ಸಂಭ್ರಮದ ಉತ್ಸವ ಮಾತ್ರವಲ್ಲ ಪಂದ್ಯಾಟ ಕೂಡ. ಇಲ್ಲಿ ತೀರಾ ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಒಂದೊAದು ಪಂದ್ಯದ ಗೆಲುವೂ ಕೂಡ ಪ್ರತಿಷ್ಠೆ ಎಂಬAತಾಗಿದೆ. ಈ ಸ್ಪರ್ಧಾತ್ಮಕ ರೀತಿಯ ಆಟದಿಂದಾಗಿ ಈಗೀಗ ವಿವಿಧ ಕುಟುಂಬಗಳಲ್ಲಿ ಉದಯೋನ್ಮುಖ ಯುವ ಆಟಗಾರರು ರೂಪುಗೊಳ್ಳುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಕೆಲವು ತಂಡಗಳನ್ನು ಮಾತ್ರ ಬಲಿಷ್ಠ ತಂಡಗಳೆAದು ಹೇಳಲಾಗುತ್ತಿತ್ತು. ಆದರೆ ವರ್ಷ ಕಳೆದಂತೆ ಯಾವ ಕುಟುಂಬ ಬಲಿಷ್ಠ ಎಂಬುದನ್ನು ನಿಖರವಾಗಿ ಹೇಳಿಕೊಳ್ಳಲಾಗುತ್ತಿಲ್ಲ. ಉದಯೋನ್ಮುಖ ಆಟಗಾರರು ರೂಪುಗೊಳ್ಳುತ್ತಿರುವುದರಿಂದ ಮುಂದಿನ ಕೆಲ ವರ್ಷಗಳಲ್ಲಿ ಕೌಟುಂಬಿಕ ಹಾಕಿ ಇನ್ನಷ್ಟು ರೋಚಕತೆ ಕಾಣುವ ಲಕ್ಷಣಗಳು ಕಂಡುಬರುತ್ತಿವೆ. ಬಹುಶಃ ಪ್ರಸಕ್ತ ವರ್ಷದ ಮುದ್ದಂಡ ಕಪ್‌ನಲ್ಲಿ ಚಾಂಪಿಯನ್ ಚೇಂದAಡ ಎದುರು ಬೊಟ್ಟೋಳಂಡ ಕುಟುಂಬ ತೋರಿದ ಅಪ್ರತಿಮ ಹೋರಾಟ ಇದಕ್ಕೆ ಸಾಕ್ಷಿ ಎಂಬುದು ಕ್ರೀಡಾಭಿಮಾನಿಗಳ ಅನುಭವಕ್ಕೆ ಬಂದಿರುವ ವಿಚಾರ. ಇಂತಹ ಹಲವಷ್ಟು ಪಂದ್ಯಗಳು ವರ್ಷಂಪ್ರತಿ ಕೌತುಕ ಸೃಷ್ಟಿಸುತ್ತಿವೆ. ೨೫ ವರ್ಷಗಳ ಅವಧಿಯಲ್ಲಿ ಏಳೆಂಟು ಕುಟುಂಬಗಳು ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸುತ್ತಿವೆ. ಆದರೆ ಮುಂದಿನ ವರ್ಷಗಳಿಂದ ಇಂತದ್ದೇ ಕುಟುಂಬ ಜಯ ಸಾಧಿಸಲಿದೆ ಎಂಬುದನ್ನು ಸುಲಭವಾಗಿ ಊಹಿಸಿಕೊಳ್ಳುವುದು ಅಸಾಧ್ಯ ಎಂಬುದAತೂ ಸತ್ಯ... ಇದಕ್ಕೆ ಉದಾಹರಣೆ ಎಂಬAತೆ ಈ ಬಾರಿ ಹಿಂದಿನ ಚಾಂಪಿಯನ್ ತಂಡಗಳಾದ ಕೂತಂಡ, ಕಲಿಯಂಡ, ಕುಲ್ಲೇಟಿರ, ನೆಲ್ಲಮಕ್ಕಡ, ಚೇಂದAಡ, ಕುಪ್ಪಂಡ (ಕೈಕೇರಿ)ಯಂತಹ ತಂಡಗಳು ಪರಾಭವಗೊಂಡಿರುವುದು. ಯುವಕರು, ಮಕ್ಕಳು ಹಾಕಿಯಲ್ಲಿ ತಮ್ಮದೇ ಚಾಕಚಕ್ಯತೆ ತೋರುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ಕೊಡಗಿನಲ್ಲಿ ಕೌಟುಂಬಿಕ ಹಾಕಿ ಮತ್ತಷ್ಟು ಪ್ರತಿಷ್ಠೆಯ ವಿಚಾರವಾಗಿ ಹೊರಹೊಮ್ಮಲಿರು ವದಂತೂ ವಾಸ್ತವ...

ಬೆಂಬಲವೂ ಗಮನಾರ್ಹ

ಹಾಕಿ ಅಭಿಮಾನಿಗಳು, ಕಂಪೆನಿಗಳು ನೀಡುತ್ತಿರುವ ಉತ್ತೇಜನಕಾರಿ ಬಹುಮಾನಗಳೂ ಪಂದ್ಯಾವಳಿಯನ್ನು ಇನ್ನಷ್ಟು ಹುಬ್ಬೇರಿಸುವಂತೆ ಮಾಡುತ್ತಿದೆ. ಯಾರೇ... ಗೆಲ್ಲಲಿ... ಸೋಲಲಿ... ಸಾಧಕರಿಗಂತೂ ದೊಡ್ಡ ದೊಡ್ಡ ಮೊತ್ತದ ಬಹುಮಾನಗಳು ಹರಿದು ಬರುತ್ತಿವೆ. ಇಂತಹ ಪ್ರೋತ್ಸಾಹವನ್ನು ದೊಡ್ಡಮಟ್ಟದ ಪಂದ್ಯಾವಳಿಯಲ್ಲಿ ಮಾತ್ರ ಕಾಣಲು ಸಾಧ್ಯ...

ಈ ಬಾರಿ ಏನೇನು ವಿಶೇಷ...?

ಪ್ರಸಕ್ತ ವರ್ಷ ಮಡಿಕೇರಿಯಲ್ಲಿ ನಡೆದ ಮುದ್ದಂಡ ಕಪ್ ಹಾಕಿ ಉತ್ಸವದಲ್ಲೂ ಇಂತಹ ಹಲವಷ್ಟು ಕೊಡುಗೆಗಳು ಕಂಡುಬAದಿವೆ...

ಒAದು ಗೋಲಿಗೆ ರೂಪಾಯಿ ಒಂದು ಲಕ್ಷ...!

ಏಪ್ರಿಲ್ ೨೭ ರಂದು ನಡೆದ ಫೈನಲ್ ಸಂದರ್ಭ ಘೋಷಣೆ ಯೊಂದು ಕೇಳಿಬಂತು. ಚೇಂದAಡ - ಮಂಡೇಪAಡ ಪಂದ್ಯಕ್ಕೆ ಮಡಿಕೇರಿಯಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಈ ವೇಳೆ ಬೆಂಗಳೂರಿನಲ್ಲಿರುವ ಉದ್ಯಮಿ ಯೊಬ್ಬರು ತಮ್ಮ ಆಪ್ತರನ್ನು ಸಂಪರ್ಕಿಸಿ ಈ ಪಂದ್ಯದಲ್ಲಿ ಯಾರು ‘ವಿನ್ನಿಂಗ್ ಗೋಲು’ ಬಾರಿಸುತ್ತಾರೋ ಅವರಿಗೆ ರೂ. ೧ ಲಕ್ಷ ನಗದು ನೀಡುವುದಾಗಿ ಪ್ರಕಟಿಸಿದ್ದು ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿತ್ತು.

ಕೊಡಗಿನವರೇ ಆದ ಬಲ್ಲಚಂಡ ಡೆನ್ ಅವರು ಈ ಕೊಡುಗೆಯ ಪ್ರಕಟಣೆ ನೀಡಿದ್ದರು. ಇದರಂತೆ ಅವರು ನಡೆದುಕೊಂಡಿದ್ದು ಮಂಡೇಪAಡ ಪರ ಏಕೈಕ ಗೋಲು ಬಾರಿಸಿ ವಿಜಯಕ್ಕೆ ಕಾರಣರಾದ ಆಟಗಾರ ಗೌತಮ್ ಅವರಿಗೆ ರೂ. ೧ ಲಕ್ಷವನ್ನು ಗೂಗಲ್ ಪೇ ಮೂಲಕ ತಲುಪಿಸಿದ್ದಾರೆ. ಡೆನ್ ಅವರ ಉತ್ತೇಜನ ಸ್ಮರಣೀಯವಾಗಿದೆ.

ನಾಲ್ವರು ಆಟಗಾರ್ತಿಯರಿಗೆ ತಲಾ ರೂ. ೫೦ ಸಾವಿರ

ಈ ಬಾರಿ ೫ ಎ ಸೈಡ್ ಮಹಿಳಾ ಹಾಕಿಯ ವಿಶೇಷವಿತ್ತು. ಈ ಪಂದ್ಯಾವಳಿಯಲ್ಲಿ ಯುವ ಆಟಗಾರ್ತಿಯರನ್ನು ಉತ್ತೇಜಿಸಲು ಮಾಜಿ ಅಂತರರಾಷ್ಟಿçÃಯ ಹಾಕಿ ಆಟಗಾರ್ತಿ ಅಮ್ಮಾಟಂಡ ಪುಷ್ಪ ಪೂವಯ್ಯ ಅವರು ರೂ. ೨ ಲಕ್ಷದ ಕೊಡುಗೆ ನೀಡಿದ್ದಾರೆ. ನಾಲ್ವರು ಉದಯೋನ್ಮುಖ ಆಟಗಾರ್ತಿಯರಿಗೆ ಅವರು ತಲಾ ರೂ. ೫೦ ಸಾವಿರ ನಗದು ನೀಡಿ ಪ್ರೋತ್ಸಾಹಿಸಿದ್ದಾರೆ.

ಪ್ಲೇಯರ್ ಆಫ್ ಟೂರ್ನಮೆಂಟ್‌ಗೆ ರೂ. ೫೦ ಸಾವಿರ

ಮಹಿಳಾ ಹಾಕಿಯ ಪ್ಲೇಯರ್ ಆಫ್ ಟೂರ್ನಮೆಂಟ್‌ಗೆ ಮಾಳೆಯಂಡ ಪ್ರಕಾಶ್ ನಾಣಯ್ಯ ಅವರು ರೂ. ೫೦ ಸಾವಿರ ನಗದು ನೀಡಿದ್ದಾರೆ.

ಏಥರ್ ಬೈಕ್:ರೂ. ೩೦ ಸಾವಿರ ನಗದು

ಮುದ್ದಂಡ ಕಪ್‌ನ ಪ್ಲೇಯರ್ ಆಫ್ ಟೂರ್ನಮೆಂಟ್ (ಸರಣಿ ಪುರುಷೋತ್ತಮ) ಆಟಗಾರನಿಗೆ ಏಥರ್ ಬೈಕ್ ಕಂಪೆನಿಯಿAದ ರೂ. ೧.೨೫ ಲಕ್ಷ ಮೌಲ್ಯದ ಏಥರ್ ಬೈಕ್ ದೊರೆತಿದೆ. ಇದರೊಂದಿಗೆ ಇಸುಜು ಕಂಪೆನಿಯ ಮೂಲಕ ರೂ. ೩೦ ಸಾವಿರ ನಗದು ಇವರಿಗೆ ಒಲಿದು ಬಂದಿದೆ. ಪ್ರತಿಷ್ಠಿತ ಕಂಪೆನಿಗಳು ಈ ರೀತಿ ಬಹುಮಾನ ಪ್ರಕಟಿಸುವುದು ಬಹುಶಃ ಕ್ರಿಕೆಟ್ ಪಂದ್ಯಗಳಿಗೆ ಮಾತ್ರ. ಆದರೆ ಇಲ್ಲಿ ಹಾಕಿ ಗಮನ ಸೆಳೆಯುತ್ತಿದೆ.

* ಟೀಂ ಕೂರ್ಗ್ ಯು.ಎ.ಇ.ಯಿಂದ ಪ್ಲೇಯರ್ ಆಫ್ ದಿ ಟೂರ್ನಮೆಂಟ್ (ಮಹಿಳಾ ಹಾಕಿ)ಗೆ ರೂ. ೧೫ ಸಾವಿರ ನಗದು ಹಾಗೂ ರೂ. ೧೫ ಸಾವಿರ ಮೌಲ್ಯದ ಗ್ರೇಸ್ ಹಾಕಿಸ್ಟಿಕ್ ದೊರೆತಿದೆ.

* ಅಬುದಾಬಿಯಲ್ಲಿರುವ ಕೇಟೋಳಿರ ನೀಲಮ್ ಮುತ್ತಣ್ಣ ಅವರು ಎರಡು ವಿಭಾಗದಲ್ಲಿ ಬಡತನದ ಮೂಲದಿಂದ ಬಂದು ಉತ್ತಮ ಆಟಗಾರರುಗಳಾಗಿ ಗುರುತಿಸಲ್ಪಟ್ಟ ಇಬ್ಬರಿಗೆ ತಲಾ ರೂ. ೧೫ ಸಾವಿರ ಮೌಲ್ಯದ ಎರಡು ಗ್ರೇಸ್ ಹಾಕಿ ಸ್ಟಿಕ್ ನೀಡಿ ಉತ್ತೇಜಿಸಿದ್ದಾರೆ.

* ಯುವ ಗೋಲ್‌ಕೀಪರ್‌ಗೆ ಭಾರೀ ಕೊಡುಗೆ

ಪ್ರಸಕ್ತ ವರ್ಷದ ಪಂದ್ಯಾವಳಿ ಯಲ್ಲಿ ಮಂಡೇಪAಡ ತಂಡದ ಪರ ಗೋಲ್‌ಕೀಪರ್ ಆಗಿದ್ದ ೧೪ ವರ್ಷ ಪ್ರಾಯದ ಯುವ ಆಟಗಾರ ಡಾನ್ ಬೆಳ್ಯಪ್ಪ ತೋರಿದ ಅತ್ಯುತ್ತಮ ಪ್ರದರ್ಶನಕ್ಕೆ ಕ್ರೀಡಾಭಿಮಾನಿಗಳು ಭಾರೀ ಕೊಡುಗೆ ನೀಡಿ ಉತ್ತೇಜಿಸಿದ್ದಾರೆ. ಇದಲ್ಲದೆ ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಮಡಿಕೇರಿಯ ಚಿನ್ನಾಭರಣ ಉದ್ಯಮಿ ಮುಳಿಯ ಸಂಸ್ಥೆಯ ಕೇಶವ ಪ್ರಸಾದ್ ಮುಳಿಯ ಅವರು ಈ ಆಟಗಾರನಿಗೆ ಬೆಳ್ಳಿಯ ಸರವನ್ನು ತಮ್ಮ ಮಳಿಗೆಯಿಂದ ತರಿಸಿ ಉಡುಗೋರೆಯಾಗಿ ನೀಡಿರುವುದು ಮತ್ತೊಂದು ವಿಶೇಷ. ಇಂತಹ ಪ್ರೋತ್ಸಾಹ - ಉತ್ತೇಜನಗಳಿಂದ ಕೌಟುಂಬಿಕ ಹಾಕಿ ಇನ್ನಷ್ಟು ಬೆಳೆಯು ತ್ತಿದೆ ಎಂಬುದು ಅತಿಶಯೋಕ್ತಿ ಅಲ್ಲ. ಕೌಟುಂಬಿಕ ಹಾಕಿ, ಒಂದು ಪಂದ್ಯಾವಳಿ ಯಾಗಿಯೂ, ಉತ್ಸವ ವಾಗಿಯೂ ಜರುಗುತ್ತಿರುವುದರಿಂದ ಮಾತ್ರವಷ್ಟೆ ಯಶಸ್ಸು ಕಾಣುತ್ತಾ ಬರುತ್ತಿದೆ. ಇದು ಉತ್ಸವದ ಸ್ವರೂಪ ಬಿಟ್ಟು ಇತರೆಡೆಯ ಮಾದರಿಯ ಒಂದು ಪಂದ್ಯಾಟದAತೆ ಆಯೋಜನೆ ಯಾದಲ್ಲಿ ಸ್ವಯಂ ಪ್ರೇರಣೆಯಿಂದ ಸೇರುವ ಸಹಸ್ರ - ಸಹಸ್ರ ಸಂಖ್ಯೆಯ ಕ್ರೀಡಾಭಿಮಾನಿಗಳ ತೊಡಗಿಸಿ ಕೊಳ್ಳುವಿಕೆಯನ್ನು ಕಾಣಲು ಅಸಾಧ್ಯವಾಗ ಬಹುದು... ಬೆಂಬಲ - ಸಹಕಾರಗಳೂ ಸೀಮಿತವಾಗ ಬಹುದು ಎಂಬುದೂ ಗಮನಾರ್ಹ ವಾಗಿದೆ. ಇದರ ನಡುವೆ ಈ ಹಾಕಿ ಪಂದ್ಯಾವಳಿ ಆಡಂಬರವಾಗ ಬಾರದು ಎಂಬ ಚರ್ಚೆಗಳೂ ಆರಂಭವಾಗಿದೆ. ಏನೇ ಇರಲಿ ವಾರ್ಷಿಕವಾಗಿ ಜರುಗುತ್ತಿರುವ ಹಬ್ಬದ ಮಾದರಿಯ ಪಂದ್ಯಾ ವಳಿಯ ಕಲರವವೇ ಬೇರೆ... ಈ ರೀತಿಯಲ್ಲೆ ನಡೆಯಬೇಕು. ನಿರ್ದಿಷ್ಟ ಸ್ವರೂಪಕ್ಕೆ ಬರಬೇಕು ಎಂಬ ಚಿಂತನೆಗಳೇ ಬೇರೆ... ತೀರ್ಮಾನ ಗಳು ಕ್ರೀಡಾಭಿಮಾನಿಗಳಿಗೆ, ಆಯೋಜಕರಿಗೆ ಸೇರಿದ್ದಾಗಿದೆ... ಮುಂದಿನ ೨೦೩೫ ರ ತನಕವೂ ಹಾಕಿ ಹಬ್ಬಾಚರಣೆಗೆ ಕುಟುಂಬ ಗಳು ಮುಂದೆ ಬಂದಿವೆಯೇ ಹೊರತು ಕೇವಲ ಪಂದ್ಯಾಟ ನಡೆಸಲು ಮಾತ್ರ ಅಲ್ಲವೇ ಅಲ್ಲ.

- ಕಾಯಪಂಡ ಶಶಿ ಸೋಮಯ್ಯ.