ವೀರಾಜಪೇಟೆ, ಮೇ ೯: ಸಾಕಿದ ಗೂಳಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ವೀರಾಜಪೇಟೆ ಸಮೀಪದ ಪೆಗ್ಗರಿಕಾಡು ಪೈಸಾರಿಯ ನಿವಾಸಿ ಬಿ.ಕೆ ದಯಾನಂದ್ (೫೯) ಮೃತಪಟ್ಟಿದ್ದಾರೆ.

ಮೃತ ದಯಾನಂದ ಅವರು ಒಟ್ಟು ೧೧ ದನಗಳನ್ನು ಸಾಕಿದ್ದು, ಅದರಲ್ಲಿ ಈ ಗೂಳಿಯನ್ನು ತುಂಬಾ ಪ್ರೀತಿಯಿಂದ ಸಾಕಿದ್ದರು ಎನ್ನಲಾಗಿದೆ. ಮೃತರು ಇಬ್ಬರು ಗಂಡು ಮಕ್ಕಳು, ಮಗಳು, ಪತ್ನಿಯನ್ನು ಅಗಲಿದ್ದಾರೆ.