ಶನಿವಾರಸಂತೆ, ಮೇ ೯: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೇಪುರ ಗ್ರಾಮದ ಶ್ರೀ ಹನುಮಂತ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಶ್ರೀ ಹನುಮಂತ ದೇವರ ದೇವಸ್ಥಾನ ಪುನರ್ ಪ್ರತಿಷ್ಠಾಪನಾ ಮಹೋತ್ಸವ ತಾ. ೧೦ ಹಾಗೂ ೧೧ ರಂದು ನಡೆಯಲಿದೆ.
ತಾ. ೧೦ ರಂದು (ಇಂದು) ಸಂಜೆ ೬ ಗಂಟೆಯಿAದ ಕಟ್ಟೇಪುರ ಪಟೇಲ್ ಮನೆತನ ಕೆ.ಎಸ್.ಕುಮಾರ್ ರಾವ್ ನೇತೃತ್ವದಲ್ಲಿ ಶ್ರೀ ಹನುಮಂತ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯ ಆರಂಭವಾಗುತ್ತದೆ. ತಾ. ೧೧ ರಂದು ಬೆಳಿಗ್ಗೆ ೬ ಗಂಟೆಯಿAದ ಪ್ರಧಾನ ಅರ್ಚಕ ಕೃಷ್ಣಯ್ಯನವರ ನೇತೃತ್ವದಲ್ಲಿ ಶ್ರೀ ಹನುಮಂತ ದೇವರ ಕಳಶದ ಪ್ರತಿಷ್ಠಾಪನೆ, ಸಮರ್ಪಣೆ, ಅಷ್ಟೋತ್ತರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.
ನೂತನ ದೇವಸ್ಥಾನವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸುವರು. ಶ್ರೀ ಆಂಜನೇಯ ಸ್ವಾಮಿ ಸಮಿತಿ ಅಧ್ಯಕ್ಷ ಕೆ.ಟಿ.ಅಪ್ಪಾಜಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಮಂಜುನಾ ಥೇಶ್ವರ ಧರ್ಮೋಸ್ಥಾನ ಟ್ರಸ್ಟ್ ನಿರ್ದೇಶಕಿ ಲೀಲಾವತಿ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಅರಕಲ ಗೂಡು ಶಾಸಕ ಎ.ಮಂಜು, ನಾಪಂಡ ಮುತ್ತಪ್ಪ, ಗೊರೂರು ಹೇಮಾವತಿ ಜಲಾಶಯ ಯೋಜನೆ ಮುಖ್ಯ ಕಾರ್ಯಪಾಲಕ ಎಂಜಿನಿಯರ್, ಗುತ್ತಿಗೆದಾರರಾದ ಗಂಗಾಧರ್, ನಾಗೇಶ್, ಉದ್ಯಮಿ ಯತೀಶ್, ಅಭಿ ಯಂತರ ಡಿ.ಡಿ.ಪ್ರಸಾದ್, ಪ್ರಮುಖ ಎನ್.ಡಿ. ಲಿಂಗರಾಜ್ ಧರ್ಮಪ್ಪ, ಲೆಕ್ಕಪರಿಶೋಧಕ ಶ್ರೀ ಧರ್, ಬೆಸ್ಕಾಂ ಅಧೀಕ್ಷಕ ಅಭಿಯಂತರ ತಿಮ್ಮೇಗೌಡ, ಮೈಸೂರು ಪವನ್, ಶನಿವಾರಸಂತೆ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಮತ್ತಿ ತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಹನುಮಂತ ದೇವರ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.