ಕಣಿವೆ, ಮಾ. ೭: ಕರಿಮೆಣಸು ಕುಯ್ಯುವ ಕೆಲಸದಲ್ಲಿ ನಿರತನಾಗಿದ್ದ ವ್ಯಕ್ತಿ ಮರದಿಂದ ಬಿದ್ದು ಮೃತಪಟ್ಟ ಘಟನೆ ರಸುಲ್‌ಪುರದಲ್ಲಿ ನಡೆದಿದೆ. ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರ ಬಳಿಯ ವಿರುಪಾಕ್ಷಪುರ ನಿವಾಸಿ ಪ್ರೇಮ್ ಕುಮಾರ್ (೪೨) ಮೃತ ದುರ್ದೈವಿ.

ರಸಲ್‌ಪುರದ ಕಾಫಿ ತೋಟದಲ್ಲಿ ಕರಿಮೆಣಸು ಕಟಾವು ಮಾಡಲು ತೆರಳಿದ ಸಂದರ್ಭ ಈ ಘಟನೆ ನಡೆದಿದೆ. ಮರದಿಂದ ಬಿದ್ದು ಎದೆ ಹಾಗೂ ಕಾಲಿಗೆ ಘಾಸಿ ಉಂಟಾಗಿದೆ. ಕುಟುಂಬದವರಿಗೆ ತಿಳಿಸದೆ ಗಾಯಾಳುವನ್ನು ತೋಟದಿಂದ ನೇರವಾಗಿ ಆಸ್ಪತ್ರೆಗೆ ಸಾಗಿಸಿದ ತೋಟದ ಮಾಲೀಕರ ವಿರುದ್ದ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.