ಮಡಿಕೇರಿ, ನ. ೨೪: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು, ಮಡಿಕೇರಿ ವತಿಯಿಂದ ೩ನೇ ವರ್ಷದ ವಿಪ್ರ ಕ್ರೀಡೋತ್ಸವ ಅಂಗವಾಗಿ ಮಡಿಕೇರಿ ತಾಲೂಕು ಮಟ್ಟದ ಒಳಾಂಗಣ ಕ್ರೀಡೆಗಳಿಗೆ ಇಂದು ಚಾಲನೆ ನೀಡಲಾಯಿತು. ನಗರದ ಬ್ರಾಹ್ಮಣರ ಬೀದಿಯಲ್ಲಿನ ಲಕ್ಷಿö್ಮÃ ನರಸಿಂಹ ಕಲ್ಯಾಣ ಮಂಟಪ ಶತಮಾನ ಭವನದಲ್ಲಿ ಒಳಾಂಗಣ ಕ್ರೀಡೆಗಳಾದ ಚೆಸ್, ಕೇರಂ, ಲೆಮನ್ & ಸ್ಪೂನ್, ಬಕೇಟಿಗೆ ಬಾಲ್ ಎಸೆತ, ಮ್ಯೂಸಿಕಲ್ ಚೇರ್, ಚೆನ್ನಮಣೆ ಕ್ರೀಡೆಗಳು ನಡೆದವು. ಕ್ರೀಡಾಕೂಟಕ್ಕೆ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷ ರಾಮಚಂದ್ರ ಮೂಗೂರು, ಕಾರ್ಯದರ್ಶಿ ಜಗದೀಶ್ ಬಿ.ಕೆ, ಈ ಬಾರಿಯ ಕ್ರೀಡಾ ಸಂಚಾಲಕರಾದ ಗೋಪಾಲಕೃಷ್ಣ, ನಿಧಿಯ ನಿರ್ದೇಶಕರುಗಳಾದ ಬಿ.ಕೆ ಅರುಣ್ ಕುಮಾರ್, ಭರತೇಶ್ ಖಂಡಿಗೆ, ಲಲಿತಾ ರಾಘವನ್, ಗೀತಾ ಗಿರೀಶ್, ಮಂಜುಳಾ ರಾಮಕೃಷ್ಣ, ಸವಿತಾ ಭಟ್, ಶಿವಶಂಕರ್ ಹಾಗೂ ಶಕ್ತಿ ಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರುಗಳು ಚಾಲನೆ ನೀಡಿದರು.

ಕ್ರೀಡಾಕೂಟದ ಅಂಗವಾಗಿ ಡಿ.೧ ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲೆಯ ಬ್ರಾಹ್ಮಣ ಸಮಾಜ ಬಾಂಧವರಿಗೆ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್ ಕ್ರೀಡೆಗಳು ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ನಡೆಯಲಿವೆ. ಡಿ.೮ ರಂದು ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ೨೦೨೫ ಜನವರಿ ೫ ರಂದು ತಾಲೂಕು ಮಟ್ಟದ (೫ ತಾಲೂಕುಗಳ) ಒಳಾಂಗಣ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಜಿಲ್ಲಾಮಟ್ಟದ ಕ್ರೀಡೆ ಲಕ್ಷಿö್ಮÃ ನರಸಿಂಹ ಕಲ್ಯಾಣ ಮಂಟಪ ಶತಮಾನ ಭವನದಲ್ಲಿ ನಡೆಯಲಿದೆ. ಇದೇ ಸಂದರ್ಭ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಜರುಗಲಿದೆ.