ಸೋಮವಾರಪೇಟೆ,ನ.೨೪: ನಿನ್ನೆ ದಿನ ಪಟ್ಟಣದ ವಿವೇಕಾನಂದ ಸರ್ಕಲ್ ವ್ಯಾಪ್ತಿಯ ಆಲೇಕಟ್ಟೆ ರಸ್ತೆಯಲ್ಲಿರುವ ಹಾರ್ಡ್ವೇರ್ ಅಂಗಡಿಗೆ ಖರೀದಿಯ ನೆಪದಲ್ಲಿ ತೆರಳಿ, ಒಂಟಿ ಮಹಿಳೆಯಿಂದ ಚಿನ್ನದ ಸರ, ನಗದು ಕಳವು ಮಾಡಿದ ಘಟನೆಗೆ ಸಂಬAಧಿಸಿದAತೆ ಪರಾರಿಯಾಗಿದ್ದ ಮೂರನೇ ಆರೋಪಿಯನ್ನು ಪೊಲೀಸರು ಅರಕಲಗೂಡಿನಲ್ಲಿ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನಿನ್ನೆ ದಿನ ಪಟ್ಟಣದ ಸ್ವಾಮಿ ವಿವೇಕಾನಂದ ಸರ್ಕಲ್ ಬಳಿಯಿರುವ ಶ್ರೀ ಕುಮಾರಲಿಂಗೇಶ್ವರ ಹಾರ್ಡ್ವೇರ್‌ನಲ್ಲಿ ಮಾಲೀಕರಾದ ತೀರ್ಥ ಹರೀಶ್ ಅವರು ಒಬ್ಬರೇ ಕುಳಿತಿದ್ದ ಸಂದರ್ಭ, ಖರೀದಿಯ ನೆಪದಲ್ಲಿ ಬಂದ ಮೂವರು ಖದೀಮರು, ಇದ್ದಕ್ಕಿದ್ದತೆ ತೀರ್ಥ ಅವರ ಮೇಲೆ ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ ಚಿನ್ನದ ತಾಳಿ ಸಹಿತ ಸರವನ್ನು ಕಿತ್ತುಕೊಂಡಿದ್ದಾರೆ. ನಂತರ ಡ್ರಾವರ್‌ನಲ್ಲಿದ್ದ ನಗದು ಹಾಗೂ ಮತ್ತೊಂದು ಚಿನ್ನದ ಸರವನ್ನು ತೆಗದುಕೊಂಡು ಸ್ಕೂಟರ್‌ನಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದರು.

ಈ ಸಂದರ್ಭ ತೀರ್ಥ ಅವರು ಜೋರಾಗಿ ಕಿರುಚಿಕೊಂಡಿದ್ದು, ಇದನ್ನು ಗಮನಿಸಿದ ಅಕ್ಕಪಕ್ಕದ ವರ್ತಕರು, ಸ್ಕೂಟರ್‌ನ್ನು ಹಿಂಬಾಲಿಸಿಕೊAಡು ಹೋಗಿದ್ದಾರೆ. ಮೂವರು ಖದೀಮರು ರಸ್ತೆ ತಿಳಿಯದೇ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸಫಾಲಿ ಬಾರ್ ಆವರಣದ ಒಳಗೆ ಹೋಗಿದ್ದಾರೆ. ಅಲ್ಲಿಂದ ಹೊರಗೆ ಬರಲಾಗದೇ ಚಡಪಡಿಸುತ್ತಿದ್ದ ಸಂದರ್ಭ ಸ್ಥಳೀಯರು ಓರ್ವನನ್ನು ಹಿಡಿದುಕೊಂಡಿದ್ದು, ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ. ಈ ಸಂದರ್ಭ ಉಳಿದ ಈರ್ವರು ಸ್ಥಳದಿಂದ ಓಡಿ ಪರಾರಿಯಾಗಿದ್ದರು.

ಸಾರ್ವಜನಿಕರಿಂದ ಗೂಸಾ ತಿಂದ ವ್ಯಕ್ತಿಯನ್ನು ನಂತರ ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿ ಹಾಸನದ ಮಹಮದ್ ಇಕ್ಬಾಲ್ ಎಂದು ಗುರುತಿಸಲಾಗಿದೆ. ನಂತರ ಪೊಲೀಸರು ಪರಾರಿಯಾದ ಈರ್ವರ ಪತ್ತೆಗೆ ಬಲೆ ಬೀಸಿದ್ದು, ನಿನ್ನೆ ಸಂಜೆ ವೇಳೆಗೆ ಶಿವಮೊಗ್ಗದ ಶಹದಾಬ್ ಎಂಬವನನ್ನು ಬಸ್‌ನಲ್ಲಿ ಹಾಸನಕ್ಕೆ ತೆರಳುತ್ತಿದ್ದ ಸಂದರ್ಭ ಶನಿವಾರಸಂತೆ ಬಳಿ ವಶಕ್ಕೆ ಪಡೆದಿದ್ದಾರೆ.

ಗುಂಪಿನಲ್ಲಿದ್ದ ಸಾಗರ ತಾಲೂಕಿನ ಕಾರ್ಗಲ್ಲು ಗ್ರಾಮದ ನೂರ್ ಮಹಮ್ಮದ್ ಅವರ ಪುತ್ರ ಇಬ್ರಾಹಿಂನನ್ನು ಇಂದು ಮಧ್ಯಾಹ್ನ ಅರಕಲಗೂಡಿನಲ್ಲಿ ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಸನದ ಮಹಮ್ಮದ್ ಇಕ್ಬಾಲ್‌ನ ಮೂವರು ಪತ್ನಿಯರಲ್ಲಿ ಇಬ್ರಾಹಿಂನ ಸಹೋದರಿಯೂ ಓರ್ವಳಾಗಿದ್ದು, ಬಾವ ಹಾಗೂ ಬಾಮೈದ ಒಟ್ಟಿಗೆ ಸುಲಿಗೆ ಕೃತ್ಯದಲ್ಲಿ ಭಾಗಿಯಾಗಿ ಜೈಲು ಸೇರಿದ್ದಾರೆ.

ಆರೋಪಿಗಳಿಂದ ೬೫ ಗ್ರಾಂ ತೂಕದ ಚಿನ್ನದ ಸರ, ೨೩,೭೦೦ ನಗದು, ೨ ಮೊಬೈಲ್, ಒಂದು ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ. ಸುಲಿಗೆಯಾಗಿರುವ ಮತ್ತೊಂದು ಚಿನ್ನದ ಸರವನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ. ಬಂದಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಗಳು ಸ್ಕೂಟರ್‌ಗೆ ಅಳವಡಿಸಿದ್ದ ನಂಬರ್ ಪ್ಲೇಟ್ ತೆಗೆದು, ಡಿಕ್ಕಿಯೊಳಗೆ ಹಾಕಿಕೊಂಡು ಈ ಕೃತ್ಯ ನಡೆಸಿದ್ದಾರೆ. ಕೃತ್ಯ ನಡೆಸಿದ ನಂತರ ಮಾನಸ ಸಭಾಂಗಣದ ಪಕ್ಕದ ರಸ್ತೆಯ ಮೂಲಕ ಚೌಡ್ಲು ಗ್ರಾಮದ ಮಾರ್ಗವಾಗಿ ಸೋಮವಾರಪೇಟೆ-ಶನಿವಾರಸಂತೆ ಹೆದ್ದಾರಿಗೆ ತೆರಳಲು ಯೋಜಿಸಿದ್ದರು. ಆದರೆ ಸಫಾಲಿ ಬಾರ್ ಬಳಿ ರಸ್ತೆ ತಿಳಿಯದೇ ಬಾರ್ ಆವರಣದೊಳಗೆ ಹೋಗಿದ್ದರಿಂದ ಶೀಘ್ರವಾಗಿ ಸಿಕ್ಕಿ ಬಿದ್ದಿದ್ದಾರೆ.

ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಹದೇವ ಅವರ ನೇತೃತ್ವದಲ್ಲಿ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ರವಿ, ಎಎಸ್‌ಐ ಕಾಳಿಯಪ್ಪ, ಪ್ರವೀಣ್, ಮುಖ್ಯ ಪೇದೆ ಸುಧೀಶ್‌ಕುಮಾರ್, ಸಿಬ್ಬಂದಿಗಳಾದ ಶರತ್‌ಕುಮಾರ್, ಮಲ್ಲೇಶ್, ಅನಂತ್, ಭರತ್, ಚಾಲಕ ಗುರುಪ್ರಸಾದ್ ಅವರುಗಳು ಭಾಗಿಯಾಗಿದ್ದರು.