ಮಡಿಕೇರಿ, ನ. ೨೪: ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾ ರಂಭವನ್ನು ಆಚರಿಸಲಾಯಿತು. ಪದ್ಮಭೂ ಷಣ ಜನರಲ್ ತಿಮ್ಮಯ್ಯನವರ ಪ್ರತಿಮೆಗೆ ಪುಷ್ಪಾರ್ಚನೆಯನ್ನು ಮಾಡಿ, ಅತಿಥಿಗ ಳಿಂದ ಧ್ವಜಾರೋಹಣದ ನಂತರ ಆಯಾಯ ಗುಂಪಿನ ನಾಯಕರುಗಳ ನೇತೃತ್ವದಲ್ಲಿ ಪಥಸಂಚಲನವನ್ನು ಮಾಡಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವು ದರೊಂದಿಗೆ ಪ್ರಾರಂಭಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊಫೆಸರ್ ಕಂಬೆಯAಡ ಸಿ. ಬೆಳ್ಯಪ್ಪ ಮಾತನಾಡಿ, ಮಕ್ಕಳು ಸತತ ಪ್ರಯತ್ನದಿಂದ ಮುಂದೆ ಬರಬೇಕು ಹಾಗೂ ಮಾತೃಭಾಷೆಯು ತುಂಬಾ ಪ್ರಮುಖವಾಗಿದ್ದು ಸಂವಹನೆಗೆ ಆಂಗ್ಲ ಭಾಷೆ ಹಾಗೂ ಇತರ ಭಾಷೆಯನ್ನು ಕಲಿಯಬೇಕಾಗಿರುವುದರಿಂದ ಮಕ್ಕಳು ವಾರ್ತೆಗಳನ್ನು ಆಲಿಸುವುದು ಮತ್ತು ವಾರ್ತಾ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೊಡವ ಸಮಾಜ ಮಡಿಕೇರಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಂಡುವAಡ ಮುತ್ತಪ್ಪ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳ ವಿದ್ಯಾಭ್ಯಾಸದೊಂದಿಗೆ ಇತರ ಚಟುವಟಿಕೆಗಳಲ್ಲಿ ಅವರ ಪ್ರಗತಿ ಹಾಗೂ ಸಾಧನೆ ಹೇಗಿದೆ, ಮುಂದೆ ಹೇಗಿರಬೇಕು ಎನ್ನುವುದನ್ನು ಮನದಟ್ಟು ಮಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ತಾರಾ ಬೆಳ್ಯಪ್ಪ, ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಕೇಕಡ ಎ. ದೇವಯ್ಯ, ಶಾಲಾ ಆಡಳಿತಾಧಿಕಾರಿ ಮುಕ್ಕಾಟಿರ ಪೊನ್ನಮ್ಮ, ಪ್ರಾಂಶುಪಾಲರಾದ ನವಿತ ಎಂ.ಜಿ, ಶಾಲಾ ಆಡಳಿತ ಮಂಡಳಿ ಸದಸ್ಯರುಗಳಾದ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಕನ್ನಂಡ ಸಂಪತ್, ಬೊಪ್ಪಂಡ ಸರಳ ಕರುಂಬಯ್ಯ, ಕಾಂಡೆರ ಲಲ್ಲೂ ಕುಟ್ಟಪ್ಪ, ಮಂಡಿರ ಡಿ. ಮುದ್ದಪ್ಪ ಇವರುಗಳು ಉಪಸ್ಥಿತರಿದ್ದರು. ವಾರ್ಷಿಕ ಕ್ರೀಡಾಕೂಟದ ಸ್ಪರ್ಧಾ ವಿಜೇತರುಗಳಿಗೆ ಹಾಗೂ ಅಜ್ಜಿ ತಾತಂದಿರ ದಿನದ ಸ್ಪರ್ಧಾ ವಿಜೇತರುಗಳಿಗೆ ಗಣ್ಯರಿಂದ ಬಹುಮಾನ ವಿತರಣೆ ಮಾಡಲಾಯಿತು. ಶಿಕ್ಷಕರಿಗೆ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಸ್ಮರಣ ನಿಧಿ ಬಹುಮಾನವನ್ನು ನೀಡಲಾಯಿತು.
ಶಾಲಾ ನಾಯಕಿ ಜನಿಷಾ ಸುಬ್ರಮಣಿ ಸ್ವಾಗತಿಸಿದರು. ಶಿಕ್ಷಕಿ ಟೆöÊನಿ ಬಿ.ಪಿ. ಅತಿಥಿಗಳನ್ನು ಪರಿಚಯಿಸಿದರು. ಮಕ್ಕಳು ಯೋಗ, ಕರಾಟೆ, ನೃತ್ಯದಲ್ಲಿ ಶೌರ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದರು. ಕುಮಾರಿ ಡೆಸ್ಟೆöÊನ್.ಕೆ.ಎನ್, ಟಿಯಾನ ತಂಗಮ್ಮ ಹಾಗೂ ಮಾನ್ಸರ್ ಲಿಖಿತ್ ಜಿ.ವಿ ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲಾ ಧ್ವಜಾವರೋಹಣ ಮಾಡಿ ಧ್ವಜವನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಲಾಯಿತು. ಶಾಲಾ ಕ್ರೀಡಾ ನಾಯಕಿ ಯುಕ್ತ ನೀಲಮ್ಮ ವಂದಿಸಿದರು. ಶಾಲಾ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.