ಮಡಿಕೇರಿ, ನ. ೨೪: ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ಮಂದ್ ಪೂರ್ವಭಾವಿ ಸಭೆ ಇದೇ ಡಿಸೆಂಬರ್ ೩ರಂದು ಬೆಳಿಗ್ಗೆ ೧೦ಗಂಟೆಗೆ ಕುಂದಾ ಸಮೀಪದ ಕೈಮುಡಿಕೆ ಕೋಲ್ಮಂದ್ನಲ್ಲಿ ನಡೆಯಲ್ಲಿದ್ದು, ಮೂರುನಾಡಿನ ತಕ್ಕಮುಖ್ಯಸ್ಥರು ಸೇರಿದಂತೆ ಗ್ರಾಮಸ್ಥರು ಆಗಮಿಸಿ ಸಲಹೆ ಸಹಕಾರ ನೀಡಬೇಕು ಎಂದು ಬೊಟ್ಟಿಯತ್ ಮೂಂದ್ ನಾಡಿನ ತಕ್ಕಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪುತ್ತರಿ ದೇವಕಟ್ಟ್ ಇದೇ ೨೯ರಂದು ಬೀಳಲಿದ್ದು, ಅಂದು ಪುತ್ತರಿಯ ಮುಹೂರ್ತ ನಿಗದಿಯಾಗಲಿದೆ. ಈ ನಿಟ್ಟಿನಲ್ಲಿ ಬೊಟ್ಟಿಯತ್ನಾಡ್, ಕುತ್ತ್ನಾಡ್ ಹಾಗೂ ಬೇರಳಿನಾಡ್ಗೆ ಸೇರಿದ ಎಲ್ಲಾ ಗ್ರಾಮಗಳು ಒಂದೆಡೆ ಸೇರಿ ನಡೆಸುವ ಕೈಮುಡಿಕೆ ಪುತ್ತರಿ ಕೋಲ್ಮಂದ್ ದಿನಾಂಕ ನಿಗದಿ ಮಾಡುವ ವಿಷಯವಾಗಿ ಹಾಗೂ ಯಾವ ರೀತಿ ನಡೆಸಬೇಕು ಎಂದು ಡಿಸೆಂಬರ್ ೩ರಂದು ಬೆಳಿಗ್ಗೆ ೧೦ ಗಂಟೆಗೆ ಕೈಮುಡಿಕೆ ಕೋಲ್ಮಂದ್ನಲ್ಲಿಯೇ ಪೂರ್ವಬಾವಿ ಸಭೆ ಕರೆಯಲಾಗಿದ್ದು, ಮೂರುನಾಡಿಗೆ ಸೇರಿದ ತಕ್ಕಮುಖ್ಯಸ್ಥರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರ ಮೂಲಕ ಸಲಹೆ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.