ಕೊಡ್ಲಿಪೇಟೆ, ನ.೨೪ : ಸಮೀಪದ ಸರಕಾರಿ ಪ್ರೌಢ ಶಾಲೆಯ ಆಟದ ಮ್ಯೆದಾನವನ್ನು ಸ್ಥಳೀಯ ಹೇಮಾವತಿ ರೋಟರಿ ಸಂಸ್ಥೆಯ ವತಿಯಿಂದ ಸ್ವಚ್ಚಗೊಳಿಸಿ ಅಭಿವೃದ್ಧಿ ಪಡಿಸಲಾಯಿತು.

ಪ್ರೌಢಶಾಲೆಯ ಮುಖ್ಯೋಪಾಧ್ಯಾ ಯರ ಮನವಿ ಹಿನ್ನೆಲೆ ರೋಟರಿ ಸಂಸ್ಥೆಯು ಸ್ಥಳೀಯ ಕಾಮಧೇನು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ರೇಣುಕಾ ಅವರ ಸಹಭಾಗಿತ್ವದಲ್ಲಿ ಯಂತ್ರಗಳನ್ನು ಬಳಸಿ ಆಟದ ಮೈದಾನವನ್ನು ಸರಿಪಡಿಸಲಾಯಿತು. ಮೈದಾನದಲ್ಲಿದ್ದ ಉಬ್ಬು ತಗ್ಗುಗಳನ್ನು ಸಮತಟ್ಟು ಮಾಡಿ ಗಿಡ ಗಂಟಿ, ಕುರುಚಲು ಕಾಡುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಮೈದಾನವನ್ನು ಸಮತಟ್ಟು ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಹೇಮಾವತಿ ರೋಟರಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ಸಾಗರ್, ಉಪಾಧ್ಯಕ್ಷ ಉಮೇಶ್ ಯು.ಹೆಚ್, ನಿರ್ದೇಶಕ ರಾದ ಗಣೇಶ್ ಚೌದರಿ, ಕಾರ್ತಿಕ್, ದ್ಯೆಹಿಕ ಶಿಕ್ಷಣ ಶಿಕ್ಷಕ ಬಿ.ಕೆ.ಶಿವಶಂಕರ್, ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.