ಶನಿವಾರಸಂತೆ, ನ.೨೪: ಉತ್ತರ ಪ್ರದೇಶದ ವಿಷನ್ ಸ್ಟಿçಂಗ್ ಸಂಸ್ಥೆ ವತಿಯಿಂದ ಹಿಂದೂ ಜಾಗರಣಾ ವೇದಿಕೆ ಪದಾಧಿಕಾರಿ ಹಾಗೂ ಟಿ.ಕೆ.ಪಿ.ಟಿಂಬರ್ ಮಾಲೀಕ ಪುನೀತ್ ತಾಳೂರು ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಶನಿವಾರಸಂತೆಯ ಗುಡುಗಳಲೆ ವೃತ್ತದಲ್ಲಿ ನಡೆಯಿತು.

ಶಿಬಿರ ಉದ್ಘಾಟಿಸಿದ ಹಿಂದೂ ಜಾಗರಣಾ ವೇದಿಕೆ ಪದಾಧಿಕಾರಿ ಪುನೀತ್ ತಾಳೂರು ಮಾತನಾಡಿ, ಕಣ್ಣಿನ ಸುರಕ್ಷತೆಯ ಬಗ್ಗೆ ಸದಾ ಜಾಗೃತರಾಗಿರಬೇಕು.ಉಚಿತ ಕಣ್ಣಿನ ತಪಾಸಣೆ ಶಿಬಿರ ಗ್ರಾಮೀಣ ಭಾಗದ ಬಡ ಜನತೆಗೆ ವರದಾನವಾಗಿದ್ದು ಶಿಬಿರದಲ್ಲಿ ಪಾಲ್ಗೊಂಡು ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಲು ಕರೆ ನೀಡಿದರು.

ಶಿಬಿರದಲ್ಲಿ ೨೫೦ ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಭರತ್ ಹುಲುಸೆ ಕಾರ್ಯಕ್ರಮ ನಿರ್ವಹಿಸಿದರು. ವಿಷನ್ ಸ್ಟಿçಂಗ್ ಸಂಸ್ಥೆಯ ಸಿಬ್ಬಂದಿ ಅಶಿಶ್ ಚೌದರಿ, ಅಜಯ್, ಅಮಿತ್ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸಿದರು.