ವರದಿ : ವಾಸು ಎ.ಎನ್.
ಸಿದ್ದಾಪುರ, ನ. ೨೪: ಕಾರುಗಳ ರಭಸದ ಓಡಾಟದಿಂದ ಸುತ್ತಲೂ ಹರಡುವ ಧೂಳು, ಇವುಗಳ ನಡುವೆ ಕೇಕೆ ಹಾಕುತ್ತಾ ಫೋಟೋ ಕ್ಲಿಕ್ಕಿಸುವ ಕ್ರೀಡಾಪ್ರೇಮಿಗಳು, ಇದು ಅಮ್ಮತ್ತಿ, ಆನಂದಪುರ, ಮಟಪರಂಬು ಮತ್ತು ಹೊಸಳ್ಳಿ ವ್ಯಾಪ್ತಿಯ ಕಾಫಿತೋಟಗಳಲ್ಲಿ ಕಂಡುಬAದ ದೃಶ್ಯ. ರೊಬಸ್ಟಾ ರ್ಯಾಲಿ ಎಂದೇ ಖ್ಯಾತಿ ಹೊಂದಿರುವ ರಾಷ್ಟçಮಟ್ಟದ ಚಾಂಪಿಯನ್ಶಿಪ್ನಲ್ಲಿ ಭಾರತದ ವಿವಿಧೆಡೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆ ಆರಂಭವಾಗುವ ಮೊದಲೇ ಅರ್ಜುನ ಪ್ರಶಸ್ತಿ ವಿಜೇತ ರಾಷ್ಟಿçÃಯ ಚಾಂಪಿಯನ್ ಗೌರವ್ ಗಿಲ್ ಸ್ಪರ್ಧೆಯ ಹಾಟ್ ಫೇವರೆಟ್ ಆಗಿ ಗುರುತಿಸಿಕೊಂಡಿದ್ದರು. ರೊಬಸ್ಟಾ ಅಡ್ವೆಂಚರ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ಬ್ಲೂಬ್ಯಾಂಡ್ ಸ್ಪೋರ್ಟ್ಸ್ ಎಫ್ಎಂಎಸ್ಸಿಐ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ ೨೦೨೪ರ ಐದನೇ ಮತ್ತು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆಯೆ ಗೌರವ್ ಗಿಲ್ ಸತತ ಗೆಲುವಿನೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಏಳು ಬಾರಿ ರಾಷ್ಟಿçÃಯ ಚಾಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಗೌರವ್ ಗಿಲ್ ಮತ್ತೊಮ್ಮೆ ತಮ್ಮ ಚಾಣಾಕ್ಷ ಹಾಗೂ ಆಕ್ರಮಣಕಾರಿ ಚಾಲನೆಯಿಂದ ಚಾಂಪಿಯನ್ ಆದರು ಕಳೆದ ತಿಂಗಳು ಹೈದರಾಬಾದ್ನಲ್ಲಿ ನಡೆದ ರ್ಯಾಲಿಯ ಯಶಸ್ಸಿನ ನಂತರ ಸತತ ಎರಡನೇ ಗೆಲುವು ಸಾಧಿಸಿದ ಗಿಲ್, ಸಹ ಚಾಲಕ ಅನಿರುದ್ದ್ ರಂಗ್ನೇಕರ್ ಅವರೊಂದಿಗೆ ಅದ್ಭುತ ಪ್ರದರ್ಶನ ನೀಡಿ ಅಂತಿಮ ದಿನದಂದು ನಿಯಂತ್ರಿತ ಆಕ್ರಮಣ ಶೀಲತೆಯನ್ನು ಪ್ರದರ್ಶಿಸುವ ಮೂಲಕ ಗೆಲುವಿನ ೪೦ ಅಂಕಗಳನ್ನು ಪಡೆದರು. ಪ್ರಾರಂಭದಿAದಲೇ ಗೌರವ್ ಗಿಲ್ಗೆ ಪೈಪೋಟಿ ನೀಡುತ್ತಿದ್ದ ಚಾಂಪಿಯನ್ ಸ್ಪರ್ಧಿಯಾದ ಅರ್ಕಾ ಮೋಟಾರ್ ಸ್ಪೋರ್ಟ್ಸ್ನ ಕರ್ಣ ಕಡೂರ್ (ಮೂಸಾ ಶರೀಫ್) ಎರಡನೇ ಸ್ಥಾನವನ್ನು ಪಡೆಯುವಲ್ಲಿ ಸಫಲರಾದರು. ಕೊನೆಯ ಹಂತದಲ್ಲಿ ೨೦೨೧ರ ಚಾಂಪಿಯನ್ ಆದಿತ್ಯ ಠಾಕೂರ್ (ವೀರೇಂದ್ರ ಕಶ್ಯಪ್), ಕೊಡಗಿನ ಸ್ಪರ್ಧಿ ಜೇಸನ್ ಸಲ್ಡಾನ್ಹಾ (ತಿಮ್ಮು ಉದ್ದಪಂಡ) ನಡುವೆ ನಡೆದ ಸ್ಪರ್ಧೆಯಲ್ಲಿ ಕೇವಲ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ೧.೨ ಸೆಕೆಂಡಿನಲ್ಲಿ ಆದಿತ್ಯ ಠಾಕೂರ್ ಮೂರನೇ ಸ್ಥಾನವನ್ನು ಪಡೆದುಕೊಂಡರು. ಕೇವಲ ೧.೨ ಸೆಕೆಂಡಿನಲ್ಲಿ ಕೊಡಗಿನ ಸ್ಪರ್ಧಿ ತಿಮ್ಮು ಉದ್ದಪಂಡ ನಿರಾಸೆಗೊಂಡರು.
ಐಎನ್ಆರ್ಸಿ ೩ ಕ್ಲಾಸ್ನಲ್ಲಿ ಮುಂಬೈನ ಡಾರಿಯಸ್ ಶ್ರಾಫ್ ಮತ್ತು ಚೆಟ್ಟಿನಾಡ್ ಸ್ಪೋರ್ಟಿಂಗ್ನ ಅರ್ಜುನ್ ಧೀರೇಂದ್ರ ಅವರು ಒಂದು ನಿಮಿಷಕ್ಕೂ ಹೆಚ್ಚು ಅಂತರದಿAದ ಗೆದ್ದು ಅಗ್ರಸ್ಥಾನ ಕಾಯ್ದುಕೊಂಡರು. ಸ್ಕಾçö್ಯಪ್ ರೇಸಿಂಗ್ನ ಗುರುಗ್ರಾಮ್-ಬೆಂಗಳೂರು ಜೋಡಿ ಅರ್ನವ್ ಪ್ರತಾಪ್ ಸಿಂಗ್ ಮತ್ತು ರೋಹಿನ್ ಎನ್. ಎರಡನೇ ಸ್ಥಾನ ಪಡೆದರೆ, ಹೈದರಾಬಾದ್ನ ಜೀತ್ ಜಬಾಖ್ ಮತ್ತು ಈರೋಡ್ನ ಶೇಖರ್ ಸಹ ಚಾಲಕರಾಗಿ ಚೆಟ್ಟಿನಾಡ್ ಸ್ಪೋರ್ಟಿಂಗ್ನ ಶೇಖರ್ ಮೂರನೇ ಸ್ಥಾನ ಪಡೆದರು.
ಅರ್ನವ್ ಪ್ರತಾಪ್ ಜೂನಿಯರ್ ಐಎನ್ಆರ್ಸಿಯನ್ನು ಗೆದ್ದರು. ಡೆಹ್ರಾಡೂನ್ನ ಅನುಶ್ರಿಯಾ ಗುಲಾಟಿ (ಸಹ ಚಾಲಕ ಕರಣ್ ಔಕ್ತಾ), ಪ್ರತಿಭಾನ್ವಿತ ನಿಕೇತಾ ಟಕ್ಕಲೆ (ರಘುರಾಮ್ ಸ್ವಾಮಿನಾಥನ್) ಎರಡನೇ ಸ್ಥಾನ ಮತ್ತು ಶಿಲ್ಲಾಂಗ್ನ ಫೋಬೆ ನೊಂಗ್ರಮ್ (ನ್ಯಾಶ್ ರಾಸ್) ತೃತೀಯ ಸ್ಥಾನ ಪಡೆದರು.
ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಟಾಟಾ ಸಂಸ್ಥೆಯ ಜನರಲ್ ಮ್ಯಾನೇಜರ್ ರಾಜಿವ್ ಕೆ.ಜಿ, ಡೆಪ್ಯೂಟಿ ಜನರಲ್ ಮ್ಯಾನೇಜರ್ ದಿಲೀಪ್ ಕುಮಾರ್ ಸಿಂಗ್, ಅರಣ್ಯ ಸಂಶೋಧನಾ ಮ್ಯಾನೇಜರ್ ಬಿ.ಜಿ. ಪೊನ್ನಪ್ಪ, ರೊಬಸ್ಟಾ ಅಡ್ವೆಂಚರ್ ಆಂಡ್ ಸ್ಪೋರ್ಟ್ಸ್ ಅಕಾಡೆಮಿ ಆಯೋಜಕ ತಿಮ್ಮಣ್ಣ ಉದ್ದಪಂಡ, ನಿರ್ದೇಶಕ ಕುಂಞAಡ ಮಹೇಶ್ ಅಪ್ಪಯ್ಯ ಹಾಗೂ ಇನ್ನಿತರರು ಹಾಜರಿದ್ದರು.ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.
ಮಗುಚಿದ ಕಾರುಗಳುರ್ಯಾಲಿಯ ರೋಚಕ ಸ್ಪರ್ಧೆಯಲ್ಲಿ ಗೆಲುವಿಗಾಗಿ ಶರ ವೇಗದಲ್ಲಿ ಬಂದ ಎರಡು ಕಾರುಗಳು ನಿಯಂತ್ರಣ ತಪ್ಪಿ ಮೊಳಗು ಮನೆ ಸಮೀಪದಲ್ಲಿ ಮಗುಚಿದವು.
ತಾಂತ್ರಿಕ ದೋಷ
ನಿನ್ನೆ ದಿನ ಗಿಲ್ ಅವರ ವಾಹನದಲ್ಲಿ ತಾಂತ್ರಿಕ ದೋಷಗಳಿದ್ದ ಹಿನ್ನೆಲೆಯಲ್ಲಿ ಮೊದಲಸುತ್ತಿನಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ, ಮೊದಲ ಹಂತದಲ್ಲಿ ಅತ್ಯಂತ ವೇಗದ ಆಟಗಾರ ಕರ್ಣ ಕಡೂರ್ ವಿರುದ್ಧ ೧೭.೪ ಸೆಕೆಂಡುಗಳಲ್ಲಿ ಹಿನ್ನಡೆ ಹೊಂದಿದ್ದರು. ತದನಂತರ ಗಿಲ್ ಉಳಿದ ಐದು ಹಂತಗಳಲ್ಲಿ ವೇಗವಾಗಿ ಪುಟಿದೆದ್ದು ದಿನದ ಅಂತ್ಯದ ವೇಳೆಗೆ ೫೩ ಸೆಕೆಂಡುಗಳಿಗಿAತ ಹೆಚ್ಚು ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
ನಿನ್ನೆ ಕೂಡ ಆನಂದಪುರ, ಮಟಪರಂಬು, ಪಾಲಿಬೆಟ್ಟ ವ್ಯಾಪ್ತಿಯ ಟಾಟಾ ಕಾಫಿ ತೋಟಗಳಲ್ಲಿನ ತಿರುವು ರಸ್ತೆಗಳಲ್ಲಿ ಧೂಳೆಬ್ಬಿಸಿ ವೇಗವಾಗಿ ಸಾಗುತ್ತಿದ್ದ ವಾಹನಗಳಲ್ಲಿ ಕೆಲವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿದ ಘಟನೆಗಳು ನಡೆದಿದ್ದವು.