ಸಿದ್ದಾಪುರ, ನ. ೨೪: ವಾಲ್ನೂರು ತ್ಯಾಗತ್ತೂರು ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಿದ್ದರೂ ಕೂಡ ಪ್ರತಿನಿತ್ಯ ಅಮ್ಮಂಗಾಲ ವ್ಯಾಪ್ತಿಯ ಕಾವೇರಿ ನದಿ ದಾಟಿ ಸ್ಥಳೀಯ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದೆ.
ಇತ್ತೀಚೆಗೆ ಕಾಫಿ ತೋಟಗಳಲ್ಲಿ ಆಹಾರ ಅರಸಿ ಕಾಡಿಗೆ ಹಿಂತಿರುಗುತ್ತಿರುವ ಕಾಡಾನೆಯೊಂದು ರೈಲ್ವೆ ಬ್ಯಾರಿಕೇಡ್ ಮೂಲಕ ನುಗ್ಗಲು ಯತ್ನಿಸುತ್ತಿದ್ದ ಸಂದÀರ್ಭ ಬ್ಯಾರಿಕೇಡ್ ಮಧ್ಯದಲ್ಲಿ ಸಿಲುಕಿ ಕೆಲಹೊತ್ತು ಬಸವಳಿದಿತ್ತು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ ಕಾಡಾನೆ ಸ್ಥಳದಿಂದ ತೆರಳಿದೆ. ಈ ಹಿಂದೆ ಕೂಡ ಈ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಅನಾಯಾಸವಾಗಿ ಬ್ಯಾರಿಕೇಡ್ ದಾಟುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇತ್ತೀಚೆಗೆ ವಾಲ್ನೂರು ತ್ಯಾಗತ್ತೂರು ವ್ಯಾಪ್ತಿಯ ಭತ್ತದ ಗದ್ದೆಗಳಿಗೆ ಕಾಡಾನೆಗಳು ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಿರುವುದು ರೈತರಿಗೆ ಅಪಾರ ನಷ್ಟ ಉಂಟುಮಾಡುತ್ತಿರುವುದು ಕಂಡುಬರುತ್ತಿದೆ.