ಮಡಿಕೇರಿ, ನ. ೨೫: ಕೊಡಗು ಗೌಡ ಯುವ ವೇದಿಕೆ ಮತ್ತು ಗಾಳಿಬೀಡು ಗೌಡ ಜನಾಂಗ ಬಾಂಧವರ ವತಿಯಿಂದ ಡಿ. ೧ ರಂದು ಗಾಳಿಬೀಡು ಗ್ರಾಮದಲ್ಲಿ ಬಾಣೆ ಹಬ್ಬ ಆಯೋಜಿಸಲಾಗಿದೆ ಎಂದು ಗೌಡ ಯುವ ವೇದಿಕೆ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ೧೦ ಕುಟುಂಬ ೧೮ ಗೋತ್ರದ ಅರೆಭಾಷೆ ಗೌಡ ಜನಾಂಗದ ಪುರುಷರಿಗಾಗಿ ೮ ಕಿ.ಮೀ., ಮಹಿಳಾ ಮತ್ತು ಮಕ್ಕಳಿಗೆ ೪ ಕಿ.ಮೀ. ಕ್ರಾಸ್ ಕಂಟ್ರಿ ಓಟ ಆಯೋಜಿಸಲಾಗಿದ್ದು, ೮ ಗೌಡ ಮನೆತನದ ಐನ್ಮನೆಗಳನ್ನು ದಾಟಿಕೊಂಡು ಈ ಓಟ ನಡೆಯುವುದು ವಿಶೇಷವಾಗಿದೆ. ಇದರೊಂದಿಗೆ ಪಾಯಿಂಟ್ ೨೨, ೧೨ ಬೋರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆ ಸೇರಿದಂತೆ ಗಾಳಿಬೀಡು ಗ್ರಾಮಸ್ಥರಿಗಾಗಿ ೧೨ ಬೋರ್ ಶೂಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಆಕರ್ಷಕ ನಗದು ಜೊತೆಗೆ ಟ್ರೋಫಿ ನೀಡಲಾಗುವುದು ಎಂದರು.
ಹೆಚ್ಚಿನ ಮಾಹಿತಿಗೆ ೯೯೭೨೩೭೬೧೫೧, ೯೪೪೯೯೫೨೦೦೮ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಿದರು.
ಗೌಡ ಯುವ ವೇದಿಕೆ ನಿರ್ದೇಶಕ ದೇರಳ ನವೀನ್ ಮಾತನಾಡಿ, ಗಾಳಿಬೀಡು ಗ್ರಾಮಸ್ಥರ ಸಹಕಾರದಿಂದ ಇದೇ ಮೊದಲ ಬಾರಿಗೆ ಬಾಣೆ ನಮ್ಮೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಪರ್ಧೆಯ ನಂತರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಬಾಳಾಡಿ ಮನೋಜ್, ನಿರ್ದೇಶಕ ಕೊಂಬಾರನ ರಂಜು, ಗಾಳಿಬೀಡು ಗ್ರಾಮಸ್ಥ ಯಾಲದಾಳು ನಿತಿನ್ ಹಾಜರಿದ್ದರು.