ಮಡಿಕೇರಿ, ನ. ೨೩: ಯಾವುದೇ ವ್ಯಕ್ತಿ, ಜಾತಿ, ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ನಿಂದನೆ ಮಾಡುವುದು ಅಪರಾಧವಾಗಿದ್ದು, ಅಂತಹ ಪ್ರಕರಣಗಳ ಬಗ್ಗೆ ಗಮನಕ್ಕೆ ಬಂದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.

ದೇಶ ಕಂಡ ಅಪ್ರತಿಮ ಸೇನಾನಿಗಳಾದ ಫೀ.ಮಾ. ಕೆ.ಎಂ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ಅವರುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ಹರಿಯಬಿಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಪ್ತಸಾಗರ ಎಂಬ ವಾಟ್ಸಾ ್ಯಪ್ ಗ್ರೂಪ್‌ನಲ್ಲಿ ಶ್ರೀವತ್ಸ ಭಟ್ ಎಂಬ ಹೆಸರಿನಲ್ಲಿ ದೇಶದ ಮಹಾನ್ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಬಗ್ಗೆ ಕೆಟ್ಟ ಪದಗಳಿಂದ ನಿಂದನೆ ಮಾಡಿ ಸಂದೇಶವನ್ನು ಹರಿಯಬಿಡಲಾಗಿತ್ತು. ಈ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡ ಸುಂಟಿಕೊಪ್ಪ ಠಾಣಾ ಪೊಲೀಸರ ತಂಡ ತನಿಖೆ ಕೈಗೊಂಡಾಗ ಸಂದೇಶ ರವಾನಿಸಿರುವ ಮೊಬೈಲ್ ಸಿಂ ಕಾರ್ಡ್ ಸುಜಾತ ಎಂಬವರ ಹೆಸರಿನಲ್ಲಿರುವುದು ಪತ್ತೆಯಾಗಿದೆ. ಸುಜಾತ ಅವರನ್ನು ವಿಚಾರಿಸಿದಾಗ ಅವರು ವಕೀಲರಾಗಿದ್ದು, ಅವರ ಹಿರಿಯ ವಕೀಲರಾಗಿರುವ ಕೆ.ಆರ್. ವಿದ್ಯಾಧರ ಅವರು ಸಿಂ ಖರೀದಿಸಿರುವುದಾಗಿ ಮಾಹಿತಿ ನೀಡಿದರು ಎಂದು ತಿಳಿಸಿದರು.

ಬಂಧನ - ಜಾಮೀನು

ಸುಳಿವು ದೊರೆತ ಬಳಿಕ ಮೂಲತಃ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನಿವಾಸಿ, ಮಡಿಕೇರಿಯಲ್ಲಿ ವಕೀಲಿ ವೃತ್ತಿಯಲ್ಲಿರುವ ಕೆ.ಆರ್. ವಿದ್ಯಾಧರ ಗೌಡ (೬೬) ಎಂಬವರನ್ನು ವಿಚಾರಿಸಿದ ಮೇರೆಗೆ ಅವರೇ ಕಚೇರಿಗೆ ಆಗಮಿಸಿ ವಿವರಣೆ ನೀಡಿದರು. ತಾವೇ ಸಂದೇಶ ಕಳುಹಿಸಿರುವ ಬಗ್ಗೆ ತಪ್ಪೊಪ್ಪಿಕೊಂಡ ಬಳಿಕ ಕಾನೂನು ರೀತಿಯಡಿ ಅವರನ್ನು ಬಂಧಿಸಿ ನಿನ್ನೆ ರಾತ್ರಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು. ವಿದ್ಯಾಧರ ವಕೀಲರಾಗಿರುವುದರಿಂದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಕೀಲರ ಸಂಘಕ್ಕೆ ವಿಷಯ ತಿಳಿಸಿದ ಮೇರೆಗೆ ಸಂಘದ ಪದಾಧಿಕಾರಿಗಳು ಆಗಮಿಸಿ, ವಿದ್ಯಾಧರ ಅವರನ್ನು ಜಾಮೀನಿನ ಆಧಾರದಲ್ಲಿ ಬಿಡುಗಡೆಗೊಳಿಸಿದ್ದಾರೆ ಎಂದು ಎಸ್.ಪಿ. ತಿಳಿಸಿದರು.

ಸಂಘರ್ಷದ ವಿರುದ್ಧ ಕ್ರಮ

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ

(ಮೊದಲ ಪುಟದಿಂದ) ಅಭಿಪ್ರಾಯ, ಸಂದೇಶಗಳನ್ನು ಹಂಚಿಕೊಳ್ಳಲು ಎಲ್ಲರಿಗೂ ಮುಕ್ತ ಸ್ವಾತಂತ್ರö್ಯವಿದೆ. ಆದರೆ, ಯಾವುದೇ ವ್ಯಕ್ತಿ, ಜಾತಿ, ಸಮುದಾಯದ ಬಗ್ಗೆ ಅವಾಚ್ಯ ಪದಗಳಿಂದ ನಿಂದಿಸುವAತಿಲ್ಲ; ಈ ಬಗ್ಗೆ ಗ್ರೂಪ್‌ನ ಅಡ್ಮಿನ್‌ಗಳು ಗಮನಹರಿಸಬೇಕು. ಯಾವುದೇ ಸಮುದಾಯದ ನಡುವೆ ಸಂಘರ್ಷ ಏರ್ಪಡುವಂತಹ ಸಂದೇಶಗಳನ್ನು ಕಳುಹಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾರ್ಯಪ್ಪ ಹಾಗೂ ತಿಮ್ಮಯ್ಯ ಅವರುಗಳು ವಿಶ್ವದಲ್ಲೇ ಗೌರವಯುತ ಸ್ಥಾನ ಹೊಂದಿರುವವರು, ಅವರ ವಿರುದ್ಧ ಅವಹೇಳನಕಾರಿ ಸಂದೇಶ ಹಂಚಿಕೊAಡಿರುವ ವಕೀಲ ವಿದ್ಯಾಧರ ವಿರುದ್ಧ ತನಿಖೆ ಮುಂದುವರಿಯಲಿದೆ. ನ್ಯಾಯಾಲಯ ಕಾನೂನು ರೀತಿಯಡಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಇಂತಹ ಅಪರಾಧಗಳಿಗೆ ೫ರಿಂದ ೭ ವರ್ಷಗಳ ಕಾಲ ಶಿಕ್ಷೆಯಾಗುವ ಸಾಧ್ಯತೆಯಿದೆ. ಸಪ್ತಸಾಗರ ವಾಟ್ಸಾ ್ಯಪ್ ಗ್ರೂಪ್‌ನಲ್ಲಿ ೨೦ ಮಂದಿ ಅಡ್ಮಿನ್‌ಗಳಿದ್ದು, ಎಲ್ಲರನ್ನೂ ವಿಚಾರಣೆ ಮಾಡಲಾಗುವುದು. ಯಾವ ಉದ್ದೇಶಕ್ಕಾಗಿ ಈ ರೀತಿಯ ಸಂದೇಶ ಕಳುಹಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು. ಇದಲ್ಲದೆ, ಮಡಿಕೇರಿಯ ಈರ್ವರು ಯುವತಿಯರ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಸಂದೇಶ ಕಳುಹಿಸಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುವುದೆಂದು ಹೇಳಿದರು.

ವಿದ್ಯಾಧರ ಅವರ ಪ್ರಕರಣಕ್ಕೆ ಸಂಬAಧಿಸಿದAತೆ ಮೊದಲು ಸುಳಿವು ದೊರೆತ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಅರ್.ವಿ. ಗಂಗಾಧರಪ್ಪ, ಕುಶಾಲನಗರದ ವೃತ್ತನಿರೀಕ್ಷಕ ಕೆ. ರಾಜೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಹೆಚ್.ಬಿ. ಚಂದ್ರಶೇಖರ್, ಅಪರಾಧ ಪತ್ತೆದಳದ ಸಿಬ್ಬಂದಿಗಳು, ತಾಂತ್ರಿಕ ಸಿಬ್ಬಂದಿಗಳು ಪಾಲ್ಗೊಂಡಿದ್ದುದಾಗಿ ಎಸ್.ಪಿ. ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜ್ ಇದ್ದರು.