ಸುಂಟಿಕೊಪ್ಪ, ನ.೨೪ : ಯಾವುದೇ ಮಹನೀಯರ ಜೀವನ ಚರಿತ್ರೆಯನ್ನು ಮಕ್ಕಳು ಓದಿ ಅವರಂತೆ ಆಗಬೇಕು ಎನ್ನುವದಕ್ಕಿಂತ ಮೊದಲು ಮಾತನಾಡುವ ಮಹನೀಯರು ತಮ್ಮ ಜೀವನದಲ್ಲಿ ಎಷ್ಟರ ಮಟ್ಟಿಗೆ ಮಹನೀಯರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕೆಂದು ರಾಜ್ಯ ಒಕ್ಕಲಿಗರ ಸಂಘದ ಕೊಡಗು ಪ್ರತಿನಿಧಿ ಮತ್ತು ಕಾರ್ಯದರ್ಶಿ ಆಗಿರುವ ಹರಪಳ್ಳಿ ರವೀಂದ್ರ ಹೇಳಿದ್ದಾರೆ.

ಇಲ್ಲಿಗೆ ಸಮೀಪದ ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಲಾಭಿವೃದ್ಧಿಗೆ ರೂ ೩ ಲಕ್ಷ ದೇಣಿಗೆ ನೀಡಿ ಅವರು ಮಾತನಾಡಿದರು.

ಜೀವನದಲ್ಲಿ ಏನೇ ಕಷ್ಟ ನಷ್ಟಗಳು ಸವಾಲುಗಳು ಎದುರಾದರೂ ಹೆದರಬಾರದು ಧೈರ್ಯದಿಂದ ಎದುರಿಸಿ ಮುನ್ನುಗಬೇಕು. ವಿದ್ಯಾಭ್ಯಾಸದಲ್ಲಿ ಶೇ೧೦೦ ಅಂಕಗಳನ್ನು ತೆಗೆಯುವ ಜೋತೆಗೆ ಜೀವನದಲ್ಲೂ ಶೇ.೧೦೦ ರಷ್ಟು ಸಾಧನೆ ಮಾಡಿ ಗೆಲ್ಲಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಾಲಾ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂಎಸ್. ಸುರೇಶ್ ಚಂಗಪ್ಪ, ಮಾಜಿ ಸೈನಿಕ ಪಿ.ಎಸ್.ಲಕ್ಷಿö್ಮÃನಾರಾಯಣ ಮಾತನಾಡಿದರು. ವೇದಕೆಯಲ್ಲಿ ಖಾಸಿಂ, ಬಸಪ್ಪ ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಎಸ್.ಇಂದಿರಾ ಹಾಗೂ ಶಾಲಾ ಶಿಕ್ಷಕ ವೃಂದದವರು ಇದ್ದರು. ಕಾರ್ಯಕ್ರಮದ ಮೊದಲಿಗೆ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಎಸ್. ಇಂದಿರಾ ಸ್ವಾಗತಿಸಿ, ಸಹಶಿಕ್ಷಕ ಗುರ್ಕಿ ನಿರೂಪಿಸಿ, ವಂದಿಸಿದರು.