ಮಡಿಕೇರಿ, ನ. ೨೪: ಹೊಸ್ಕೇರಿ ಬೆಟ್ಟ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಕಾರ್ಯಕ್ರಮವು ನೆರವೇರಿತು. ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಕವಿತಾ ಬಡುವಂಡ್ರ, ಉಪಾಧ್ಯಕ್ಷರು ಚಿದಂಬರ ಎಂ ಬಿ, ಸದಸ್ಯರಾದ ಬಿ ವೈ ಪ್ರಭುಶೇಖರ್, ಉಷಾ ತಂಗಮ್ಮ, ಜೆ. ಪಾರ್ವತಿ, ಗ್ರಾಮ ಪಂಚಾಯಿತಿಯ ಪಿಡಿಓ ಎ.ಎ. ಅಬ್ದುಲ, ಆರೋಗ್ಯ ಕಾರ್ಯಕರ್ತೆ ಯರಾದ ಬಿ.ಎಂ. ಕುಸುಮ, ಸಮುದಾಯ ಆರೋಗ್ಯ ಕೇಂದ್ರದ ಶ್ರೀಜ, ಆಶಾ ಕಾರ್ಯಕರ್ತೆ ಜಯ, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಯತಿಕುಮಾರಿ, ಸದಸ್ಯರು ಪೊನ್ನಮ್ಮ, ವನಿತ, ಮಮತ ಬೋಜಿ, ರಮೇಶ, ನೇತ್ರ, ಮಕ್ಕಳ ಪೋಷಕರು ಹಾಜರಿದ್ದರು.

ಪಿಡಿಓ ಅವರು ಜವಾಹರ್ ಲಾಲ್ ನೆಹರು ಬಗ್ಗೆ ಪೂರ್ಣ ಜೀವನ ಚರಿತ್ರೆ, ಅವರು ನಡೆದ ರೀತಿ, ಅವರು ಮಕ್ಕಳ ಮೇಲೆ ಇಟ್ಟ ಪ್ರೀತಿ ಹೇಗೆ ಎಂಬುದನ್ನು ವಿವರವಾಗಿ ತಿಳಿಸಿದರು.

ಕವಿತಾ, ಮತ್ತು ಕುಸುಮ ಅವರು ಮಕ್ಕಳ ಚಟುವಟಿಕೆ ಬಗ್ಗೆ ನೆಹರು ಬಗ್ಗೆ ತಿಳಿಸಿದರು. ಮಕ್ಕಳಿಗೆ ಆಟೋಟ ಸ್ಪರ್ಧೆಯಲ್ಲಿ ಕಪ್ಪೆ ಹಾರುವುದು, ಕಾಳು ಹೆಕ್ಕುವುದು ಮತ್ತು ಓಟದ ಸ್ಪರ್ಧೆ ಹಾಗೆ ಸಾಂಸ್ಕೃತಿಕ ಕಾರ್ಯಕ್ರಮವು ಮಕ್ಕಳಿಂದ ನೆರವೇರಿತು.

ಮೇಲ್ವಿಚಾರಕಿ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್ ರವರ ಮಾರ್ಗದರ್ಶನದಂತೆ ಅಂಗನವಾಡಿ ಕಾರ್ಯಕರ್ತೆಯಾದ ಲತಾರವರು, ಸಹಾಯಕಿ ಸುಮಿತ್ರ ರವರು ಪೋಷಕರಲ್ಲಿ ತರಕಾರಿ ಪಾಟ್ ನೀಡಿ ಸಹಕರಿಸಲು ಕೋರಿಕೊಂಡಿದ್ದರ ಫಲವಾಗಿ ಈ ದಿನ ಕೇಂದ್ರದ ೧೫ ಮಕ್ಕಳ ಹೆಸರಿನಲ್ಲಿ ತರಕಾರಿ ಕುಂಡವನ್ನು ಪೋಷಕರು ನೀಡಿರುತ್ತಾರೆ. ಮಕ್ಕಳಿಗೆ ಬಹುಮಾನ ವಿತರಿಸಿದರು.