ಗೋಣಿಕೊಪ್ಪಲು, ನ. ೨೪: ಪ್ರಾಥಮಿಕ ಶಾಲಾ ಹಂತದಿAದ ಉತ್ತಮ ಶಿಕ್ಷಣ ನೀಡುವ ಮೂಲಕ ಕಾಲೇಜು ಮಟ್ಟದವರೆಗೂ ಬೆಳೆದು ಇದೀಗ ಅಪಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುತ್ತಿರುವ ಗೋಣಿ ಕೊಪ್ಪಲುವಿನ ಲಯನ್ಸ್ ವಿದ್ಯಾ ಸಂಸ್ಥೆಯು ಉತ್ತಮ ಸಾಧನೆಯನ್ನು ಮಾಡುತ್ತಿದೆ. ಸಾಕಷ್ಟು ಪ್ರತಿಭಾ ವಂತರನ್ನು ವರ್ಷಂಪ್ರತಿ ಗುರುತಿಸುವ ಮೂಲಕ ರಾಜ್ಯ ಹಾಗೂ ರಾಷ್ಟçಮಟ್ಟಕ್ಕೆ ಕಳುಹಿಸುತ್ತಿದೆ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಮಾಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಲಯನ್ಸ್ನ ಕೊಡಗು ಜಿಲ್ಲಾ ರಾಜ್ಯಪಾಲರಾದ ಲಯನ್ ಬಿ.ಎಂ.ಭಾರತಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗೋಣಿಕೊಪ್ಪಲುವಿನ ಲಯನ್ಸ್ ವಿದ್ಯಾಸಂಸ್ಥೆಯ ೪೩ನೇ ವಾರ್ಷಿಕೋತ್ಸ ವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಲಯನ್ಸ್ ವಿದ್ಯಾಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಲಯನ್ಸ್ನ ಉದ್ದೇಶವು ಇದೇ ಆಗಿರುವುದರಿಂದ ಸಮಾಜದ ಸಾಮಾಜಿಕ ಕ್ಷೇತ್ರದಲ್ಲಿ ಲಯನ್ಸ್ ಕ್ಲಬ್ ಹಲವು ರೀತಿಯ ಸೇವೆಗಳನ್ನು ನೀಡುತ್ತ ತನ್ನ ಕಾರ್ಯ ಕ್ಷೇತ್ರವನ್ನು ದೇಶ ಹಾಗೂ ವಿದೇಶಗಳಲ್ಲಿ ವಿಸ್ತಾರ ಮಾಡಿದೆ. ವಿದ್ಯಾಕ್ಷೇತ್ರ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿಯೂ ಲಯನ್ಸ್ ಸೇವೆ ನೀಡುತ್ತಿದೆ. ಗೋಣಿ ಕೊಪ್ಪಲುವಿನ ವಿದ್ಯಾ ಸಂಸ್ಥೆಯು ಮತ್ತಷ್ಟು ಪ್ರಗತಿ ಸಾಧಿಸಲಿ ಸಾಕಷ್ಟು ಪ್ರತಿಭೆಗಳಿಗೆ ಉತ್ತಮ ವೇದಿಕೆಗಳು ನಿರ್ಮಾಣವಾಗಲಿ. ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಗೌರವ ನೀಡುವ ಮೂಲಕ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಗುಣಮಟ್ಟದ ಶಿಕ್ಷಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ವಿದ್ವಾನ್, ಶಿಕ್ಷಣ ತಜ್ಞರಾದ ಜಿ.ಎಸ್. ನಟೇಶ್ ಮಾತನಾಡಿ, ಸೇವಾ ಮನೋಭಾವವನ್ನು ಹೊಂದಿರುವ ಲಯನ್ಸ್ ಕ್ಲಬ್ ಉತ್ತಮ ರೀತಿಯಲ್ಲಿ ಸಾಮಾಜಿಕ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆ ನೀಡುತ್ತ ಬಂದಿದೆ. ಮಾಡಿದ ಸೇವೆ ಪ್ರಾಮಾಣಿಕವಾದಲ್ಲಿ ಕೀರ್ತಿ ಹಾಗೂ ಹೆಸರು ಕೂಡ ಬರಲಿದೆ ಎಂಬುವುದಕ್ಕೆ ಲಯನ್ಸ್ ವಿದ್ಯಾಸಂಸ್ಥೆ ನಮ್ಮ ಮುಂದಿರುವ ಉದಾಹರಣೆ. ಮಕ್ಕಳಲ್ಲಿ ಅಡಗಿರುವ ಹಲವಾರು ಪ್ರತಿಭೆಗಳನ್ನು ಹೊರತರುವಲ್ಲಿ ವಿದ್ಯಾ ಸಂಸ್ಥೆಯು ಯಶಸ್ವಿಯಾಗಿದೆ. ಈ ಯಶಸ್ಸಿನ ಹಿಂದೆ ಶಿಕ್ಷಕರ ಪಾತ್ರ ಅಮೂಲ್ಯವಾಗಿದೆ. ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿ ಗಳಲ್ಲಿ ಶಿಸ್ತು ಕಾಣಬಹುದಾಗಿದೆ.
ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡಲ್ಲಿ ತಮ್ಮ ಸಾಧನೆಗೆ ಅನುಕೂಲವಾಗಲಿದೆ. ವೇದಿಕೆಯಲ್ಲಿ ಲಯನ್ಸ್ ಚೇರ್ಮ್ಯಾನ್ ಪಿ.ಎನ್. ಪೆಮ್ಮಯ್ಯ, ವೈಸ್ ಚೇರ್ಮ್ಯಾನ್ ಧನು ಉತ್ತಯ್ಯ, ಟ್ರಸ್ಟಿ ಕಾರ್ಯದರ್ಶಿ ಶರತ್ ದೇವಯ್ಯ, ಟ್ರಸ್ಟಿ ಟ್ರೆಜರರ್ ಡಾ. ಸೂರಜ್ ಉತ್ತಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಟಿ. ಅಪ್ಪಣ್ಣ, ಕಾರ್ಯದರ್ಶಿ ಗಳಾದ ಶ್ರೀಮಂತ್ ಮುತ್ತಣ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಿ.ಬಿ. ಲತ ಬೋಪಣ್ಣ, ಪ್ರೌಢಶಾಲೆಯ ಮುಖ್ಯೋಪಾ ಧ್ಯಾಯಿನಿ ಸಿ.ಎಸ್. ಗಾನ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಪಿ.ಡಿ. ತಂಗಮ್ಮ, ಪಿಡಿಜಿ ಸಿ.ಎ. ಮುತ್ತಣ್ಣ, ಸೇರಿದಂತೆ ವಿದ್ಯಾರ್ಥಿ ಸಂಘದ ನಾಯಕರುಗಳಾದ ಅಧ್ವಿಕ, ಬಿ.ಪಿ. ಪೂಣಚ್ಚ, ಹಾಗೂ ಪ್ರಾಪ್ತಿ ಪೊನ್ನಮ್ಮ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕನ್ನಿಕ, ತೇಜಸ್ ತಿಮ್ಮಯ್ಯ ನಿರೂಪಿಸಿ, ಪಿ.ಎನ್. ಪೆಮ್ಮಯ್ಯ ಸ್ವಾಗತಿಸಿ, ಎನ್.ಎಸ್. ಲಿಖಿನ್ ವಂದಿಸಿದರು. ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳನ್ನು ಮುಖ್ಯ ರಸ್ತೆಯಿಂದ ಬ್ಯಾಂಡ್ ಸೆಟ್ ಮೂಲಕ ವೇದಿಕೆಗೆ ಕರೆ ತರಲಾಯಿತು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್ನ ಆಡಳಿತ ಮಂಡಳಿ ಪದಾಧಿಕಾರಿಗಳು, ವಿದ್ಯಾಸಂಸ್ಥೆಯ ಶಿಕ್ಷಕರು, ಸಿಬ್ಬಂದಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಜಿಲ್ಲಾ ಗವರ್ನರ್ ಎಂ.ಬಿ. ಭಾರತಿ ವಿದ್ಯಾಸಂಸ್ಥೆಗೆ ೨೫ ಸಾವಿರ ಹಣವನ್ನು ವೈಯಕ್ತಿಕವಾಗಿ ನೀಡಿದರು.