ಮದೆನಾಡು, ಏ. ೨೬ : ವೇಗವಾಗಿ ಹೋಗುತ್ತಿದ್ದ ಕಾರೊಂದು ಇಳಿಜಾರಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಬೈಕ್‌ನ ಮೇಲೆ ಮಗುಚಿಕೊಂಡ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಸಂಭವಿಸಿದೆ.

ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ದೀಕ್ಷಿತ್ ಶೆಟ್ಟಿ ಎಂಬಾತ ಚಾಲಿಸುತ್ತಿದ್ದ ಟೊಯೋಟಾ ಫಾರ್ಚುನರ್ ಕಾರ್ ದೇವರಕೊಲ್ಲಿ ಬಳಿಯ ತಿರುವಿನಲ್ಲಿ ಚಾಲಕನ ನಿಯಂ ತ್ರಣ ಕಳೆದುಕೊಂಡು ಎದುರುಗಡೆ ಯಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಚೇರಂಬಾಣೆ ನಿವಾಸಿ ಮಂಜುನಾಥ್ ರೈ ಎಂಬವರು ಚಾಲಿಸುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿ ಅದರ ಮೇಲೆ ಮಗುಚಿ ಕೊಂಡಿದೆ. ಪರಿಣಾಮ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಫಾರ್ಚುನರ್ ಕಾರ್ ಅಪ್ಪಚ್ಚಿಯಾಗಿದ್ದು, ಬೈಕ್ ಪುಡಿಯಾಗಿದೆ. ಪ್ರಕರಣದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖ ಲಾಗಿದೆ. -ಇಬ್ರಾಹಿಂ ಗಂಗವಲ್ಲಿ