ಶನಿವಾರಸಂತೆ, ಏ.೨೩ ಸಮೀಪದ ಕೊಡ್ಲಿಪೇಟೆಯಲ್ಲಿ ಜೆಡಿಎಸ್ ಹೋಬಳಿ ಘಟಕದ ವತಿಯಿಂದ ಘಟಕದ ಅಧ್ಯಕ್ಷ ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ೨ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಯದುವೀರ್ ಒಡೆಯರ ಗೆಲುವಿಗೆ ಶ್ರಮಿಸಲು ತೀರ್ಮಾನಿಸಲಾಯಿತು. ಜೆಡಿಎಸ್ ಪಕ್ಷದ ಬಲವರ್ಧನೆ ಮತ್ತು ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಿ ಎರಡೂ ಪಕ್ಷಗಳ ಹೋದಾಣಿಕೆಯನ್ನು ಯಶಸ್ವಿಗೊಳಿಸಿ ಗೆಲುವಿನ ಪತಾಕೆ ಹಾರಿಸಲು ಕಾರ್ಯಕರ್ತರು ಸಿದ್ದರಿರಬೇಕು ಎಂದು ಕರೆ ನೀಡಲಾಯಿತು. ಜಿಲ್ಲಾ ಕೋರ್ ಕಮಿಟಿ ಅಧ್ಯಕ್ಷ ಡಿ.ಎನ್. ವಸಂತ್, ಮುಖಂಡರಾದ ಡಿ.ಬಿ. ವಿಜಯ್, ರಾಜೇಶ್, ಯೋಗಾನಂದ್, ಕೂಡ್ಲೂರು ದೇವರಾಜ್, ಚಂದ್ರ, ಜಯರಾಜ್, ಕಾಳಯ್ಯ, ಪ್ರಶಾಂತ್, ಇಸ್ಮಾಯಿಲ್, ದೇವಪ್ಪ, ದೇವರಾಜ್ ಗೌಡ, ಗಂಗರಾಜ್, ತಮ್ಮಯ್ಯ, ನಾಗ ಇತರರು ಹಾಜರಿದ್ದರು.