ಕುಶಾಲನಗರ, ಏ.೨೩: ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಜಂಟಿಯಾಗಿ ಕೊಡಗು-ಮೈಸೂರು ಲೋಕಸಭಾ ಅಭ್ಯರ್ಥಿ ಯದುವೀರ್ ಪರ ಮತ ಪ್ರಚಾರ ಕಾರ್ಯ ನಡೆಯಿತು.

ಬೈಚನಹಳ್ಳಿ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

ನಗರ ಬಿಜೆಪಿ ಘಟಕದ ಅಧ್ಯಕ್ಷ ಎಂ.ಎA. ಚರಣ್ ಮಾತನಾಡಿ, ದೇಶದ ಪ್ರಜೆಗಳನ್ನು ತನ್ನ ಪರಿವಾರದಂತೆ ಕಾಣುವ, ದಿನದಲ್ಲಿ ೧೫ ಗಂಟೆ ಕೆಲಸ ನಿರ್ವಹಿಸುವ ಮೋದಿಯಂತಹ ವ್ಯಕ್ತಿ ಮತ್ತೆ ಪ್ರಧಾನಿಯಾಗಬೇಕು. ಅದಕ್ಕಾಗಿ ಮಿತ್ರ ಪಕ್ಷದೊಡನೆ ಮಹಾ ಪ್ರಚಾರ ಅಭಿಯಾನ ಆರಂಭಿಸಲಾಗಿದೆ. ಈ ಕ್ಷೇತ್ರದ ಅಭ್ಯರ್ಥಿ ಯದುವೀರ್ ಅವರು ಪ್ರಜೆಗಳ ಸೇವೆಗೆ ಹೆಸರಾದ ರಾಜಮನೆತನದವರಾಗಿದ್ದು ಅವರ ಗೆಲುವು ಕೂಡ ಅಗತ್ಯವಿದೆ ಎಂದರು.

ನಗರ ಜೆಡಿಎಸ್ ಅಧ್ಯಕ್ಷ ಚಂದ್ರು ಮಾತನಾಡಿ ಜನಪರ ಯೋಜನೆ, ಅಭಿವೃದ್ದಿಗಳಿಂದ ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದಂತಹ ಪ್ರಬುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎಂದರು.

ಈ ಸಂದರ್ಭ ಪುರಸಭಾ ಸದಸ್ಯ ಅಮೃತ್ ರಾಜ್, ಬಿಜೆಪಿ ಜೆಡಿಎಸ್ ಪಕ್ಷದ ಪ್ರಮುಖರಾದ ಗೌತಮ್, ಬಿ.ಎಲ್.ಜಗದೀಶ್, ಎಂ.ಡಿ.ಕೃಷ್ಣಪ್ಪ, ಎಚ್.ಎಸ್.ಅಶೋಕ್, ಮಧು ಸೂದನ್, ಎಂ.ಬಿ.ಸುರೇಶ್, ಪುಂಡರೀಕಾಕ್ಷ, ಗಣಪತಿ, ಶಿವಕುಮಾರ್, ಚಿಣ್ಣಪ್ಪ, ಸರಳ, ಮತ್ತಿತರರು ಭಾಗವಹಿಸಿದ್ದರು.