ಸಿದ್ದಾಪುರ, ಏ. ೨೩: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೆಕಂಡಿ ಹಾಡಿಯಲ್ಲಿ ನಿನ್ನೆ ಸಂಜೆ ಗಾಳಿ - ಮಳೆಗೆ ಬೃಹತ್ ಗಾತ್ರದ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ದಿಢೀರ್ ಸುರಿದ ಮಳೆಗೆ ಹಾಗೂ ಗಾಳಿಗೆ ಸಿಲುಕಿ ಕಾರೆಕಂಡಿ ಹಾಡಿಯ ನಿವಾಸಿ ಸೋಮ ಎಂಬವರ ಮನೆಯ ಮೇಲೆ ಮರಬಿದ್ದ ಪರಿಣಾಮ ಸೋಮ ಅವರ ಪತ್ನಿ ಬೋಜಮ್ಮ ಎಂಬವರ ತಲೆ, ಬೆನ್ನು ಹಾಗೂ ಕತ್ತಿನ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೆ ಸೋಮ ಅವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರು, ಸ್ಕೂಟಿ, ಆಟೋರಿಕ್ಷಾಗಳು ಕೂಡ ಮರ ಬಿದ್ದ ಪರಿಣಾಮ ಜಖಂಗೊAಡಿವೆ.

(ಮೊದಲ ಪುಟದಿಂದ) ಮನೆಗೂ ಹಾನಿಯಾಗಿದೆ ಮನೆಯ ಒಳಗಿದ್ದ ಬೋಜಮ್ಮ ಗಂಭೀರ ಗಾಯಗೊಂಡ ಸಂದರ್ಭ ಕಿರುಚಿಕೊಂಡಿದ್ದರಿAದ ಸ್ಥಳೀಯರು ಆಗಮಿಸಿ ಕೂಡಲೇ ಅವರನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ತಿತಿಮತಿ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೇ ಆದಿವಾಸಿ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. - ವಾಸು