ಮಡಿಕೇರಿ, ಏ. ೧೬ : ಪ್ರಾಮಾಣಿಕವಾಗಿ ಫಲಾನುಭವಿ ಗಳನ್ನು ತಲುಪುವ ಮತ್ತು ಯಾರಿಗೂ ಹೊರೆಯಿಲ್ಲದ ಏಕೈಕ ಗ್ಯಾರಂಟಿಯೆAದರೆ ಅದು “ಮೋದಿ ಗ್ಯಾರಂಟಿ” ಎಂದು ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಹೇಳಿದ್ದಾರೆ.

ನಗರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರ ಪರ ಎರಡನೇ ಹಂತದ ಮನೆ ಮನೆ ಪ್ರಚಾರ ನಡೆಸಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷಗಳ ಬಿಜೆಪಿ ನೇತೃತ್ವದ ಆಡಳಿತದಲ್ಲಿ ದೇಶ ಪ್ರಗತಿ ಪಥದತ್ತ ಸಾಗಿದ್ದು, ಈ ಬಾರಿ ಕೂಡ “ಮೋದಿ ಗ್ಯಾರಂಟಿ”ಗೆ ಬಹುಮತ ಲಭಿಸಲಿದೆ. ಇಡೀ ದೇಶದ ಜನ ಒಪ್ಪುವಂತಹ ಗ್ಯಾರಂಟಿಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ನೀಡಿದ್ದಾರೆ ಎಂದರು.

ಮನೆ ಮನೆ ಪ್ರಚಾರ ಕಾರ್ಯದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಬಿ.ಕೆ.ಅರುಣ್ ಕುಮಾರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ.ಜಗದೀಶ್, ಕವನ್ ಕಾವೇರಪ್ಪ, ಪ್ರಮುಖರಾದ ಸತೀಶ್ ಪೈ, ಜಿಲ್ಲಾ ಬಿಜೆಪಿ ಖಜಾಂಚಿ ಕನ್ನಂಡ ಸಂಪತ್, ನಗರಸಭೆಯ ಬಿಜೆಪಿ ಸದಸ್ಯರುಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.