ಮಡಿಕೇರಿ, ಡಿ. ೨೭ : ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ೩೦ನೇ ವಾರ್ಷಿಕ ಮಹಾಸಭೆಯು ನಗರದ ಬಾಲಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಸಂಘದ ಕಾನೂನುಸಲಹೆಗಾರ ಅಚ್ಚಾಂಡಿರ ಪವನ್ ಪೆಮ್ಮಯ್ಯ ಮತ್ತು ಮಡಿಕೇರಿ ನಗರ ಸಭೆಯ ಮಾಜಿ ಸದಸ್ಯ ಸತೀಶ್ ಪೈ ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಸಂಘದ ಅಧ್ಯಕ್ಷ ಬಾರಿಕೆ ಜಿ. ಮೋಹನ್, ಉಪಾಧ್ಯಕ್ಷ ಕೆ.ವಿ. ಮಣಿ, ಕಾರ್ಯದರ್ಶಿ ಮಹಮ್ಮದ್ ಆಲಿ, ಖಜಾಂಚಿ ಪಿ.ಡಿ. ಚಂದ್ರ ಮತ್ತು ಗೌರವ ಅಧ್ಯಕ್ಷ ತಿಮ್ಮಣ್ಣ ರೈ ಹಾಗೂ ಸದಸ್ಯರು ಹಾಜರಿದ್ದರು. ಸದಸ್ಯ ಶ್ರೀನಿವಾಸ್ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಸಂಘದ ನೂತನ ಉಪಾಧ್ಯಕ್ಷರಾಗಿ ವಿನೋದ್ ಅವರನ್ನು ಆಯ್ಕೆ ಮಾಡಲಾಯಿತು.