ನಾಪೋಕ್ಲು, ಡಿ. ೨೭: ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಬೆಂಗಳೂರು ವತಿಯಿಂದ ಕರ್ನಾಟಕ ಪಂಚಾಯತ್ ರಾಜ್ ಹರಿಕಾರ ಅಬ್ದುಲ್ ನಜೀರ್ ಸಾಬ್ ಜನ್ಮದಿನದ ಅಂಗವಾಗಿ ನಜೀರ್ ಸಾಬ್ ಹುಟ್ಟೂರು ಗುಂಡ್ಲುಪೇಟೆಯಲ್ಲಿ ನಡೆದ ಪಂಚಾಯಿತಿ ಸಬಲೀಕರಣ ದಿನಾಚರಣೆ ಸಮಾರಂಭದಲ್ಲಿ ಹೊದ್ದೂರು ಮತ್ತು ಹೊಸ್ಕೇರಿ ಗ್ರಾಮ ಪಂಚಾಯಿತಿ ಪಿಡಿಓ ಆಗಿರುವ ಎ.ಎ. ಅಬ್ದುಲ್ಲ ಅತ್ಯುತ್ತಮ ಪಿಡಿಓ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಸಂದರ್ಭ ೫ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ಮಾಜಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಡಿ.ಆರ್. ಪಾಟೀಲ್, ವೆಂಕಟರಾವ್ ವೈ. ಘೋರ್ಪಡೆ, ಕಾಡಶೆಟ್ಟಹಳ್ಳಿ ಸತೀಶ್, ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಡಾ. ಚಿಕ್ಕಕೋಮಾರಿ ಗೌಡ ದತ್ತಿನಿಧಿ ಅತ್ಯುತ್ತಮ ಪ್ರಶಸ್ತಿಯನ್ನು ಎ.ಎ. ಅಬ್ದುಲ್ಲ ಪಡೆದುಕೊಂಡರು.

ಇವರು ಸಿದ್ದಾಪುರ ಸಮೀಪದ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿಯಾಗಿದ್ದು, ದಿವಂಗತ ಆಲಿಕುಟ್ಟಿ ಹಾಜಿ ಹಾಗೂ ಫಾತಿಮಾ ದಂಪತಿ ಪುತ್ರ.