ಮಡಿಕೇರಿ, ನ. ೧೧: ಬಹುಜನ ಸಮಾಜವಾದಿ ಪಕ್ಷದ ಕೊಡಗು ಜಿಲ್ಲಾ ಸಮಿತಿ ಪುನರ್ ರಚನೆ ಕಾರ್ಯಕ್ರಮ ನಗರದಲ್ಲಿ ನಡೆಯಿತು.

ಜಿಲ್ಲಾ ಸಂಯೋಜಕರಾಗಿ ಕಳ್ಳೀರ ಹರೀಶ್, ಜಯಪ್ಪ ಹಾನಗಲ್, ಜಿಲ್ಲಾಧ್ಯಕ್ಷರಾಗಿ ದಿವಿಲ್ ಕುಮಾರ್, ಉಪಾಧ್ಯಕ್ಷರಾಗಿ ಕಾಶಿ ಹೆಬ್ಬಾಲೆ, ಹರೀಶ್, ಪ್ರಧಾನ ಕಾರ್ಯದರ್ಶಿ ಸಿ.ಬಿ. ದೇವಯ್ಯ, ಖಜಾಂಚಿ ಸರತಂಗಮ್ಮ, ಜಿಲ್ಲಾ ಕಾರ್ಯದರ್ಶಿ ವೇಣು (ಮಡಿಕೇರಿ ಕ್ಷೇತ್ರ), ಅಶೋಕ (ವೀರಾಜಪೇಟೆ ಕ್ಷೇತ್ರ), ಕಚೇರಿ ಕಾರ್ಯದರ್ಶಿ ಪೂವಣ್ಣಿ, ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಗುರುಪ್ರಸಾದ್, ಉಪಾಧ್ಯಕ್ಷ ವೈ.ಕೆ. ಮಣಿ, ನಿಡುಗಣೆ ರಘು ಪ್ರಧಾನ ಕಾರ್ಯದರ್ಶಿ ಧನುಷ್ ಬಹುಜನ ವಿದ್ಯಾರ್ಥಿ ಫೋರ್ಸ್ಗೆ ದರ್ಶನ್, ದಾಸ್ ಅವರುಗಳನ್ನು ನೇಮಿಸಲಾಯಿತು.

ಈ ಸಂದರ್ಭ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಸಂಯೋಜಕರು ಕೃಷ್ಣಮೂರ್ತಿ, ಉಪಾಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ, ಭೀಮ ಪುತ್ರಿ ರೇವತಿರಾಜ್ ಪಾಲ್ಗೊಂಡಿದ್ದರು.