ಮಡಿಕೇರಿ, ನ. ೪: ಮೈಸೂರಿನ ಬಳಿಕ ಕೊಡಗಿನಲ್ಲಿ ಅತ್ಯಂತ ಅದ್ದೂರಿ ಯಾಗಿ ನಡೆಯುವ ದಸರಾದಲ್ಲಿ ಕಲೆ, ಸಂಸ್ಕೃತಿಗಳು ಮಾಯವಾಗುತ್ತ್ತಿವೆ. ಡಿಜೆ, ಪಟಾಕಿಗಳು ಆದ್ಯತೆ ಪಡೆಯುತ್ತಿವೆ, ಮಕ್ಕಳು-ಹಿರಿಯರು ರಸ್ತೆಗೆ ಇಳಿಯದ ಪರಿಸ್ಥಿತಿ ನಿರ್ಮಾಣ ಆಗುತ್ತ್ತಿದೆ. ಈ ಎಲ್ಲಾ ಬದಲಾವಣೆಗಳೊಂದಿಗೆ ಕೊಡಗಿನ ದಸರಾ ಸಂಸ್ಕೃತಿಯ ಪ್ರತೀಕವಾಗಬೇಕು. ವೈಶಿಷ್ಟö್ಯ ಇರಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದರು.

ಇಂದು ಪತ್ರಕರ್ತರೆದುರು ‘ಮಡಿಕೇರಿ ದಸರಾ ಆಚರಣೆಯ ಕುರಿತು ಮನದಾಳದ ಮಾತು’ ಎಂಬ ದೀರ್ಘ ತೆರೆದ ಪತ್ರ ವಿತರಿಸಿದ ಅವರು, ಮಡಿಕೇರಿ ದಸರಾ ಸಂದರ್ಭ ತಾವು ಖುದ್ದಾಗಿ ೨-೩ ಮಂದಿಯನ್ನು ರಕ್ಷಿಸಿದ ಕುರಿತು ನೊಂದು ನುಡಿದರು.

೨೦೦ ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಶಕ್ತಿ ದೇವತೆಗಳ ಕರಗಗಳ ಮೂಲಕ ಆರಂಭಗೊಳ್ಳುವುದು ಒಂದು ವಿಶೇಷ. ಅರಸರ ಕಾಲದಲ್ಲಿ ಮಡಿಕೇರಿ ನಾಡಿಗೆ ಮಾರಕ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಂಡು ಸಾವು-ನೋವು ಸಂಭವಿಸುವುದರೊAದಿಗೆ, ಜನರು ಗುಳೆಹೋಗುವ ಪರಿಸ್ಥಿತಿ ತಲೆ ದೋರಿತ್ತು. ಇದರಿಂದ ಚಿಂತೆಗೀಡಾದ ಅರಸು, ನಾಡಿನ ೪ ಶಕ್ತಿ ದೇವತೆಗಳ ಮೊರೆಹೋಗಿ, ನಾಡಿನ ಜನರನ್ನು ಕಾಪಾಡುವಂತೆ ಬೇಡಿಕೊಂಡಿದ್ದರು ಎಂಬ ಹಿನ್ನೆಲೆಯನ್ನು ಅವರು ಜ್ಞಾಪಿಸಿಕೊಂಡರು.

(ಮೊದಲ ಪುಟದಿಂದ) ಆದರೆ ತಾವು ಅಂದುಕೊAಡ ವೈಭವದ ದಸರಾ ನಡೆಯಲಿಲ್ಲ ಮತ್ತು ನಡೆಯುತ್ತಿಲ್ಲ ಎಂದು ಹೇಳಿದ ಅವರು, ಒಂದಷ್ಟು ಬದಲಾವಣೆ ಇದ್ದರೆ ಮಾತ್ರ ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ಬರುತ್ತದೆ ಎಂದರು. ನಮ್ಮ ಸಂಸ್ಕೃತಿ ಮತ್ತು ಆಚಾರ ವಿಚಾರಗಳು ಪ್ರದರ್ಶಿತವಾಗಬೇಕು. ಸ್ಥಳೀಯ ಪ್ರತಿಭೆಗಳು, ಭಾಷೆ, ಕಲೆಯ ಪ್ರದರ್ಶನ ನಡೆಯಬೇಕು. ಗತಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಶ್ರೀಮಂತ ಸಂಸ್ಕೃತಿಗಳು ದಾರಿತಪ್ಪದೆ, ಮುಂದಿನ ಯುವಪೀಳಿಗೆಗೆ ಮಾದರಿಯಾಗುವಂತಿರಬೇಕು. ಪಾಶ್ಚಾತ್ಯ ಸಂಸ್ಕೃತಿಯನ್ನು ಮಿತವಾಗಿ ಬಳಸಿ ನಮ್ಮ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸೋಣ ಎಂದು ರಾಮರಾಜನ್ ಹೇಳಿದರು.

ಮಡಿಕೇರಿ ದಸರಾ ಎಲ್ಲರ ದಸರಾದಂತಿರಬೇಕು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ರತಿ ವರ್ಷ ದಸರಾವನ್ನು ಆಚರಿಸಲಾಗುತ್ತಿದೆ. ಆದರೆ ದಶಮಂಟಪಗಳ ಶೋಭಾಯಾತ್ರೆಯಂದು ಸಾಮರ್ಥ್ಯ ಇರುವವರು ಮಾತ್ರ ದಸರಾ ನೋಡುವ ಪರಿಸ್ಥಿತಿ ಎದುರಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು ಕುಟುಂಬ ಸಮೇತರಾಗಿ ಬಂದು ದಸರಾದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಯುವಕರು ಮತ್ತು ಗುಂಪಿನಲ್ಲಿ ರಭಸದಿಂದ ನುಗ್ಗಿಕೊಂಡು ಹೋಗುವವರು ಮಾತ್ರ ದಸರಾ ನೋಡುವಂತಾಗಿದೆ ಎಂದು ಎಸ್ಪಿ ವಿಷಾಧಿಸಿದರು.

ಹತ್ತು ದೇವಾಲಯಗಳ ಸಮಿತಿಯವರು ವಿಶೇಷ ರೀತಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಂಟಪವನ್ನು ನಿರ್ಮಿಸುತ್ತಾರೆ. ಸುಂದರವಾದ ಮತ್ತು ಅದ್ಭುತವಾದ ಅರ್ಥಗರ್ಭಿತವಾದ ಮಂಟಪವನ್ನು ನಾನು ಎಲ್ಲೂ ನೋಡಿಲ್ಲ. ಇಂತಹ ಐತಿಹಾಸಿಕ ಕಥಾಸಾರಾಂಶಗಳ ದೃಶ್ಯಗಳನ್ನು ನಾಡಿನ ಎಲ್ಲಾ ಜನರು ನೋಡಬೇಕಾಗಿದೆ. ಮಡಿಕೇರಿ ದಸರಾಗೆ ಕೊನೆಯ ದಿನ ಅಪಾರ ಜನ ಸೇರುತ್ತಾರೆ. ಆದರೆ ಮಂಟಪಗಳ ಕಥಾ ಸಾರಾಂಶವನ್ನು ಕೇವಲ ಶೇ.೫ ರಿಂದ ೮ ರಷ್ಟು ಮಂದಿ ನೋಡುತ್ತಾರೆ ಎಂದು ಅಭಿಪ್ರಾಯಿಸಿದರು.

“ನಾನೂ ಕೂಡ ಹತ್ತು ಮಂಟಪಗಳನ್ನು ನೋಡಬೇಕೆಂದು ಕುತೂಹಲದಿಂದಿದ್ದೆ. ಆದರೆ ನನಗೆ ಎರಡು ಮಂಟಪಗಳನ್ನು ಮಾತ್ರ ನೋಡಲು ಸಾಧ್ಯವಾಯಿತು. ಹತ್ತು ಮಂಟಪಗಳನ್ನು ನೋಡಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು” ಎಂದು ನುಡಿದರು.

ಲಾಠಿಚಾರ್ಜ್: ದಸರಾದಲ್ಲಿ ಜನ ಮಂಟಪದ ಸಮೀಪದಲ್ಲಿ ಓಡಾಡಲೂ ಕೂಡ ಕಷ್ಟದ ಪರಿಸ್ಥಿತಿ ಉಂಟಾಗಿತ್ತು. ನೂಕುನುಗ್ಗಲು ಉಂಟಾಗಿ ಜನರು ಸಮಸ್ಯೆ ಎದುರಿಸಿದ್ದನ್ನು ವೈಯಕ್ತಿಕವಾಗಿ ನಾನು ಕಂಡಿದ್ದೇನೆ. ನಗರ ಪೊಲೀಸ್ ಠಾಣೆಯ ಬಳಿ ಯುವಕ, ಮಹಿಳೆ ಮತ್ತು ಮಗುವೊಂದು ಕೆಳಗೆ ಬಿದ್ದು ಮೇಲೇಳಲಾಗದೆ ಕಷ್ಟ ಪಡುತ್ತಿದ್ದರು. ಈ ಸಂದರ್ಭ ನಾನು ಮತ್ತು ನಮ್ಮ ತಂಡ ಲಘು ಲಾಠಿ ಚಾರ್ಜ್ ಮಾಡಿ ಯುವಕ, ಮಹಿಳೆ ಹಾಗೂ ಮಗುವನ್ನು ರಕ್ಷಣೆ ಮಾಡಿದೆವು. ಸ್ವಲ್ಪ ತಡವಾಗಿದ್ದರೆ ಭಾರಿ ಅನಾಹುತವಾಗುತ್ತಿತ್ತು. ಮಡಿಕೇರಿ ದಸರಾಕ್ಕೂ ಅಳಿಸಲಾಗದ ಕಪುö್ಪಚುಕ್ಕೆಯಾಗುತ್ತಿತ್ತು ಎಂದು ಪರಿಸ್ಥಿತಿಯ ಗಾಂಭೀರ್ಯ ವಿವರಿಸಿದರು.

ಮಂಟಪಗಳಿAದ ೨೦ ನಿಮಿಷ ಕಥಾಸಾರಾಂಶ ಮಾಡಲಾಗುತ್ತದೆ. ಆದರೆ ಜನರ ಓಡಾಟ ಹೆಚ್ಚಾದ ಸಂದರ್ಭ ಉಸಿರಾಟಕ್ಕೂ ತೊಂದರೆಯಾಗುತ್ತದೆ. ಕೆಲವರು ಕಟ್ಟಡ ಮೇಲೆ ಕುಳಿತು ಕೂಡ ನೋಡಿದ್ದಾರೆ. ಈ ಸಂದರ್ಭ ಕೆಲವರ ಮೇಲೆ ಸಿಡಿಮದ್ದು ಹಾರಿದ್ದನ್ನೂ ಗಮನಿಸಿದ್ದೇನೆ ಎಂದು ಎಸ್ಪಿ ವಿವರಿಸಿದರು.

ರಸ್ತೆಗಿಂತ ಅಗಲವಾದ ಮಂಟಪಗಳು: ಮಡಿಕೇರಿ ರಸ್ತೆ ತೀರಾ ಕಿರಿದಾಗಿದೆ. ಆದರೆ ಕೆಲವು ಮಂಟಪಗಳು ರಸ್ತೆಗಿಂತ ದೊಡ್ಡದಾಗಿತ್ತು. ಹೀಗೆ ಮಾಡಿದರೆ ಜನ ಓಡಾಡುವುದು ಹೇಗೆ? ಬಹುಮಾನ ನೀಡುವ ಕಾರಣಕ್ಕಾಗಿ ಎಲ್ಲರೂ ಪೈಪೋಟಿಯಿಂದ ಮಂಟಪಗಳನ್ನು ನಿರ್ಮಿಸುತ್ತಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಂಟಪಗಳ ತಯಾರು ಮಾಡಬೇಕು. ಮಂಟಪವೊAದರ ವಾಹನದ ತೂಕ ಬ್ಯಾಲೆನ್ಸ್ ಆಗದ ಹಿನ್ನೆಲೆಯಲ್ಲಿ ಟ್ಯಾಕ್ಟರ್ ಮಗುಚಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗದಿರುವುದು ನಾಡಿನ ಪುಣ್ಯ. ಈ ಘಟನೆ ನಮಗೆ ಪಾಠವಾಗಬೇಕು ಎಂದರು.

ಹೆಚ್ಚು ಧ್ವನಿವರ್ಧಕ ಬಳಕೆ: ದಸರಾದಲ್ಲಿ ನಿಯಮ ಅನ್ನುವುದಕ್ಕಿಂತ ಅವಶ್ಯಕತೆ ಮೀರಿ ಧ್ವನಿವರ್ಧಕಗಳನ್ನು ಬಳಕೆ ಮಾಡಿದ್ದಾರೆ. ಮಡಿಕೇರಿಯ ಜಿಲ್ಲಾಸ್ಪತ್ರೆಯಿಂದ ಕೆಲವು ರೋಗಿಗಳನ್ನು ದಸರಾ ಹಿನ್ನೆಲೆಯಲ್ಲಿ ಬೇರೆ ಕಡೆ ಸ್ಥಳಾಂತರ ಮಾಡಿರುವುದು ಕೂಡ ನನ್ನ ಗಮನಕ್ಕೆ ಬಂದಿದೆ. ಅಲ್ಲದೆ ನಗರದ ಹಿರಿಯ ನಾಗರಿಕರು ಮನೆಗೆ ಬೀಗ ಹಾಕಿ ಠಾಣೆಗೆ ಮಾಹಿತಿ ನೀಡಿ ಸಂಬAಧಿಕರ ಮನೆಗೂ ತೆರಳಿದ ಉದಾಹರಣೆ ಇದೆ ಎಂದು ವಿವರಿಸಿದರು.

ದಸರಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ, ಅನಾಹುತ ಸಂಭವಿಸದAತೆ ಮದ್ಯಪಾನವನ್ನು ನಿಷೇಧಿಸಲಾಗಿರುತ್ತದೆ. ಆದರೂ ಬಹುತೇಕರು ಇತರ ಕಡೆಗಳಿಂದ ಮದ್ಯವನ್ನು ಸೇವಿಸಿ ದಸರಾಗೆ ಬಂದು ತೊಂದರೆ ಕೊಡುತ್ತಾರೆ. ಮಹಿಳೆಯರ ಹಾಗೂ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪಗಳು ಕೂಡ ಪ್ರತಿವರ್ಷ ಕೇಳಿಬರುತ್ತಿರುವ ಉದಾಹರಣೆಗಳಿವೆ. ಇದರಿಂದ ಹಲವು ಜನರು ಕುಟುಂಬ ಸಮೇತರಾಗಿ ದಸರಾಗೆ ಆಗಮಿಸಲು ಹಿಂದೇಟು ಹಾಕುವುದು ಕಂಡುಬAದಿದೆ ಎಂದು ರಾಮರಾಜನ್ ಹೇಳಿದರು.

ಸ್ಥಳೀಯ ಪ್ರತಿಭೆಗಳಿಗೆ ಅವಕಾಶ : ದಸರಾ ಎಂದರೆ ನಮ್ಮ ಹಬ್ಬ ಆಗಬೇಕು. ನಮ್ಮ ನಾಡಿನ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು. `ನಮ್ಮದೇ ಸಂಸ್ಕöÈತಿಯನ್ನು ಬಿಂಬಿಸುವ ಹಲವು ವಾದ್ಯಗಳು, ಸಂಗೀತಗಳು ಇಲ್ಲಿವೆ. ಅದನ್ನು ನಂಬಿ, ಗೌರವಿಸಿ ಬದುಕುವ ಹಲವು ಕಲಾಕುಟುಂಬಗಳು ನಮ್ಮಲ್ಲಿವೆ, ನಾವು ನಮ್ಮ ಸ್ಥಳೀಯ ವೇದಿಕೆಗಳಲ್ಲಿ ಇಂತಹ ಹಬ್ಬಗಳಲ್ಲಿ ಅವಕಾಶ ನೀಡದೆ ಹೋದಲ್ಲಿ, ನಮ್ಮ ಆಚಾರ ವಿಚಾರ ಮತ್ತು ಸಂಸ್ಕöÈತಿಯನ್ನು ನಾವೇ ನಾಶ ಮಾಡಿದಂತಾಗುತ್ತದೆ. ಅಲ್ಲದೆ ಅದನ್ನು ನಂಬಿದವರಿಗೂ ಅವಕಾಶವಿಲ್ಲದಂತಾ ಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ ಏನು ಪರಿಹಾರ?

ಈ ಹಿಂದೆ ಮಡಿಕೇರಿ ದಸರಾದಲ್ಲಿ ಹತ್ತು ಮಂಟಪಗಳನ್ನೂ ಕೂಡ ಒಂದೇ ಮಾರ್ಗದಲ್ಲಿ ನಿಂತು ನೋಡುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಒಂದೆಡೆ ಕುಳಿತು ಮಂಟಪಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ, ಜನರೇ ಮಂಟಪವಿರುವ ಕಡೆ ನೂಕುನುಗ್ಗಲಿನ ಮಧ್ಯೆ ಹೋಗಿ ನೋಡಬೇಕಾಗಿದೆ. ದಸರಾ ದೊಡ್ಡ ಉತ್ಸವ ಆಗಿರುವುದರಿಂದ ದೊಡ್ಡ ಮೈದಾನವನ್ನು ಗುರುತಿಸಬೇಕು. ಎಲ್ಲರೂ ಕೂಡ ವ್ಯವಸ್ಥಿತವಾಗಿ ಕುಳಿತು, ಮಂಟಪಗಳನ್ನು ಕಣ್ತುಂಬಿಸಿಕೊಳ್ಳುವAತೆ ಮಾಡಬೇಕು, ಯುವಕರು ಮಾತ್ರವಲ್ಲದೆ ಎಲ್ಲಾ ವಯೋಮಾನದವರು ವೀಕ್ಷಿಸುವಂತಿರಬೇಕು. ಮಡಿಕೇರಿ ದಸರಾದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ರಕ್ಷಣೆ ಇದೆ ಎಂಬ ಮನೋಭಾವನೆ ಎಲ್ಲರಲ್ಲೂ ಮೂಡುವಂತಾಗಬೇಕು. ದಸರಾ ಸಂದರ್ಭದಲ್ಲಿ ಮೂಲಸೌಕರ್ಯ ವ್ಯವಸ್ಥೆ ಮಾಡಬೇಕು, ಯಾವುದೇ ಭೀತಿ ಇಲ್ಲದೆ ದಸರಾವನ್ನು ಜನರು ವೀಕ್ಷಣೆ ಮಾಡುವಂತಿರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಎಸ್ಪಿ ರಾಮರಾಜನ್ ಅಂತರಾ ಳದ ನುಡಿಗಳನ್ನು ಆಡಿದ್ದಾರೆ.